ಸೋಮವಾರ, ಸೆಪ್ಟೆಂಬರ್ 11, 2023

ಚಂದ್ರನೂರಿಗೆ ವಿಹಾರ ಹೂಡುವ ‘ಹಕ್ಕಿ ಮತ್ತು ಮೋಡ’

ಮಕ್ಕಳ ಸಾಹಿತಿಗಳಿಗೆ ಯಾವುದಾದರೂ ಪ್ರಶಸ್ತಿ, ಪುರಸ್ಕಾರ, ಗೌರವ, ಸನ್ಮಾನಗಳು ದೊರೆತಾಗ ನನ್ನ ಮನಸ್ಸು ಮುದಗೊಳ್ಳುತ್ತದೆ. ಕಾರಣ, ನೆಪದಲ್ಲಾದರೂ ಅವರಿಗೆ ಸಿಗಬೇಕಾದ ಗೌರವ ದೊರೆಯಿತಲ್ಲ ಎಂಬ ಸಮಾಧಾನ. ಸಾಮಾನ್ಯವಾಗಿ ಮಕ್ಕಳ ಸಾಹಿತ್ಯ ರಚಿಸುವವರನ್ನು ಕಡೆಗಣಿಸಲಾಗುತ್ತದೆ ಎಂದು ಹೇಳುತ್ತಾರೆ. ಅದು ಎಷ್ಟು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ. ಆದರೆ, ಮಕ್ಕಳ ಸಾಹಿತ್ಯ ರಚಿಸದವರು ಸಾಹಿತಿಗಳೇ ಅಲ್ಲ ಎಂದು ಸುಲಭವಾಗಿ ಹೇಳಬಹುದು. ಯಾಕೆಂದರೆ, ಮಕ್ಕಳ ಸಾಹಿತ್ಯ ರಚಿಸುವವರು ಮಕ್ಕಳೇ ಆಗಿದ್ದರೆ ಓಕೆ. ಇಲ್ಲವಾದರೆ ಅವರು ಮಕ್ಕಳ ಮನಸ್ಸುಳ್ಳವರಾಗಿರಬೇಕಾಗುತ್ತದೆ. ಅದು ಎಲ್ಲರಿಗೂ ಆಗದ ಕೆಲಸ. ನಮ್ಮ ಕನ್ನಡ ಸಾಹಿತ್ಯದಲ್ಲಿ ಜೆ.ಪಿ. ರಾಜರತ್ನಂ, ಪಂಜೇ ಮಂಗೇಶರಾಯರು, ಪಳಕಳ ಸೀತಾರಾಮ ಭಟ್ಟ, ಆನಂದ ಪಾಟೀಲ, ಸುಮತೀಂದ್ರ ನಾಡಿಗ ಹೀಗೆ ಇನ್ನು ಮುಂತಾದ ಹಲವಾರು ಹೆಸರಾಂತ ಮಕ್ಕಳ ಸಾಹಿತಿಗಳಿದ್ದಾರೆ. ಪದ್ಯ ಸಾಹಿತ್ಯದಲ್ಲಷ್ಟೇ ಅಲ್ಲದೇ ಗದ್ಯ ಸಾಹಿತ್ಯದಲ್ಲೂ ಸಾಕಷ್ಟು ಕೃಷಿಮಾಡಿ ಕಿರಿಯರ ಹಿರಿಯರ ಮನಕ್ಕೆ ಲಗ್ಗೆಯಿಟ್ಟ ಬೋಳುವಾರು, ನಾ ಡಿಸೋಜ ಮುಂತಾದವರಿದ್ದಾರೆ. ನಾ ಡಿಸೋಜರವರಂತೂ ಇತ್ತೀಚಿಗೆ ಮಕ್ಕಳ ಸಾಹಿತ್ಯ ರಚನೆ ಮಾಡದವರನ್ನು ಯಾವ ಪ್ರಶಸ್ತಿಗೂ ಪರಿಗಣಿಸಬಾರದು ಎಂದು ಪ್ರೀತಿಪೂರ್ವಕವಾಗಿ ಆಗ್ರಹಿಸುತ್ತಲೇ ಸಾಹಿತಿಯಾದವರು ಮಕ್ಕಳ ಸಾಹಿತ್ಯವನ್ನೂ ಶ್ರೀಮಂತಗೊಳಿಸಬೇಕು ಎಂದು ಬುದ್ಧಿಮಾತು ಹೇಳಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ಶಿವರಾಮ ಕಾರಂತರೂ ಮಕ್ಕಳಿಗಾಗಿಯೇ ಸಾಹಿತ್ಯ ರಚನೆ ಮಾಡಿರುವುದು ನಮಗೆಲ್ಲಾ ಗೊತ್ತೇ ಇದೆ.

