ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕನಾಗಿ ಅಭಿನಯಿಸಿರುವ "ಡೆವಿಲ್" ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ಹತ್ತು ಗಂಟೆಗಳ ಅವಧಿಯಲ್ಲಿ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದಿರುವ ಟೀಸರ್ ಇದೊಂದು ಪಕ್ಕ ಸಾಹಸಪ್ರಧಾನ ಚಿತ್ರ ಎಂದು ಒತ್ತಿ ಹೇಳುತ್ತಿದೆ. ನಿರ್ದೇಶಕ ವೀರ್ ಪ್ರಕಾಶ್ ನಿರ್ದೇಶನದ ಈ ಚಿತ್ರವನ್ನು ಶ್ರೀ ಜೈ ಮಾತಾ ಕಂಬೈನ್ಸ್ ನಿರ್ಮಿಸುತ್ತಿದೆ. ಸಂಗೀತ ನಿರ್ದೇಶನ ಬಿ.ಅಜನೀಶ್ ಲೋಕನಾಥ್ ಅವರದ್ದಾದರೆ, ಸಾಹಸ ನಿರ್ದೇಶನ ರಾಮ್ ಲಕ್ಷ್ಮಣ್ ಅವರದ್ದು. ಸುಧಾಕರ್ ಎಸ್ ರಾಜ್ ಅವರ ಛಾಯಗ್ರಹಣ ಈ ಚಿತ್ರಕ್ಕಿದೆ. ಈ ಬಹು ನಿರೀಕ್ಷಿತ ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ...
ಗುಬ್ಬಚ್ಚಿ ಸತೀಶ್
ಸಾಹಿತ್ಯ, ಸಿನಿಮಾ, ಸಂಸ್ಕೃತಿ...
ಭಾನುವಾರ, ಫೆಬ್ರವರಿ 16, 2025
ಶನಿವಾರ, ಫೆಬ್ರವರಿ 8, 2025
ವ್ಯವಸ್ಥೆ ಸರಿಯಿಲ್ವ?
ವ್ಯವಸ್ಥೆ ಸರಿಯಿಲ್ಲ ಅನ್ನುವವರನ್ನು ನೋಡಿರುತ್ತೀರಿ.
ಅಥವಾ ನೀವೇ ವ್ಯವಸ್ಥೆ ಸರಿ ಇಲ್ಲ ಅಂತ ಗೊಣಗಿರುತ್ತೀರಿ.
ನೆನ್ನೆ ಒಬ್ಬರಿಗೆ ಒಂದು ಉದಾಹರಣೆ ನೀಡಿದೆ.
ಈಗ ನಮ್ಮ ನಗರದಲ್ಲಿ ಒಂದು ಸಾರ್ವಜನಿಕ ಶೌಚಾಲಯ ಇಲ್ಲ ಅಂತ ಸರ್ಕಾರ ಒಂದು ಶೌಚಾಲಯ ಕಟ್ಟುತ್ತೆ. ಅದನ್ನು ಉಪಯೋಗಿಸಲು ಶುರುಮಾಡುವ ಸಾರ್ವಜನಿಕರಲ್ಲಿ ಯಾರಾದರೂ ಒಬ್ಬರು ನೀರು ಸರಿಯಾಗಿ ಹಾಕದೇ ಇದ್ದರೂ ಶೌಚಾಲಯ ಉಪಯೋಗಿಸಲು ಯೋಗ್ಯವಿಲ್ಲದಂತಾಗುತ್ತದೆ. ಹೌದಲ್ಲವ? ಎಂದೆ.
ಅದಕ್ಕವರು, ಮೆಂಟೆನೆನ್ಸ್ ಮಾಡುವವರನ್ನು ನಿಯೋಜಿಸಬೇಕು ಎಂದರು. ಅದು ಸರಿ. ಆದರೆ, ಉಪಯೋಗಿಸಿದ ಪ್ರತಿಯೊಬ್ಬರೂ ಸರಿಯಾಗಿ ನೀರು ಹಾಕಿದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಯಾರೋ ಒಬ್ಬರಿಂದ ಇಡೀ ವ್ಯವಸ್ಥೆಯೇ ಅವ್ಯವಸ್ಥೆಯಾಯಿತು. ಅವನ್ಯಾರೋ ಹಾಕಿಲ್ಲ ಅಂತ ಮತ್ತೊಬ್ಬನೂ ಹೀಗೆ ಮಾಡಿದುದರಿಂದ ಇಡೀ ವ್ಯವಸ್ಥೆಯೇ ಹೀಗಾಯಿತು. ಎಂದೆ. ಸುಮ್ಮನಾದರು.
