ಶುಕ್ರವಾರ, ಸೆಪ್ಟೆಂಬರ್ 8, 2023

ಜೈ ಜವಾನ್‌ ಜೈ ಕಿಸಾನ್ ಎನ್ನುವ ಹೈವೋಲ್ಟೇಜ್ ಸಿನಿಮಾ ಜವಾನ್

"ಜವಾನ್"‌ ವಿಮರ್ಶೆ

  

ಪಠಾಣ್ ಸಿನಿಮಾದ ಯಶಸ್ಸಿನ ಬೆನ್ನಿಗೇ ಬಿಡುಗಡೆಯಾಗಿರುವ ಬಾಲಿವುಡ್ ಬಾದ್ ಶಾ ಎಂದೇ ಖ್ಯಾತರಾದ ಶಾರುಖ್ ಖಾನ್ ಅವರ ನಟನೆಯ ಸಿನಿಮಾ ʼಜವಾನ್ʼ ದೇಶದ ಹಲವು ಸಾಮಾಜಿಕ ಸಮಸ್ಯೆಗಳನ್ನು ತೋರಿಸುತ್ತಲೇ ಜೈ ಜವಾನ್ ಜೈ ಕಿಸಾನ್ ಎಂಬ ಸಂದೇಶವನ್ನು ಸೂಕ್ಷ್ಮವಾಗಿ ನೋಡುಗನಿಗೆ ರವಾನಿಸುತ್ತದೆ. ಮನರಂಜನೆಯ ನೆಪದಲ್ಲಿ ದೇಶದ ಚುನಾವಣೆಯ ಮಹತ್ವವನ್ನು ಕೂಡ ಎತ್ತಿ ಹಿಡಿಯುತ್ತದೆ. ದ್ವಿಪಾತ್ರದಲ್ಲಿ ಶಾರುಖ್‌ ಲೀಲಾಜಾಲವಾಗಿ ಅಭಿನಯಿಸಿದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಾರೆ. ಎರಡು ತಲೆಮಾರಿಗೂ ವಿಲನ್ ಆಗಿ ವಿಜಯ್ ಸೇತುಪತಿ ಶಾರುಖ್‌ ಖಾನಿಗೆ ಸಮನಾಗಿ ಅಭಿನಯಿಸಿದ್ದಾರೆ. ನಾಯಕಿಯರಾಗಿ ದಿಪೀಕಾ ಪಡುಕೋಣೆ ಮತ್ತು ನಯನತಾರ ಹಾಗೂ ಉಳಿದ ಪೋಷಕ ಪಾತ್ರಗಳು ಕೂಡ ಗಮನ ಸೆಳೆಯುತ್ತವೆ. ಅಟ್ಲಿ ಅವರು ರಚಿಸಿ-ನಿರ್ದೇಶಿಸಿರುವ “ಜವಾನ್”‌ ಒಂದು ಹೈವೋಲ್ಟೇಜ್ ಸಿನಿಮಾವಾಗಿ ಪ್ರೇಕ್ಷಕನಿಗೆ ರಂಜಿಸುವುದರ ಜೊತೆಜೊತೆಗೆ ಚಿಂತನೆಗೆ ಹಚ್ಚುತ್ತದೆ. ಶಾರುಖ್‌ ಖಾನ್‌ ಮತ್ತು ವಿಜಯ್‌ ಸೇತುಪತಿ  ಅಭಿಮಾನಿಗಳಿಗೆ ಹಬ್ಬವಿದೆ. 



ಭಾನುವಾರ, ಸೆಪ್ಟೆಂಬರ್ 3, 2023

ಓದಿದ್ದೀರ ಡಾ. ಎಸ್.‌ ಎಲ್‌. ಭೈರಪ್ಪನವರ ʼಯಾನʼ?

 ಪ್ರಿಯ ಸ್ನೇಹಿತರೇ,

ನಮ್ಮ ಭಾರತ ದೇಶದ ʼಚಂದ್ರಯಾನ-3ʼ ಯಶಸ್ವಿಯಾಗಿ, ಇದೀಗ ಸೂರ್ಯಯಾನವೂ ಉಡಾವಣೆ ಆಗಿದೆ. ಈ ಹೊತ್ತಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಬಾಹ್ಯಾಕಾಶವನ್ನೇ ಮುಖ್ಯ ವಸ್ತುವನ್ನಾಗಿಸಿಕೊಂಡು ಯಾವುದಾದರೂ ಸೃಜನಶೀಲ ಕೃತಿಗಳು ಪ್ರಕಟವಾಗಿವೆಯೇ ಎಂದು ಆಲೋಚಿಸಿದಾಗ ತಕ್ಷಣ ನೆನಪಿಗೆ ಬರುವುದು ಡಾ.‌ ಎಸ್.ಎಲ್.‌ ಭೈರಪ್ಪನವರ "ಯಾನ” ಕಾದಂಬರಿ. 



ಈ ಕಾದಂಬರಿಯು 2014ರಲ್ಲಿ ಮೊದಲ ಮುದ್ರಣ ಕಂಡಿದ್ದು, ಇದುವರೆವಿಗೂ ನಲ್ವತ್ತಮೂರು ಮುದ್ರಣಗಳನ್ನು ಕಂಡಿದೆ. ಈ ಕಾದಂಬರಿಯನ್ನು ಪ್ರಕಟವಾದ ಸಮಯದಲ್ಲೇ ನಾನು ಓದಿದ್ದು, ಇದೀಗ ನಮ್ಮ ಭಾರತ ದೇಶದ ಬಾಹ್ಯಾಕಾಶ ತಂತ್ರಜ್ಞಾನವನ್ನು ಇಡೀ ವಿಶ್ವವೇ ಬೆರಗಾಗಿ ನೋಡುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ಕೈಯಲ್ಲಿಡಿದು ಕೂತಿದ್ದೇನೆ. 

