ಬುಧವಾರ, ಮಾರ್ಚ್ 26, 2025

೨೦೨೪ ನೇ ಸಾಲಿನ "ಸೃಷ್ಟಿ ಕಾವ್ಯ ಪುರಸ್ಕಾರ"ಕ್ಕೆ ಕವನ ಸಂಕಲನಗಳ ಆಹ್ವಾನ...

೨೦೨೪ ನೇ ಸಾಲಿನ "ಸೃಷ್ಟಿ ಕಾವ್ಯ ಪುರಸ್ಕಾರ"ಕ್ಕೆ ಕವನ ಸಂಕಲನಗಳ ಆಹ್ವಾನ...

(೪ ನೇ ವರ್ಷದ ಪ್ರಕಟಣೆ)



ಸೃಷ್ಟಿ ಪ್ರತಿಷ್ಠಾನದಿಂದ ಕೊಡ ಮಾಡುವ 'ಸೃಷ್ಟಿ ಕಾವ್ಯ ಪುರಸ್ಕಾರ'ಕ್ಕೆ ೨೦೨೪ ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕವಿ/ಕವಯತ್ರಿಯರ ಕವನ/ಗಜಲ್ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರು ಮುದ್ರಣ, ಅನುವಾದಿತ ಕವನ ಸಂಕಲನಗಳಿಗೆ ಪ್ರವೇಶವಿಲ್ಲ.

ಪ್ರಶಸ್ತಿಯು ಐದು ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.


ನಿಯಮಗಳು: - 

* ೨೦೨೪ರಲ್ಲಿ ಪ್ರಕಟಗೊಂಡ ಕವನ ಸಂಕಲನದ ೩ ಪ್ರತಿಗಳನ್ನು ಕಳುಹಿಸುವುದು. 

* ಕೃತಿಯ ಪ್ರಥಮ ಮುದ್ರಣವಾಗಿರಬೇಕು.

* ಯಾವುದೇ ವಯಸ್ಸಿನ ಇತಿಮಿತಿಯಿಲ್ಲ.

* ಸಂಕಲನ ಕಳುಹಿಸುವ ಕೊನೆಯ ದಿನಾಂಕ: ೨೮ / ೦೪/ ೨೦೨೫


ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:

ಅಶೋಕ ಹೊಸಮನಿ

ಸಂಚಾಲಕರು,

ಸೃಷ್ಟಿ ಕಾವ್ಯ ಪುರಸ್ಕಾರ

ಜೆ.ಪಿ.ನಗರ ಕಾರಟಗಿ

ಸಾ! ತಾ! ಕಾರಟಗಿ - ೫೮೩೨೨೯

ಜಿ: ಕೊಪ್ಪಳ

ಮೊ:೮೮೮೪೧೫೬೫೦೦

ಶನಿವಾರ, ಮಾರ್ಚ್ 22, 2025

ಕನ್ನಡ ಪುಸ್ತಕ ಸೊಗಸು ಬಹುಮಾನ

ಕನ್ನಡ ಪುಸ್ತಕ ಸೊಗಸು ಬಹುಮಾನ

ಸ್ನೇಹಿತರೇ,



ಕನ್ನಡ ಭಾಷೆಗೆ ಇರುವ ಸೊಗಸಿನಂತೆಯೇ, ಕನ್ನಡ ಪುಸ್ತಕಗಳಿಗೂ ಒಂದು ಸೊಗಸು, ವಿನ್ಯಾಸ ಇರುತ್ತದೆ. ನಿಮ್ಮ ಪುಸ್ತಕವು ಸೊಗಸಾಗಿದ್ದರೆ ಅದಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ "ಕನ್ನಡ ಪುಸ್ತಕ ಸೊಗಸು ಬಹುಮಾನ"ವು ಲಭ್ಯವಾಗುವ ಅವಕಾಶಗಳಿರುತ್ತದೆ. 

ಆದ್ದರಿಂದ, ನೀವಿಗಲೇ ಅರ್ಜಿ ಸಲ್ಲಿಸಿ...




