ಭಾನುವಾರ, ಜುಲೈ 6, 2025

"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ,


ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾನು ಮೊದಲ ದಿನವೇ ನೋಡಿದೆ. ಸಿನಿಮಾ ಕುರಿತು ನನ್ನ ಅನಿಸಿಕೆ ಅಭಿಪ್ರಾಯವನ್ನು ನನ್ನ ಫೇಸ್ಬುಕ್‌ ಪೇಜ್‌ ಜೊತೆಗೆ, ನನ್ನ ಯೂಟ್ಯೂಬ್‌ ಚಾನೆಲ್ಲಿನಲ್ಲಿ ಕೂಡ ದಾಖಲಿಸಿದೆ. ಮೊದಲರ್ಧ ಸಾಮಾನ್ಯ ಸಿನಿಮಾದಂತೆ ನೋಡಿಸಿಕೊಂಡ ʼಮಾದೇವʼ ದ್ವಿತೀರ್ಯಾಧದಲ್ಲಿ ನನ್ನ ಮನಸ್ಸು ಗೆದ್ದುಬಿಟ್ಟ. ನಿರ್ದೇಶಕರು ಸಿನಿಮಾದ ಕತೆಗೆ ನೀಡಿದ ತಿರುವು ಮತ್ತು ಪಾತ್ರವೊಂದರ ರೂಪಾಂತರ ಸಿನಿಮಾವನ್ನು ಒಂದು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮುಗ್ಧ ಮಾದೇವನ ಪಾತ್ರವನ್ನು ಪರಕಾಯ ಪ್ರವೇಶ ಮಾಡಿದಂತೆ ನಟಿಸಿರುವ ನಟ ವಿನೋದ್‌ ಪ್ರಭಾಕರ್‌ ಮನಸ್ಸು ಗೆದ್ದು ಬಿಡುತ್ತಾರೆ. ಅವರ ತಣ್ಣನೆಯ ಕೌರ್ಯದ ನಟನೆ ಎಂಥಹವರನ್ನೂ ಮಂತ್ರಮುಗ್ಧನನ್ನಾಗಿಸುತ್ತದೆ. 

ಇನ್ನು ಸಿನಿಮಾದ ಉಳಿದ ಪಾತ್ರಗಳು, ತಾಂತ್ರಿಕವರ್ಗದ ಶ್ರಮ ಸಿನಿಮಾದ ಗೆಲುವಿಗೆ ಕಾರಣವಾಗುತ್ತದೆ...

ಇಷ್ಟೇ ಆಗಿದ್ದರೆ ಒಂದು ಅಥವಾ ಎರಡು ವಾರ ಸಿನಿಮಾ ಓಡಿ ಸುಮ್ಮನಾಗುತ್ತಿತ್ತು. ಆದರೆ, ನಟ ಟೈಗರ್‌ ಪ್ರಭಾಕರ್‌ ಅವರ ಅಭಿಮಾನಿಗಳು "ಜಿದ್ದು" ಸಿನಿಮಾವನ್ನು ನೆನಪಿಸಿಕೊಂಡು ಈ ಸಿನಿಮಾಗೆ ಇನ್ನಿಲ್ಲಿದ ಪ್ರೋತ್ಸಾಹ ಪ್ರೀತಿ ನೀಡಿದರು. ಬಾಯಿಂದ ಬಾಯಿಗೆ ಅಂದರೆ ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ʼಮಾದೇವʼ ವೈರಲ್‌ ಆದ. ಅವನನ್ನು ಯಾರೂ ಹಿಡಿಯಲಾಗಲಿಲ್ಲ. ಹಿಡಿಯಬೇಕೆಂದುಕೊಂಡವರ ಪಟ್ಟಿಗೆ ಸ್ವತಃ ನಟ ಮತ್ತು ಚಿತ್ರತಂಡ ಹಾಗೂ ಅಭಿಮಾನಿಗಳು ಸಿಗಲಿಲ್ಲ. ಮತ್ತಷ್ಟು ಪ್ರಚಾರ ಮಾಡಿ ಸಿನಿಮಾ ಗೆಲ್ಲಿಸಿದರು. ತಪಸ್ಸಿನಂತೆ ಒಂದು ಗೆಲುವಿಗಾಗಿ ಕಾದಿದ್ದ ನಟ ವಿನೋದ್‌ ಪ್ರಭಾಕರ್‌ ತಮ್ಮ ನಯ ವಿನಯದ ನಡವಳಿಕೆಯಿಂದ ತಮ್ಮ ಗೆಲುವನ್ನು ಆಹ್ವಾದಿಸಲು ತೊಡಗಿದರು. ಕಾರಣ, 25ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಇನ್ನೂ ಕೂಡ ಕೆಲವು ಕಡೆ "ಮಾದೇವ" ಪ್ರದರ್ಶನ ಕಾಣುತ್ತಲೇ ಇದೆ.