ಇದೇ ಉದಾಹರಣೆಯನ್ನು ಭ್ರಷ್ಟಾಚಾರಕ್ಕೆ ಹೋಲಿಸಿ ನೋಡಬಹುದು. ಬಹುತೇಕ ಸಮಸ್ಯೆಗಳ ಸೃಷ್ಠಿಯ ಮೂಲವೇ ಭ್ರಷ್ಟಾಚಾರ. ಆದಕಾರಣ, ವ್ಯವಸ್ಥೆ ಅವ್ಯವಸ್ಥೆಯ ಆಗರವಾಯಿತು.
ಮತ್ತೊಂದು ಕಾರಣ, Nepotism. ಸ್ವಜನ ಪಕ್ಷಪಾತ... ಸ್ವಜಾತಿ ಪ್ರೇಮ.
ಅದಿರಲಿ,
ಶಾಲೆ, ಕಾಲೇಜು, ವ್ಯವಸ್ಥೆ ಸರಿ ಇಲ್ಲ.
ಆಸ್ಪತ್ರೆ, ವ್ಯವಸ್ಥೆ ಸರಿ ಇಲ್ಲ.
ಕೆಲಸ, ವ್ಯವಸ್ಥೆ ಸರಿ ಇಲ್ಲ,
ಗ್ರಂಥಾಲಯ, ವ್ಯವಸ್ಥೆ ಸರಿ ಇಲ್ಲ.
...
ಇಲಾಖೆ, ವ್ಯವಸ್ಥೆ ಸರಿ ಇಲ್ಲ. ಸರ್ಕಾರಿ ಕೆಲಸ ದೇವರ ಕೆಲಸ ಅಂತ ಬೋರ್ಡಿದೆ ಅಷ್ಟೆ. ಕೆಲಸವಾಗಬೇಕೆಂದರೆ ಅಲ್ಲಿ ಸಂಬಳ ತೆಗೆದುಕೊಳ್ಳುವವನಿಗೆ ನೀವು ಕಪ್ಪ ಕಾಣಿಕೆ ಅರ್ಥಾತ್ ಲಂಚ ಕೊಟ್ಟರೆ ಮಾತ್ರ ನಿಮ್ಮ ಕೆಲಸ ಆಗುತ್ತದೆ. ಅವನ್ಯಾಕೆ ಅಷ್ಟಕ್ಕೂ ಲಂಚ ಕೇಳುತ್ತಾನೆಂದರೆ ಅವನ ಮೇಲಿನವರು ಕೇಳುತ್ತಾರೆ, ಮೇಲಿನವನು ಯಾಕೆ ಕೇಳುತ್ತಾನೆ ಎಂದರೆ ಅವನು ಇಲಾಖೆಯ ಸಚಿವರಿಗೆ ಇಂತಿಷ್ಟು ಕೊಡಬೇಕು... ಹುಡುಕುತ್ತಾ ಹೋದರೆ ಬೇರು ವಿಧಾನಸೌಧದ ಬುಡದಲ್ಲಿ ಇದೆ!
ಇವುಗಳ ಜೊತೆ ಮತ್ತಷ್ಟು ಕಾರಣಗಳೂ ಇವೆ. ಇರಲಿ.
ಸೋ, ವ್ಯವಸ್ಥೆ ಸರಿ ಇಲ್ಲ.
ಇದು ಸರ್ಕಾರದ ಕತೆಯಾದರೆ, ಖಾಸಗಿಯದು ಮತ್ತೊಂದು ಅಧ್ವಾನ!!
ಮತ್ತೆ, ಏನು ಮಾಡಬೇಕು?
ಒಂದು ವ್ಯವಸ್ಥೆಯ ಅವ್ಯವಸ್ಥೆಯ ಜೊತೆ ರಾಜಿಯಾಗಿ ಇದ್ದು ಬಿಡಿ.
ಇಲ್ಲ, ವ್ಯವಸ್ಥೆಯಿಂದ ಹೊರಬಂದು ನೀವೇ ಒಂದು ಒಳ್ಳೆಯ ವ್ಯವಸ್ಥೆ ಕಟ್ಟಿಬಿಡಿ.
ಅಷ್ಟೆ!