ವಿವರಗಳು ಕೆಳಕಂಡಂತೆ ಇದೆ:

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2022, 2023 ಮತ್ತು 2024ರ ಕ್ಯಾಲೆಂಡರ್ ವರ್ಷದಲ್ಲಿ (ಜನವರಿ ಯಿಂದ ಡಿಸೆಂಬರ್) ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ ವಿವಿಧ “ಕನ್ನಡ ಪುಸ್ತಕ ಸೊಗಸು ಬಹುಮಾನ”ಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಆಸಕ್ತ ಪ್ರಕಾಶಕರು /ಮುದ್ರಕರು/ ಕಲಾವಿದರು / ಲೇಖಕರುಗಳು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ, ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುದ್ರಣಾಲಯದ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು / ಚಿತ್ರ ಕಲಾವಿದರ ಪೂರ್ಣ ವಿಳಾಸ / ದೂರವಾಣಿ ಸಂಖ್ಯೆ – ಈ ಎಲ್ಲಾ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ದಿನಾಂಕ: 29.03.2025ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 – ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.

ಸಲ್ಲಿಸಲಾಗುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಹಾಗೂ ಕೊನೆಯ ದಿನಾಂಕ ಮುಗಿದ ನಂತರ ಬಂದ ಪುಸ್ತಕಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ:
ಆಡಳಿತಾಧಿಕಾರಿಗಳು,
ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ,
ಮೊದಲನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು -560002
ವೆಬ್ಸೈಟ್ https://kpp.karnataka.gov.in,
ದೂರವಾಣಿ ಸಂಖ್ಯೆ: 080-22484516 / 22107704 – ಇಲ್ಲಿ ಸಂಪರ್ಕಿಸಬಹುದಾಗಿದೆ.


ಮರೆಯಬೇಡಿ, ಇದೇ ತಿಂಗಳ 29 ಕಡೇ ದಿನ...


ಶುಭವಾಗಲಿ,
- ಗುಬ್ಬಚ್ಚಿ ಸತೀಶ್.


ಶುಕ್ರವಾರ, ಮಾರ್ಚ್ 21, 2025

ಕಾರಂತ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ

ಕಾರಂತ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ




ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನವು ಕೊಡಮಾಡುವ 28ನೇ ವರ್ಷದ ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಕೃತಿಗಳನ್ನು ಆಹ್ವಾನಿಸಿದೆ.

2020ರಿಂದ 2024ರ ಅವಧಿಯಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಕೃತಿಗಳನ್ನು ಪ್ರಕಾಶಕರು ಅಥವಾ ಲೇಖಕರು ಕಳುಹಿಸಬಹುದು. ಪುರಸ್ಕಾರವು ಪ್ರಶಸ್ತಿ ಫಲಕ ಮತ್ತು ರೂಪಾಯಿ 10 ಸಾವಿರ ನಗದು ಬಹುಮಾನ ಒಳಗೊಂಡಿದೆ. ಆಸಕ್ತರು ಗ್ರಂಥಗಳ ಮೂರು ಪ್ರತಿಗಳನ್ನು 20-04-2025ರ ಒಳಗಾಗಿ ಶಿವರಾಮ ಕಾರಂತ ಪ್ರತಿಷ್ಠಾನ, ಕನ್ನಡ ಭವನ, ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ 574227 ಈ ವಿಳಾಸಕ್ಕೆ ಕಳುಹಿಸಬಹುದು.

ಈ ಪ್ರಶಸ್ತಿಯ ವಿಶೇಷವೇನೆಂದರೆ, ನೀವು ಕೂಡ ನಿಮಗೆ ಇಷ್ಟವಾದ ಪುಸ್ತಕವನ್ನು ಈ ಪ್ರಶಸ್ತಿಗೆ ಶಿಫಾರಸ್ಸು ಮಾಡಬಹುದು.

೨೦೨೪ ನೇ ಸಾಲಿನ "ಸೃಷ್ಟಿ ಕಾವ್ಯ ಪುರಸ್ಕಾರ"ಕ್ಕೆ ಕವನ ಸಂಕಲನಗಳ ಆಹ್ವಾನ...

೨೦೨೪ ನೇ ಸಾಲಿನ "ಸೃಷ್ಟಿ ಕಾವ್ಯ ಪುರಸ್ಕಾರ"ಕ್ಕೆ ಕವನ ಸಂಕಲನಗಳ ಆಹ್ವಾನ... (೪ ನೇ ವರ್ಷದ ಪ್ರಕಟಣೆ) ಸೃಷ್ಟಿ ಪ್ರತಿಷ್ಠಾನದಿಂದ ಕೊಡ ಮಾಡುವ 'ಸೃಷ್ಟಿ ಕ...