ಆರಂಭದಲ್ಲಿ ಈ ಸಿನಿಮಾಗೆ ಅಷ್ಟೇನು ಪ್ರಚಾರವಿರಲಿಲ್ಲ. ನನ್ನನ್ನೂ ಒಳಗೊಂಡಂತೆ ನೂರಾರು ಜನರು ಈ ಸಿನಿಮಾಗೆ ಅಭೂತಪೂರ್ವವಾಗಿ ಬೆಂಬಲಿಸಿದರು. ಕೆಲವರಂತು ನಿಮಗೆಷ್ಟು ದುಡ್ಡು ಪ್ರಚಾರಕ್ಕೆ ಅಂತ ಕೊಟ್ಟರು ಎಂದರು. ಎಂದಿನಂತೆ ನಾನು ಇವಕ್ಕೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ. ನನಗೆ ಒಂದು ಸಿನಿಮಾ ಗೆಲ್ಲಬೇಕು, ಒಬ್ಬ ಒಳ್ಳೆಯ ನಟನಿಗೆ ಅನ್ಯಾಯವಾಗಬಾರದು ಎಂಬ ಕಾಳಜಿ ಅಷ್ಟೆ. ಮತ್ತು ಕನ್ನಡ ಚಲನಚಿತ್ರರಂಗ ಬೆಳೆಯಬೇಕೆಂದರೆ ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ಒಂದು ಒಳ್ಳೆಯ ಸಿನಿಮಾ ನೋಡಿ ಸುಮ್ಮನಿರಬಾರದು ಎಂಬ ನನ್ನ ನಿಲುವು. ನಾನು ನೋಡಿದ ಒಂದೊಳ್ಳೆಯ ಸಿನಿಮಾವನ್ನು ಮತ್ತಷ್ಟು ಸಿನಿಮಾಪ್ರಿಯರು ನೋಡಲಿ ಎಂಬುದಷ್ಟೇ! ಸ್ವಾರ್ಥವೇನಾದರೂ ಇದ್ದರೆ ಅದು ಈ ಮೂಲಕ ನನ್ನ ಸಾಮಾಜಿಕ ಜಾಲತಾಣಗಳ ಪರಿಧಿ ವಿಸ್ತಾರವಾಗಲಿ ಎಂಬುದಾಗಿರುತ್ತದೆ ಅಷ್ಟೆ.

ನೀವಿನ್ನೂ "ಮಾದೇವ" ಸಿನಿಮಾ ನೋಡಿಲ್ಲವಾದರೆ, ಆದಷ್ಟು ಬೇಗ ನೋಡಿಬಿಡಿ.

ನನ್ನ ಫೇಸ್ಬುಕ್‌ ಪೇಜ್‌ ಮತ್ತು ಯೂಟ್ಯೂಬ್‌ ಚಾನೆಲ್ಲಿನಲ್ಲಿ ಈ ಕುರಿತು ನೀವು ಮತ್ತಷ್ಟು ಹೆಚ್ಚಿನ ಮಾಹಿತಿ ಪಡೆಯಬಹುದು...

