ಶುಕ್ರವಾರ, ಏಪ್ರಿಲ್ 1, 2011

ಕ್ರಿಕೆಟ್ ವಿಶ್ವಕಪ್ ೨೦೧೧ ಸುಪ್ರಭಾತ

ಯುವ ಭಾರತ ಯುವ ಭಾರತ
ಯುವ ಭಾರತದ ಕ್ರಿಕೆಟ್ ಕಲಿಗಳೇ
೧೯೮೩ ವಿಶ್ವಕಪ್‍ನ ವಿಜೇತರೆ
ಈ ಬಾರಿಯೂ ಗೆಲ್ಲಿರಿ ನಮ್ಮ ಹುಲಿಗಳೇ

ಹುರಿದುಂಬಿಸಲು ಧೋನಿ ಮಹಾರಾಜನು
ಬಾಲಿಗೊಂದು ಸಿಕ್ಸರ್ ಎತ್ತಲಿ ಯುವರಾಜನು
ಮೊದಮೊದಲೇ ಚಚ್ಚಲಿ ಸಚಿನ್ನ! ಸೆಹವಾಗನು
ಜೊತೆಗೆ ಸಾಥ್ ನೀಡಲಿ ಗೌತಮ ಗಂಭೀರನು

ಬಿರುಗಾಳಿ ಚಂಡೆಸೆಯಲಿ ಜಹೀರ್, ಮುನಾಫನು
ಸುಂಟರಗಾಳಿ ಚೆಂಡಲಿಡಲಿ ಹರಭಜನನು
ಜೊತೆಜೊತೆಯಲೇ ಮಿಂಚಲು ಎಲ್ಲಾ ಬೌಲರ್‍ಗಳು
ಆಲ್‍ರೌಂಡರ್‍ಗಳ ಮಹಾಪೂರವೇ ಕೈ ಜೋಡಿಸುವರು

ನಾವೆಲ್ಲರೂ ನಿಮ್ಮೊಂದಿಗೆ, ನಾವೆಲ್ಲರೂ ನಿಮ್ಮೊಂದಿಗೆ
ಈ ಬಾರಿಯ ವಿಶ್ವಕಪ್ ನಮ್ಮದಾಗಲಿ
ಇಡೀ ವಿಶ್ವವೇ ಕೊಂಡಾಡಲಿ ನಮ್ಮ ವಿಜಯವ
ಎಲ್ಲರೂ ಹಾರಿಸಲಿ ನಮ್ಮ ತ್ರಿವರ್ಣ ಧ್ವಜವ

                                           - ಗುಬ್ಬಚ್ಚಿ ಸತೀಶ್.

3 ಕಾಮೆಂಟ್‌ಗಳು:

  1. ಸತೀಶ್ ನಾಳೆಗೆ ಒಳ್ಳೆ ಪ್ರಾರಂಭ ನಿಮ್ಮಿಂದ...ಅಂದಹಾಗೆ ನಿಮ್ಮ ಈ ಬ್ಯಾಟಿಂಗ್ ಸೆಹ್ವಾಗ್ ನ ನಾಳೆಯ ಮಿಂಚು ಅಬ್ಬರಕ್ಕೆ ಸ್ವಾಗತ ಅನ್ನಿಸ್ತಿದೆ...ಚಕ್ ದೇ ಇಂಡಿಯಾ...ನಿಮ್ಮ ಎಲ್ಲಾ ಸಾಲುಗಳೂ ಸಾಕಾರವಾಗಲಿ ನಾಳೆ...

    ಪ್ರತ್ಯುತ್ತರಅಳಿಸಿ
  2. ಸತೀಶ್ ಸರ್,

    ಕವನ ಚೆನ್ನಾಗಿದೆ..ಈಗ ಕ್ರಿಕೆಟ್ ಗೆದ್ದಾಯಿತಲ್ಲ..ಆದರ ಬಗ್ಗೆ ಹೊಸ ಕವನ ಬರಲಿ..

    ಪ್ರತ್ಯುತ್ತರಅಳಿಸಿ
  3. Sathish sir,

    Nimma blog ge modala bheti...sundarava kelavu barahagalannu odi aanandiside....Dnahyavadagalu...

    http://ashokkodlady.blogspot.com/

    ಪ್ರತ್ಯುತ್ತರಅಳಿಸಿ

ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು"

ಸ್ನೇಹಿತರೇ, ನಮಸ್ಕಾರ. ಖ್ಯಾತ ಹಣಕಾಸು ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು -  ಹಣ, ಸಂಪತ್ತು ಮತ್ತು ಯಶಸ್ಸಿನ ಹಿಂದಿನ ಸರಳ ಅಭ್ಯಾ...