ಸೋಮವಾರ, ಜನವರಿ 15, 2024

ನಿಮ್ಮ ಮನೆಯಲ್ಲಿರಲಿ “ಅಯೋಧ್ಯ ಸಚಿತ್ರ ರಾಮಾಯಣ”



ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಟಾಟನೆ ಮತ್ತು “ರಾಮಲಲ್ಲಾ” ಅಥವಾ “ಬಾಲರಾಮ”ನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್‌ ಆಯೋಜಿಸಿರುವುದು ಸರಿಯಷ್ಟೆ. ಈ ಸಂದರ್ಭದಲ್ಲಿ ಬೆಂಗಳೂರಿನ ಅಯೋಧ್ಯ ಫೌಂಡೇಶನ್‌ ಒಂದು ಅಪರೂಪದ, ಶ್ರೀರಾಮನ ಭಕ್ತರಾದ ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ಇರಬೇಕಾದ ಪುಸ್ತಕವೊಂದನ್ನು ಪ್ರಕಟಿಸಿದೆ. ಅದು “ಅಯೋಧ್ಯ ಸಚಿತ್ರ ರಾಮಾಯಣ.” ಈ ಪುಸ್ತಕವು ಇತರೆ ಭಾಷೆಗಳೊಂದಿಗೆ ಕನ್ನಡದಲ್ಲೂ ಪ್ರಕಟವಾಗಿದೆ.

125 ವರ್ಣಚಿತ್ರಗಳೊಂದಿಗೆ ಮಹರ್ಷಿ ವಾಲ್ಮೀಕಿ ಮಹಾಕಾವ್ಯದ ಸಂಪೂರ್ಣ ಕಥಾನಕವುಳ್ಳ ಕಾಫಿ ಟೇಬಲ್‌ ಪುಸ್ತಕವಾಗಿ “ಅಯೋಧ್ಯ ಸಚಿತ್ರ ರಾಮಾಯಣ” ಪ್ರಕಟವಾಗಿದ್ದು, ಆಕರ್ಷಕ ಮುಖಪುಟ ಮತ್ತು ರೇಖಾಚಿತ್ರಗಳ ಸಹಿತ ಅತ್ಯುತ್ತಮ ವಿನ್ಯಾಸ ಮತ್ತು ಗುಣಮಟ್ಟದ ಮುದ್ರಣದಿಂದ ಕೂಡಿದೆ. ನೋಡಿದ ಕೂಡಲೇ ಈ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಅಯೋಧ್ಯ ಫೌಂಡೇಶನ್‌ ಪ್ರಕಟಿಸಿದೆ.


ಪ್ರಕಾಶಕರ ಮಾತಿನಲ್ಲಿ ತಿಳಿಸಿರುವಂತೆ ಈ ಪ್ರಕಟಣೆಯು ಮೂಲ ಆದಿಕವಿ ಶ್ರೀಮದ್ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣ ಮಹಾಕಾವ್ಯಕ್ಕೆ ನಿಷ್ಠವಾಗಿದ್ದು, ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಬರಹಕ್ಕೆ ಖ್ಯಾತ ಕಲಾವಿದರಾದ ಶ್ರೀ ನೀರ್ನಳ್ಳಿ ಗಣಪತಿ ಹೆಗಡೆ ಅವರ ಚಿತ್ರಗಳಿವೆ. ಮೂಲ ರಾಮಾಯಣದ ಯಾವ ಮುಖ್ಯ ವಿವರಣೆಯನ್ನೂ ಕೈಬಿಡದೆ ಅತ್ಯಂತ ಸರಳ ಭಾಷೆಯಲ್ಲಿ, ಚಿತ್ರವತ್ತಾಗಿ ಕತೆಯನ್ನು ನಿರೂಪಿಸಿರುವುದು ಇಲ್ಲಿನ ವಿಶೇಷ. ಆಕರ್ಷಕ ವರ್ಣಚಿತ್ರಗಳು, ಕಾಫಿ ಟೇಬಲ್ ಪುಸ್ತಕದ ಗಾತ್ರ, ನಯವಾದ ಹಾಳೆಗಳು ಕೃತಿಯ ವಿಶೇಷ. ಮಕ್ಕಳಷ್ಟೇ ಅಲ್ಲ ಹಿರಿಯರಿಗೂ ಇಷ್ಟವಾಗುವ ಚಿತ್ರ-ವಿವರಣೆ-ಗುಣಮಟ್ಟದ ಪುಸ್ತಕ ಇದಾಗಿದ್ದು ರಾಮಾಯಣದ ಸಂಕ್ಷಿಪ್ತ ಸಾರ ಇಲ್ಲಿದೆ.

ಪ್ರತಿಯೊಂದು ಮನೆಯಲ್ಲೂ ಇರಲೇಬೇಕಾದ ಸಂಗ್ರಹಯೋಗ್ಯ ಸಾರ್ವಕಾಲಿಕ ರಾಮಾಯಣ ಗ್ರಂಥವಿದು

ಈ ಕೃತಿಯ ಮೌಲ್ಯ ರೂ. 499/- ಆಗಿದ್ದು, ಆಸಕ್ತರಿಗೆ… https://amzn.to/3vARSyq 

***

ಜನವರಿ 13ರಿಂದ 18ರವರೆಗೆ ನಡೆಯುತ್ತಿರುವ ಅಮೇಜಾನ್‌ ಇಂಡಿಯಾ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಲಿಂಕ್: https://amzn.to/4aTZI6u

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮತ್ತೊಂದು ಪ್ರಮುಖ ಕಥೆ, ಕಾವ್ಯ ಸ್ಪರ್ಧೆ...

ಸ್ನೇಹಿತರೇ, ನನಗೆ ಮತ್ತೊಂದು ಪ್ರಮುಖ ಕಥೆ, ಕಾವ್ಯ ಸ್ಪರ್ಧೆಯ ವಿವರಗಳು ಲಭ್ಯವಾಗಿದ್ದು, ಇದನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.  ವಿವರಗಳಿಗೆ... ಶುಭವಾಗಲಿ, -...