ನನ್ನ ಯೂಟ್ಯೂಬ್: https://youtu.be/aV04OWi3EVY?si=AnRPHmvltjMN4BaO

ನನ್‌ ಫೇಸ್ಬುಕ್‌ ಪೇಜ್:‌ https://www.facebook.com/share/p/1BsAp7jvSX/

ಜೈ ಮಾದೇವ,

- ಗುಬ್ಬಚ್ಚಿ ಸತೀಶ್.


ಸೋಮವಾರ, ಏಪ್ರಿಲ್ 28, 2025

ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು"


ಸ್ನೇಹಿತರೇ, ನಮಸ್ಕಾರ.

ಖ್ಯಾತ ಹಣಕಾಸು ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು -  ಹಣ, ಸಂಪತ್ತು ಮತ್ತು ಯಶಸ್ಸಿನ ಹಿಂದಿನ ಸರಳ ಅಭ್ಯಾಸಗಳು ಮತ್ತು ಚಿಂತನೆಗಳು" ಎಂಬ ಹೊಸ ಪುಸ್ತಕ ಬಂದಿದೆ. ಈ ಪುಸ್ತಕದ 25 ಅಧ್ಯಾಯಗಳಲ್ಲಿ ಲಕ್ಷಾಧಿಪತಿಯ 25 ಗುಣಲಕ್ಷಣಗಳನ್ನು ಲೇಖಕರು ಓದುಗರಿಗೆ ತಿಳಿಸಿದ್ದಾರೆ. ಇಲ್ಲಿ ಲಕ್ಷಾಧಿಪತಿ ಎಂಬುದನ್ನು ಸಿರಿವಂತ ಎಂಬ ಅರ್ಥದಲ್ಲಿ ಬಳಸಲಾಗಿದೆ. ನೀವು ಸಿರಿವಂತರಲ್ಲದಿದ್ದರೆ ಈ ಪುಸ್ತಕ ನೀವು ಸಿರಿವಂತರಾಗಲು ಅಳವಡಿಸಿಕೊಳ್ಳಬಹುದಾದ ಕೆಲವು ಗುಣಲಕ್ಷಣಗಳ ಮೇಲೆ ಬೆಳಕು ಚೆಲ್ಲಲಿದೆ. ನಿಮ್ಮ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಂಡರೆ ನೀವೂ ಕೂಡ ಲಕ್ಷಾಧಿಪತಿಯಾಗುವ ಕಾಲ ದೂರವಿಲ್ಲ. ಅಥವಾ ನೀವಿಗಾಗಲೇ ಸಿರಿವಂತರಾಗಿದ್ದರೆ ಮತ್ತಷ್ಟು ಸಿರಿವಂತರಾಗಲು ಈ ಪುಸ್ತಕ ನೆರವಾಗಲಿದೆ.