ಮೇಲಿನ ನನ್ನ ಪೀಠಿಕೆಗೆ ಕಾರಣವಾದ ವಿಷಯವೇನೆಂದರೆ ನಮ್ಮ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಹಲವು ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ ಮಕ್ಕಳ ಸಾಹಿತಿ ಪ್ರೊ. ಟಿ.ಎಸ್. ನಾಗರಾಜಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿರುವ ಸುದ್ಧಿಮಕ್ಕಳ ಸಾಹಿತಿಗೆ ಸಂದ ಗೌರವ ಎಂದು ಪತ್ರಿಕೆಗಳಲ್ಲಿ ಪ್ರಕಟವಾದದ್ದು. ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯಬಾಲ ಸಾಹಿತ್ಯ ಪುರಸ್ಕಾರ ಸಂದಾಗಲೇ ಇವರ ಮಕ್ಕಳ ಸಾಹಿತ್ಯದ ಪುಸ್ತಕಗಳನ್ನು ಓದುವ ಮನಸ್ಸಾಗಿದ್ದರೂ ಅದು ಕನ್ನಡಿಯೊಳಗಿನ ಗಂಟಾಗಿಯೇ ಉಳಿದುಬಿಟ್ಟಿತು. ಸಂದರ್ಭದಲ್ಲಾದರೂ ಅವರ ಪುಸ್ತಕವೊಂದನ್ನು ಓದೋಣವೆಂದರೆ ಅವರ ಯಾವುದೇ ಪುಸ್ತಕ ನನ್ನ ಬಳಿ ಇಲ್ಲ. ನೆಪದಲ್ಲಾದರೂ ಒಂದು ಮಕ್ಕಳ ಪದ್ಯಗಳ ಸಂಕಲನವನ್ನು ಓದಬೇಕೆಂದು ಹುಡುಕಿದಾಗಲೇ ನನ್ನ ಕೈಗೆ ಸಿಕ್ಕ ಪುಸ್ತಕ ಡಾ|| ಕೆ.ಬಿ. ರಂಗಸ್ವಾಮಿಯವರಹಕ್ಕಿ ಮತ್ತು ಮೋಡ ಮಕ್ಕಳ ಪದ್ಯಗಳ ಸಂಕಲನ.



     ನಮ್ಮ ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ವಿಪುಲವಾಗಿದೆ. ಮಕ್ಕಳ ಸಾಹಿತಿಗಳು ಕೂಡ ಹೆಚ್ಚಾಗಿಯೇ ಇದ್ದಾರೆ. ಡಾ|| ವಿದ್ಯಾವಾಚಸ್ಪತಿ ಕವಿತಾಕೃಷ್ಣ, ಕೃಷ್ಣಮೂರ್ತಿ ಬಿಳಿಗೆರೆ, ಸಿದ್ದರಾಜ್ ಐವಾರ್, ಪದ್ಮಾ ಕೃಷ್ಣಮೂರ್ತಿ, ಸುಶಿಲಾ ಸದಾಶಿವಯ್ಯ, ಕಮಲಾ ಬಡ್ಡಿಹಳ್ಳಿ, ಡಾ|| ಕೆ.ಬಿ. ರಂಗಸ್ವಾಮಿ, ವಿದ್ಯಾ ಅರಮನೆ ಇನ್ನು ಮುಂತಾದವರು ತಮ್ಮ ಮಕ್ಕಳ ಸಾಹಿತ್ಯ ರಚನೆಯಿಂದ ಗಮನ ಸೆಳೆಯುತ್ತಲೇ ಇರುತ್ತಾರೆ.