ಮೊನ್ನೆ ಕಿರಿಯ ಮಾಧ್ಯಮ ವಿದ್ಯಾರ್ಥಿಮಿತ್ರರೊಬ್ಬರು ಯಾರೆಂದರೆ ಅವರೇ ವೆಬ್ ಪತ್ರಿಕೆಗಳನ್ನು ಮಾಡುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದರು. ಅವರಿಗೆ ಉತ್ತರವಾಗಿ ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ನೀವೊಂದು ಮಾದರಿ ವೆಬ್ ಪತ್ರಿಕೆ ಮಾಡಿ ಸೈ ಎನಿಸಿಕೊಳ್ಳಿ ಎಂದು ಹೇಳಿದೆ. ಆಗ ಹೊಳೆದ ಚಿಂತನೆಯೇ ಈ ಲೇಖನ.
ವ್ಯವಸ್ಥೆ ಸರಿ ಇಲ್ಲ ಅಂತ ಕೊರಗುತ್ತಾ ಕೂಡುವ ಬದಲು ಒಂದೊಳ್ಳೆ ವ್ಯವಸ್ಥೆಯನ್ನು ಸೃಷ್ಟಿಸಿ.
ಅದುಬಿಟ್ಟು,
ಶುಭವಾಗಲಿ,
- ಗುಬ್ಬಚ್ಚಿ ಸತೀಶ್.
ಗುರುವಾರ, ನವೆಂಬರ್ 14, 2024
ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?
ಸ್ನೇಹಿತರೇ, ನಮಸ್ಕಾರ.
ನನ್ನ ಹಿಂದಿನ ಪೋಸ್ಟ್ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್ ಓದಿಲ್ಲವಾದರೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಿ.
https://nallanalle.blogspot.com/2024/11/how-to-earn-online.html
ಮೊದಲಿಗೆ, ನಾಳೆಯಿಂದ ಬೆಂಗಳೂರಿನಲ್ಲಿ ಜರುಗಲಿರುವ ವೀರಲೋಕ ಪುಸ್ತಕ ಸಂತೆಯಲ್ಲಿ ನೀವೆಲ್ಲಾ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಕೋರುತ್ತೇನೆ... ಮಾನಸಿಕವಾಗಿ ಮೂರೂ ದಿನಗಳು ನಾನಲ್ಲಿ ಇರುತ್ತೇನೆ ಎಂದು ಬಿನ್ನವಿಸಿಕೊಳ್ಳುತ್ತೇನೆ.
ಮೊನ್ನೆ ಸ್ನೇಹಿತರೊಬ್ಬರು ನನ್ನ ವಾಟ್ಸಪ್ಪಿಗೆ ಈ ಕೆಳಗಿನ ಪೋಸ್ಟರ್ ಕಳಿಸಿದರು. ಅವರಿಗೆ ನಾನು ಕೂಡ ಸಾಹಿತಿ, ಪುಸ್ತಕ ಪ್ರಕಾಶನವಿದೆ ಎಂದು ಇತ್ತೀಚಿಗಷ್ಟೇ ಗೊತ್ತಾಗಿದೆ. ಆದಕಾರಣ ಈ ಫೋಸ್ಟರ್ ಕಳಿಸಿದ್ದರು. ನಾನು ಧನ್ಯವಾದಗಳನ್ನು ಹೇಳಿ ಅನಂತ ಕುಣಿಗಲ್ ಅವರಿಗೆ ಪುಸ್ತಕ ಪ್ರಕಾಶನ ಮಾಡುವುದು ಹೇಗೆ ಎಂದು ತಿಳಿಸಿದ್ದೇ ನಾನು ಎಂದು ಉತ್ತರ ಬರೆದೆ. ಅವರಿಗೆ ಆಶ್ಚರ್ಯವಾಯಿತು.
ಪಕ್ಕ ಸಾಹಸಪ್ರಧಾನ ಸಿನಿಮಾ
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕನಾಗಿ ಅಭಿನಯಿಸಿರುವ "ಡೆವಿಲ್" ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ಹತ್ತು ಗಂಟೆಗಳ ಅವಧಿ...

-
ಆತ್ಮೀಯರೇ, ’ನಿಮ್ಮೆಲ್ಲರ ಮಾನಸ’ ಕನ್ನಡ ಮಾಸಪತ್ರಿಕೆಯ ೧೦೦ ಸಂಚಿಕೆಗಳ ಸಂಭ್ರಮಕ್ಕೆ ಮತ್ತು ಪುಸ್ತಕಗಳ ಬಿಡುಗಡೆಗೆ ತಪ್ಪದೆ ಪ್ರೀತಿಯಿಂದ ಬನ್ನಿ... ಅಂದು ನನ್ನ ಕಾದಂ...