ಭಾನುವಾರ, ಏಪ್ರಿಲ್ 14, 2024

ಇದು ಭಾರತದ “ಅಮೃತ ಕಾಲ”ವೇ!?

 ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ.

ʼಭಾರತ ಬದಲಾಗಿದೆ! ಯಾರದ್ದೋ ಇಶಾರೆಯ ಮೇಲೆ ಹೆಜ್ಜೆಯಿಡುವ ದೇಶವಾಗಿ ಉಳಿದಿಲ್ಲ. ಭಾರತ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಗಳೆರಡನ್ನೂ ಮಾಡಿಕೊಂಡು ವೈಶ್ಚಿಕ ಮಟ್ಟದಲ್ಲಿ ಪ್ರತಿ ಹಂತದಲ್ಲೂ ಛಾಪು ಮೂಡಿಸುತ್ತಿರುವ ಸುವರ್ಣಯುಗವಿದುʼ ಎನ್ನುವ ರಾಹುಲ್‌ ಅವರು ಭಾರತ ಪ್ರಗತಿಯೆಡೆಗೆ ಸಾಗುತ್ತಿರುವ ಚೈತ್ರಯಾತ್ರೆಯ ಅಕ್ಷರ ರೂಪವೇ ಈ “ಅಮೃತ ಕಾಲ” ಎಂದಿದ್ದಾರೆ.



ರಾಹುಲ್‌ ಅವರು ಈ ಪುಸ್ತಕವನ್ನು ಅಮೃತ ಗುಟುಕುಗಳು ಎಂಬ  ಪರಿವಿಡಿಯಲ್ಲಿ ʼವಿಕಾಸʼ, ʼವನವಾಸಿʼ, ʼವಿಶ್ವಗುರುʼ, ʼವಿಶ್ವಾಸʼ, ʼವಿರೋಧʼ ಮತ್ತು ʼವೈರಾಣುʼ ಎಂಬ ಆರು ಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಒಟ್ಟು 21 ಅಧ್ಯಾಯಗಳ ಈ ಪುಸ್ತಕದಲ್ಲಿ ರಾಹುಲ್‌ ಅವರ ಅಕ್ಷರಗಳು ಶ್ರೀ ನರೇಂದ್ರ ಮೋದಿಯವರು ಭಾರತದ ಪ್ರಧಾನ ಮಂತ್ರಿಗಳಾದ ನಂತರ ಆದ ಹತ್ತು ವರುಷಗಳ ಬೆಳವಣಿಗೆಗಳನ್ನು ದಾಖಲಿಸಿವೆ.

ಉದಾಹರಣೆಗೆ ʼನೂರ ಏಳರ ತಾಕತ್ತು ಈ ಮೊದಲೂ ಇತ್ತು; ಆದರೆ…ʼ ಎಂಬ ಅಧ್ಯಾಯದಲ್ಲಿ ಅಂಕಿಅಂಶಗಳ ಸಮೇತ ರಾಹುಲ್‌ ಅವರು ನಮ್ಮ ದೇಶದಲ್ಲಾದ ಕ್ರೀಡಾ ಜಗತ್ತಿನ ಬೆಳವಣಿಗೆಗಳನ್ನು ದಾಖಲಿಸಿರುವುದು ಇವರ ಶ್ರಮಕ್ಕೆ ಕನ್ನಡಿಯಂತಿದೆ. ಪ್ರತಿಯೊಂದು ಅಧ್ಯಾಯವೂ ಹೀಗೆ ವಸ್ತುನಿಷ್ಠವಾಗಿದೆ. ಪೂರಕ ಅಂಕಿ-ಅಂಶಗಳ ಜೊತೆಗೆ ಅಲ್ಲಲ್ಲಿ ಪೂರಕ ಚಿತ್ರಗಳನ್ನೂ ನೀಡಲಾಗಿದೆ. ಈ ಎಲ್ಲಾ ಅಂಶಗಳನ್ನು ದಾಖಲಿಸುವಲ್ಲಿ ರಾಹುಲ್‌ ಅವರಿಗಿರುವ ಶ್ರದ್ಧೆ ಪ್ರಶಂಸಾರ್ಹ. ಪುಸ್ತಕದ ಅಂತ್ಯದಲ್ಲಿ ಗ್ರಂಥಋಣವೂ ಇದೆ.



ಪ್ರವಾಸೋದ್ಯಮ, ಕಾಶ್ಮೀರ, ಭದ್ರತೆ, ವೈರಾಣು ಹೀಗೆ 21 ಪ್ರಮುಖ ಬೆಳವಣಿಗೆಗಳ ಮೇಲೆ ಈ ಪುಸ್ತಕ ರಾಹುಲ್‌ ಅವರ ಶೈಲಿಯಲ್ಲಿ ನಿರೂಪಿತವಾಗಿದೆ. ನೀವು ಓದುವಲ್ಲದೆ, ನಿಮ್ಮ ಮಕ್ಕಳಿಗೂ ಈ ಪುಸ್ತಕ ಓದಿಸಿ ಎನ್ನುತ್ತಾರೆ ರಾಹುಲ್.‌ ಪುಸ್ತಕವನ್ನು ಓದುತ್ತಾ ಮೋದಿ ಅವರ ಅಭಿಮಾನಿಗಳು ಅಹುದುಅಹುದು ಎಂದರೆ ವಿರೋಧಿಗಳು ಹೀಗೂ ಉಂಟೆ ಎನ್ನಬಹುದು.

ಚಕ್ರವರ್ತಿ ಸೂಲಿಬೆಲೆಯವರಿಗೆ ರಾಹುಲ್‌ ಅವರು ಈ ಪುಸ್ತಕವನ್ನು ಅರ್ಪಿಸಿದ್ದು, ತಮ್ಮ ಜಯಲಕ್ಷ್ಮೀ ಪ್ರಕಾಶನದ ಮೂಲಕ ಪ್ರಕಟಿಸಿದಾರೆ. ಈ ಪುಸ್ತಕದ ಮೌಲ್ಯ ರೂ. 180/- ಆಗಿದ್ದು ಪ್ರತಿಗಳಿಗೆ ರಾಹುಲ್‌ ಅವರ ವಾಟ್ಸಪ್‌ 9108594204 ಅಥವಾ ಗುಬ್ಬಚ್ಚಿ ಪುಸ್ತಕದ ವಾಟ್ಸಪ್‌ 9986692342 ಸಂಪರ್ಕಿಸಬಹುದು.

 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ವಿವಿಧ ದತ್ತಿ ಪುಸ್ತಕ ಪುರಸ್ಕಾರಗಳು...

ವಿವಿಧ ದತ್ತಿ ಪುಸ್ತಕ ಪುರಸ್ಕಾರಗಳು... ಕನ್ನಡ ಸಾಹಿತ್ಯ ಪರಿಷತ್ತು 2023 ನೇ ಸಾಲಿನಲ್ಲಿ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪುರಸ್ಕಾರಗಳಿಗಾಗಿ ಕೃತಿಗಳ...