 ವೃತ್ತಿಯಲ್ಲಿ ಮಕ್ಕಳ ವೈದ್ಯರು, ಶಿಕ್ಷಕರೂ ಆಗಿರುವ ಡಾ|| ಕೆ.ಬಿ. ರಂಗಸ್ವಾಮಿಯವರು ತಮ್ಮಗರಿಕೆ ಮತ್ತುಕವಿತೆಗಷ್ಟೇ ಸಾಧ್ಯ ಎಂಬ ಕಿರುಗವಿತೆಗಳ ಸಂಕಲನ ಹಾಗುಬೆಳದಿಂಗಳ ಹೈಕುಗಳು ಎಂಬ ಚಂದಿರನ ಧ್ಯಾನದಲ್ಲೇ ಬರೆದಿರುವ ಇನ್ನೂರಕ್ಕು ಹೆಚ್ಚು ಹೈಕುಗಳ ಸಂಕಲನದ ಮೂಲಕ ಈಗಾಗಲೇ ಚಿರಪರಿಚಿತರಾಗಿದ್ದಾರೆ. ಇವರ ಪ್ರಬಂಧಗಳು ಹಲವು ಪ್ರಶಸ್ತಿಗಳನ್ನು ಪಡೆದಿವೆ. ವೃತ್ತಿಯಲ್ಲಿ ಮಕ್ಕಳ ವೈದ್ಯರಾಗಿರುವ ಇವರು ಸಹಜವಾಗಿ ಮಕ್ಕಳ ಒಡನಾಟದಲ್ಲಿದ್ದರೂ ಮಕ್ಕಳ ಪದ್ಯಗಳನ್ನು ರಚಿಸಿದ್ದು ಅವರೇ ಹೇಳಿರುವಂತೆ ತಮ್ಮ ಎರಡನೇ ಮಗನ ಜನನದ ನಂತರ. ಈಗಾಗಲೇ ಇವರು ತಮ್ಮ ಮಕ್ಕಳ ಪದ್ಯಗಳಿಗೆ ಸಹೃದಯರ ಮೆಚ್ಚುಗೆ ಪಡೆದಿದ್ದಾರೆ. ಇವರ 40 ಮಕ್ಕಳ ಪದ್ಯಗಳನ್ನುಹಕ್ಕಿ ಮತ್ತು ಮೋಡ ಪುಸ್ತಕದಲ್ಲಿ ಸಂಕಲಿಸಲಾಗಿದೆ.

 ʼಹಕ್ಕಿ ಮತ್ತು ಮೋಡ ಸಂಕಲನದ ಎಲ್ಲಾ ಪದ್ಯಗಳು ನನಗೆ ಮೊದಲ ಓದಿನಲ್ಲೇ ಬಹಳ ಖುಷಿಕೊಟ್ಟವು. ಓದಿನ ಖುಷಿಯಿರುತ್ತದ್ದಲ್ಲ ಅದರಲ್ಲೂ ಮಕ್ಕಳ ಪದ್ಯಗಳ ಓದಿನ ಖುಷಿಯಿರುತ್ತದ್ದಲ್ಲ ಅದು ವರ್ಣಿಸಲು ಅಸಾಧ್ಯ. ಖುಷಿಯನ್ನು ಓದಿಯೇ ಅನುಭವಿಸಿಬೇಕು. ಸಂಕಲನದಲ್ಲಿ ನನಗೆ ಎರಡು ಪದ್ಯಗಳು ಬಹಳ ಅಂದರೆ ಬಹಳ ಇಷ್ಟವಾದವು. ಒಂದು ಸಂಕಲನದ ಶೀರ್ಷಿಕೆ ಪದ್ಯಹಕ್ಕಿ ಮತ್ತು ಮೋಡ, ಇನ್ನೊಂದುಚಂದ್ರನೂರಿಗೆ ವಿಹಾರ.’ ಆದಕಾರಣದಿಂದಲೇ ಇವೆರಡು ಪದ್ಯಗಳ ಹೆಸರನ್ನು ಸೇರಿಸಿಯೇ ಅಂಕಣಕ್ಕೆ ಶೀರ್ಷಿಕೆಯನ್ನು ಬರೆದಿದ್ದೇನೆ.