ತಮ್ಮ ಎಂದಿನ ಶೈಲಿಯಲ್ಲಿಯೇ ರಂಗಸ್ವಾಮಿ ಮೂಕನಹಳ್ಳಿಯವರು ಪ್ರಶ್ನೆಗಳನ್ನು ತಮಗೆ ತಾವೇ ಹಾಕಿಕೊಳ್ಳುತ್ತಲೇ ಅವುಗಳಿಗೆ ತಮ್ಮ ಅನುಭವದ ಆಧಾರದ ಮೇಲೆ ಉತ್ತರಗಳನ್ನು ನೀಡುತ್ತಾ ಹೋಗುತ್ತಾರೆ. ಅಸಾಮಾನ್ಯರು ಎನ್ನಿಸಿಕೊಳ್ಳುವುದಕ್ಕೆ ಮುಂಚೆ ಎಲ್ಲರೂ ಸಾಮಾನ್ಯರೆ! ಹೌದಲ್ವಾ? ನೀವೇ ಯೋಚಿಸಿ ನೋಡಿ. ಅವರಿಗೂ ಅಡೆತಡೆಗಳು ಎಲ್ಲರಿಗೂ ಬಂದಂತೆ ಬಂದಿರುತ್ತವೆ. ಅವರು ಅಡೆತಡೆಗಳ ಬಗ್ಗೆ ಗೊಣಗುತ್ತಾ ಕೂರುವ ಬದಲು ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಿರುತ್ತಾರೆ. ಈ ಧೀಮಂತ ಗುಣವೇ ಅವರನ್ನು ಗುಂಪಿನಿಂದ ಬೇರ್ಪಡಿಸುತ್ತದೆ. ವಿಶೇಷರನ್ನಾಗಿಸುತ್ತದೆ. ಎಂದು ಹೇಳುತ್ತಾರೆ. ಲಕ್ಷಾಧಿಪತಿಯ ಗುಣಲಕ್ಷಣಗಳನ್ನು ನಾವು ಅಳವಡಿಸಿಕೊಳ್ಳಬಹುದೇ? ಅಥವಾ ಅವು ಅನುವಂಶಿಕವಾಗಿ ಬರುವಂತಹ ಗುಣಗಳೆ? ಎನ್ನುವ ಸಹಜ ಪ್ರಶ್ನೆಗಳನ್ನಿಟ್ಟುಕೊಂಡು ಓದುಗರಿಗೆ ಮನದಟ್ಟಾಗುವಂತೆ, ಅವರು ಲಕ್ಷಾಧಿಪತಿಗಳಾಗಲು ಪ್ರೇರೆಪಿಸುವಂತೆ ಪುಸ್ತಕವನ್ನು ರಚಿಸಿದ್ದಾರೆ. ಜಗತ್ತಿನ ಮುಕ್ಕಾಲು ಪಾಲು ಶ್ರೀಮಂತರು ಸೆಲ್ಫ್‌ ಮೇಡ್‌ ಎನ್ನುವ ಒಂದೇ ಸಾಲು ಸಾಕು ಓದುಗನು ಕೂಡ ಈ ನಿಟ್ಟಿನಲ್ಲಿ ಪ್ರಯತ್ನಿಸಲು.

ಪುಸ್ತಕದಲ್ಲಿ ಹಲವು ಅಚ್ಚರಿಯ ವಿಷಯಗಳೂ ಇವೆ. ಲೇಖಕರ ಅನುಭವಗಳು, ಇತರ ಸಿರಿವಂತರ ಗುಣಲಕ್ಷಣಗಳ ಉದಾಹರಣೆಗಳು ಇವೆ. ನಮ್ಮ ಕ್ಷಮತೆ ಹೆಚ್ಚಿಸಿಕೊಂಡು, ನಿರಂತರ ಕಲಿಕೆಯ ಮೂಲಕ ಈ ಪುಸ್ತಕದಲ್ಲಿನ ಗುಣಗಳನ್ನು ಅಳವಡಿಸಿಕೊಂಡು ಸಿರಿವಂತರಾಗುವುದು ಪುಸ್ತಕದ ಆಶಯವಾಗಿದೆ. 

ಈಗಾಗಲೇ ಹಲವಾರು ಪುಸ್ತಕಗಳ ಮೂಲಕ ಓದುಗರಿಗೆ ನೆರವಾಗಿರುವ ರಂಗಸ್ವಾಮಿಯವರ ಈ ಪುಸ್ತಕವನ್ನು ಕೂಡ ಧಾರಾಳವಾಗಿ ಕೊಂಡು ಓದುವ ಮೂಲಕ, ಕಲಿಯುವ ಮೂಲಕ ನಿಮ್ಮ ಸಿರಿವಂತರಾಗುವ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಬೆಂಗಳೂರಿನ ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದ ಮೌಲ್ಯ ರೂ. 225/- ಆಗಿದ್ದು ಅಮೇಜಾನಿನಲ್ಲಿ ಸುಲಭವಾಗಿ ಕೆಳಗಿನ ಲಿಂಕ್‌ ಮೂಲಕ ಕೊಳ್ಳಬಹುದಾಗಿದೆ. 