ನೀವು ಈಗಾಗಲೇ ಓದಿದ್ದರೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ… ಓದಿಲ್ಲವಾದರೇ, ಓದಿ ನಿಮ್ಮ ಅನಿಸಿಕೆ-ಅಭಿಪ್ರಾಯ ತಿಳಿಸಿ… ಜೊತೆಗೆ ಬಾಹ್ಯಾಕಾಶ ಯಾನ ಕುರಿತೇ ಪ್ರಕಟವಾಗಿರುವ ಯಾವುದಾದರೂ ಸೃಜನಶೀಲ ಕೃತಿಗಳು ನಿಮ್ಮ ಗಮನದಲ್ಲಿದ್ದರೆ ತಿಳಿಸಿ…

 

ಡಾ. ಎಸ್.ಎಲ್.‌ ಭೈರಪ್ಪನವರ ʼಯಾನʼ ಕೊಳ್ಳಲು ಅಮೇಜಾನ್‌ ಲಿಂಕ್: https://amzn.to/45PDvmA

 

ಧನ್ಯವಾದಗಳು…

ಯಶಸ್ವಿಯಾಗಿ ಉಡಾವಣೆಯಾದ ʼಆದಿತ್ಯ ಎಲ್‌ 1ʼ 125 ದಿನಗಳ ಕ್ಷಣಗಣನೆ ಆರಂಭ…

 ಪ್ರಿಯ ಸ್ನೇಹಿತರೇ,

ʼಚಂದ್ರಯಾನ 3ʼ ರ ಯಶಸ್ಸಿನ ಬೆನ್ನಲ್ಲೇ ಇಸ್ರೋ ಸೂರ್ಯಾಯಾನ ʼಆದಿತ್ಯ ಎಲ್‌ 1ʼ ಸೋಲಾರ್‌ ಮಿಷನ್‌ ಕೈಗೊಂಡಿದ್ದು, ಇಂದು (02/09/2023) ಯಶಸ್ವಿಯಾಗಿ ಬೆಳಿಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣೆ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ʼಆದಿತ್ಯ-ಎಲ್‌ 1ʼ ಬಾಹ್ಯಾಕಾಶ ನೌಕೆಯನ್ನು ಹೊತ್ತು ಯಶಸ್ವಿಯಾಗಿ ಆಕಾಶಕ್ಕೆ ಜಿಗಿದಿದೆ. ಕೇಂದ್ರ ಸರಕಾರ ಈ ಯೋಜನೆಗಾಗಿ 380 ಕೋಟಿ ರೂಗಳ ಅನುದಾನ ನೀಡಿದ್ದು, ಸೂರ್ಯನ ಮೇಲೆ ಗಮನ ಇಡಲು ಇಸ್ರೋ ನಿಗದಿಪಡಿಸಿರುವ ನ್ಯೂಟನ್‌ ಲಾಂಗ್ರೇಜ್‌ ಪಾಯಿಂಟ್‌ ಎಲ್‌ 1 ತಲುಪಲು 125 ದಿನಗಳ ಸಮಯಾವಕಾಶ ಬೇಕಿದೆ. 

ಇಲ್ಲಿ ನೌಕೆಯಲ್ಲಿ ಕಳಿಸಿರುವ ಬಾಹ್ಯಾಕಾಶ ಆಧಾರಿತ ಭಾರತೀಯ ಪ್ರಯೋಗಾಲಯ ಸ್ಥಾಪಿತವಾಗಲಿದೆ. ಭೂಮಿಯಿಂದ 15 ಲಕ್ಷ ಕಿ.ಮೀ. ದೂರದ ಎಲ್‌1 ಪಾಯಿಂಟಿನಿಂದ ಸೂರ್ಯನ ಅಧ್ಯಯನ ಮಾಡಲು ಭಾರತದ ಚೊಚ್ಚಲ ಸೌರಮಂಡಲ ಸಾಹಸ ಇದಾಗಿದೆ. ಮತ್ತಷ್ಟು ಹತ್ತಿರದಿಂದ ಸೂರ್ಯನ ಪ್ರಕ್ರಿಯೆಗಳನ್ನು ಗಮನಿಸುವುದು ನಮ್ಮ ಉದ್ದೇಶವಾಗಿದೆ ಎಂದು ಇಸ್ರೋ ಮುಖ್ಯಸ್ಥರಾದ ಎಸ್.‌ ಸೋಮನಾಥ್‌ ಅವರು ತಿಳಿಸಿದ್ದಾರೆ. ಈ ಯಾನವೂ ಯಶಸ್ವಿಯಾಗಲಿ ಎಂಬುದು ಎಲ್ಲ ಭಾರತೀಯರ ಹಾರೈಕೆ…

ಧನ್ಯವಾದಗಳು…

“ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು…

  ಆತ್ಮೀಯ ಸ್ನೇಹಿತರೇ, “ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು… ನನ್ನ ಅನಿಸಿಕೆಯಯನ್ನು ನನ್ನ ಯೂಟ್ಯೂಬ್‌ ಚಾನೆಲ್ಲಿನಲ್ಲಿ ವೀಕ್ಷಿಸಿ… ಧನ್ಯವಾದಗಳೊಂದಿಗೆ, ಗುಬ್ಬಚ್ಚಿ ...