ಮಂಗಳವಾರ, ಫೆಬ್ರವರಿ 13, 2024

ಸಿದ್ದು ಸತ್ಯಣ್ಣವರ ಬೆಳೆದ “ಬೆಳಕಿನ ಬೆಳೆ”

 ಸಿದ್ದು ಸತ್ಯಣ್ಣವರ ಬೆಳೆದ “ಬೆಳಕಿನ ಬೆಳೆ”



ಪತ್ರಕರ್ತ ಸಾಹಿತಿ ಸಿದ್ದು ಸತ್ಯಣ್ಣವರ “ಬೆಳಕಿನ ತೆನೆ – ನೋವುಂಡು ಬೆಳಕು ಕಂಡವರ ಕಥನಗಳು” ಎಂಬ Success Stories ಸಂಕಲನವನ್ನು ಹೊರತಂದಿದ್ದಾರೆ. ಅವರಿಗೆ ಅಭಿನಂದನೆಗಳು.

ವೃತ್ತಿಯ ಅನುಭವಗಳಿಂದ ಚಿಂತನೆಯೊಂದು ಮೊಳಕೆಯೊಡೆದು ಸಮಾಜಕ್ಕೆ ಮಾದರಿಯಾಗಬಲ್ಲ ಕೆಲವು ಯಶೋಗಾಥೆಗಳನ್ನು ಸಂಕಲಿಸಬೇಕೆಂದುಕೊಂಡ ಲೇಖಕರು ಈ ಕೃತಿಯನ್ನು ಬಹಳ ಆಸ್ಥೆಯಿಂದ ಓದುಗರಿಗೆ ನೀಡಿದ್ದಾರೆ. ಸಂಕಲನದ ಹಸ್ತಪ್ರತಿಯನ್ನು ಖ್ಯಾತ ಸಿನಿಮಾ ನಟರಾದ ದುನಿಯಾ ವಿಜಯ್‌ ಅವರು ಓದಿ ಮೆಚ್ಚಿರುವುದು ವಿಶೇಷ. ಸಾಹಿತಿಗಳಾದ ಕೇಶವ ಮಳಗಿಯವರು ಈ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ. ಬಂಜರು, ಕಲ್ಲರಾಶಿಗಳ ಮರುಭೂಮಿಯಲ್ಲಿ ಲೋಕಕೆ ಸುಗಂಧವನ್ನು ಹಂಚಲೆಂದೇ ಅರಳಿಹೆವು ಎನ್ನುವ ಸಾಮಾನ್ಯರ ಅಸಾಮಾನ್ಯ ಕಥನಗಳು ಇಲ್ಲಿವೆ ಎಂದಿದ್ದಾರೆ ಕತೆಗಾರರೂ ಆದ ಕೇಶವ ಮಳಗಿ ಅವರು.

ಈ “ಬೆಳಕಿನ ತೆನೆ”ಯಲ್ಲಿ ಇಪ್ಪತ್ತು ಯಶೋಗಾಥೆಗಳಿವೆ. ದಿನಗೂಲಿ ಮಾಡುತ್ತಲೇ ಪಿ.ಎಚ್.ಡಿ ಪದವೀಧರೆಯಾದ ಸಾಕೆಭಾರತಿಯಿಂದ ಆರಂಭವಾಗಿ ನೈಜೀರಿಯಾದ ಖ್ಯಾತ ನಟ ʼಪಾಆ ಪಾಆʼ ಎಂದೇ ಕರೆಯಲ್ಪಡುವ ಒಶೀತಾ ಇಹೇಮಿವರೆಗೂ ಓದುಗರನ್ನು ಪ್ರೇರೆಪಿಸುವ ಇಪ್ಪತ್ತು ಯಶೋಗಾಥೆಗಳಿವೆ. ಎಲ್ಲಾ ಕ್ಷೇತ್ರಗಳ ಸಾಧಕರ ಗೆಲುವಿನ ಕತೆಗಳಿವೆ. ಇತ್ತೀಚಿನ ದಿನಮಾನಗಳಲ್ಲಿ ದೇಶದ ಕ್ರಿಕೆಟ್‌ ತಾರೆಯಾಗಿ ಮಿಂಚುತ್ತಿರುವ ಮೊಹಮ್ಮದ್‌ ಸಿರಾಜ್‌ನ ಕತೆಯಿದೆ. ಚಿಕ್ಕ ವಯಸ್ಸಿಗೆ ವಿಶ್ವವಿಖ್ಯಾತನಾಗಿರುವ ಪುಟ್ಬಾಲ್‌ ತಾರೆ ಎಂಬಾಪೆಯ ಕತೆಯೂ ಇದೆ. ಎಲೆ ಮರೆಯ ಕಾಯಿಯಂತಿರುವ ಹಲವು ಸಾಮಾನ್ಯರ ಅಸಾಮಾನ್ಯ ಕಥನಗಳಿವೆ. ಓದಿದ ನಂತರ ಏನನ್ನಾದರೂ ಸಾಧಿಸಬೇಕೆಂಬ ಛಲವನ್ನು ಓದುಗರಲ್ಲಿ ಬಿತ್ತುವಲ್ಲಿ ಈ ಸಂಕಲನ ಖಂಡಿತ ಯಶಸ್ವಿಯಾಗುತ್ತದೆ. ಓದುಗರಿಗೆ ಗೊತ್ತಿಲ್ಲದ ಹಲವಾರು ಸಂಗತಿಗಳು ಕೂಡ ಈ ಸಂಕಲನದ ಮೂಲಕ ಓದುಗರ ಜ್ಞಾನಭಂಡಾರ ಸೇರಬಲ್ಲದು ಎಂಬುದು ನನ್ನ ಅನಿಸಿಕೆ.

ಅಮೂಲ್ಯ ಪುಸ್ತಕ ಪ್ರಕಟಿಸಿರುವ ಈ ಕೃತಿಯ ಮೌಲ್ಯ ರೂ. 125/-

ನಿಮ್ಮ ಪ್ರತಿಗೆ:                                                                                   https://amzn.to/3Szj9JA

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ದಾವಣಗೆರೆಯಲ್ಲಿ ಸಿಟಿ ಬಸ್‌ ಹಿಡಿದು...

 ಸ್ನೇಹಿತರೇ, ನಮಸ್ಕಾರ. ನಾನು 2025ರ ಆಗಸ್ಟ್‌ ತಿಂಗಳಿನಿಂದ ದಾವಣಗೆರೆ ನಿವಾಸಿಯಾಗಿರುವುದು ನಿಮಗೆಲ್ಲಾ ಗೊತ್ತೇ ಇದು. 2020ರ ಆಗಸ್ಟ್‌ ತಿಂಗಳಿನಿಂದ ನಾನು ನನ್ನ ಪ್ರೀತಿ...