ಪುಸ್ತಕ ಕೊಳ್ಳಲು ಲಿಂಕ್...‌ https://amzn.to/4iFvFST

ನಿಮ್ಮ ಸಿರಿವಂತಿಕೆಯ ಕನಸು ಆದಷ್ಟು ಬೇಗ ನನಸಾಗಲಿ ಎಂದು ಹಾರೈಸುವೆ.

ನೀವೀಗಾಗಲೇ ರಂಗಸ್ವಾಮಿ ಮೂಕನಹಳ್ಳಿಯವರ ಇತರ ಪುಸ್ತಕಗಳನ್ನು ಓದಿದ್ದರೆ, ಯಾವು ಪುಸ್ತಕ/ಗಳು ಎಂಬುದನ್ನು ಕಾಮೆಂಟ್‌ ಮಾಡಿ ತಿಳಿಸಿ. ಈ ಸಂಬಂಧವಾಗಿ ಓದಬಹುದಾದ ಯಾವುದೇ ಪುಸ್ತಕಗಳಿದ್ದರೆ ಅವುಗಳನ್ನು ಕೂಡ ತಿಳಿಸಿ ಎಂದು ಕೋರುತ್ತೇನೆ.

ಸ್ನೇಹದಿಂದ,

- ಗುಬ್ಬಚ್ಚಿ ಸತೀಶ್.

ನನ್ನ ಯೂಟ್ಯೂಬ್‌ ಚಾನೆಲ್:‌ https://www.youtube.com/@sathishgbb

ಶುಕ್ರವಾರ, ಏಪ್ರಿಲ್ 11, 2025

2024 ನೇ ಸಾಲಿನ "ಹಂಸ ಕಥಾ ಪುರಸ್ಕಾರಕ್ಕೆ" ಕಥಾ ಸಂಕಲನಗಳ ಆಹ್ವಾನ....

2024 ನೇ ಸಾಲಿನ "ಹಂಸ ಕಥಾ ಪುರಸ್ಕಾರಕ್ಕೆ" ಕಥಾ ಸಂಕಲನಗಳ ಆಹ್ವಾನ....

(ಮೊದಲನೇ ವರ್ಷದ ಪ್ರಕಟಣೆ)


"ಹಂಸ" ಪ್ರತಿಷ್ಠಾನದಿಂದ ಕೊಡ ಮಾಡುವ 'ಹಂಸ ಕಥಾ' ಪುರಸ್ಕಾರ-2024 ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕಥೆಗಾರರಿಂದ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರು ಮುದ್ರಣ, ಅನುವಾದಿತ ಕಥಾ ಸಂಕಲನಗಳಿಗೆ ಪ್ರವೇಶವಿಲ್ಲ.

ಪ್ರಶಸ್ತಿಯು 5000 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.


ನಿಯಮಗಳು: - 

- 2024 ರಲ್ಲಿ ಪ್ರಕಟಗೊಂಡ ಕಥಾ ಸಂಕಲನದ 3 ಪ್ರತಿಗಳನ್ನು ಕಳುಹಿಸುವುದು. 

- ಕೃತಿಯು ಪ್ರಥಮ ಮುದ್ರಣವಾಗಿರಬೇಕು.

- ಯಾವುದೇ ವಯಸ್ಸಿನ ಇತಿಮಿತಿಯಿಲ್ಲ.


ಸಂಕಲನ ಕಳುಹಿಸುವ ಕೊನೆಯ ದಿನಾಂಕ:08/ ೦5/2025


ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:

ಬಸವರಾಜ ಜಾಡರ 

ಸಂಚಾಲಕರು 

ಹಂಸ ಪ್ರತಿಷ್ಠಾನ. 

ತಾಲೂಕು ಪಂಚಾಯತ್ ಎದುರುಗಡೆ ರೋಡ್ 

ಶಿವಾಜಿ ಸರ್ಕಲ್, ರಟ್ಟೀಹಳ್ಳಿ  

ತಾ|| ರಟ್ಟೀಹಳ್ಳಿ   ಜಿ|| ಹಾವೇರಿ - 581116 

ಪೋ ನಂ 8095362060 / 9742397104

***

"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...