 

ಬಿಂಕದಿ ಹಾರುತ

ಬಾನಲಿ ಹಕ್ಕಿ

ಠಣ್ಣನೆ ಹೊಡೆಯಿತು

ಮೋಡಕ್ಕೆ ಡಿಕ್ಕಿ

 

ʼಹಕ್ಕಿ ಮತ್ತು ಮೋಡ ಪದ್ಯದಲ್ಲಿ ಹಕ್ಕಿ ಮತ್ತು ಮೋಡ ಅಪಘಾತಕ್ಕೀಡಾಗಿ ಜಗಳಕ್ಕಿಳಿಯುತ್ತವೆ. ಆಗ ಆಗಸ ಇವೆರಡನ್ನು ಸಮಾಧಾನ ಮಾಡಿ ಜಗಳವನ್ನು ಬಿಡಿಸುವುದೇ ಚಂದ

 

ಜಗಳವು ಬೇಡ

ಗೆಳೆಯರೇ ನಿಮ್ಮಲಿ

ನೀವಿಬ್ಬರೂ ಇರುವುದು

ನನ್ನಂಗಳದಲಿ

 

ʼಚಂದ್ರನೂರಿಗೆ ವಿಹಾರ ಪದ್ಯದಲ್ಲಿ ಚಂದಿರನೂರ ಹಬ್ಬಕ್ಕೆ ಲಗ್ಗೆಹಾಕುವ ಓದುಗ ಮನಸ್ಸು

 

ಕಜ್ಜಾಯ ಶ್ಯಾವಿಗೆ

ಒಬ್ಬಟ್ಟು ಸಂಡಿಗೆ

ಚೆನ್ನಾಗಿ ಮೆದ್ದು

ಢರ‍್ರನೆ ತೇಗೋಣ

 

ಎಂದು ಅಲ್ಲಿ ಹಬ್ಬದೂಟ ಮಾಡಿ ಹಾಗೇ ವಿಹರಿಸುತ್ತಾ

 

ಅರಮನೆ ತೋಟದಿ

ಚಂದ್ರನ ಜೊತೆಯಲಿ

ಜೂಟಾಟ ಆಡೋಣ

ಒಂದಷ್ಟು ಕಥೆಗಳ ಕೇಳೋಣ

 

ಎಂದು ನಲಿದಾಡಿನುಣ್ಣನೆ ಕೆನ್ನಗೆ / ಮುತ್ತನ್ನು ಕೊಟ್ಟು ಮನೆಯ ಹಾದಿ ಹಿಡಿಯುತ್ತದೆ.

 

ಸಂಕಲನದ ಬಹುತೇಕ ಪದ್ಯಗಳಲ್ಲಿ ಪ್ರಾಣಿಪಕ್ಷಿಗಳ, ಕ್ರಿಮಿಕೀಟಗಳ ಒಡನಾಟವಿದೆ. ಚಿಟ್ಟೆ, ಇರುವೆ, ಕೊಕ್ಕರೆ, ನವಿಲು, ಬೆಕ್ಕು, ಕಂಬಳಿ ಹುಳು, ಬೆಳ್ಳಕ್ಕಿ, ತಾಯಿ ಕೋಳಿ ಇಲ್ಲಿನ ಪದ್ಯಗಳಲ್ಲಿ ಬಂದು ಅವುಗಳದೇ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ. ಪದ್ಯಗಳಲ್ಲಿ ಬಳಸಿರುವ ಪ್ರಾಸವು ಗಮನ ಸೆಳೆಯುತ್ತದೆ. ಉದಾಹರಣೆಗೆಕಂಬಳಿ ಹುಳು ಪದ್ಯದಅಂಗಳದೊಳಗೆ ಕಂಬಳಿ ಹುಳು / ತೆವಳುತ ಬಂದಿತು ಪುಳು ಪುಳು ಸಾಲುಗಳನ್ನು ನೋಡಬಹುದು.

 ಸಂಕಲನದಲ್ಲಿ ಲೌಕಿಕ ಸಂಬಂಧಗಳಾದ ಅಪ್ಪ, ಅಮ್ಮ, ಅಜ್ಜಿ, ಅಣ್ಣ, ತಮ್ಮ, ಮಿಸ್ಸು, ಫ್ಯಾಮಿಲಿ ಡಾಕ್ಟರು, ಬಲೂನು ಮಾಮ ಕುರಿತ ಪದ್ಯಗಳ ಜೊತೆಗೆ ಅಲೌಕಿಕವಾದ ದೇವರು, ಮುದ್ದುಕೃಷ್ಣನ ಕುರಿತು ಸೊಗಸಾದ ಪದ್ಯಗಳಿವೆ. ವಿಮಾನ ಯಾನ ಮಾಡಿಸುವ, ಚಾರಣದ ಸಾಹಸ ಮಾಡಿಸುವ ಪದ್ಯಗಳೂ ಇವೆ. ‘ಮುದ್ದು ಕೃಷ್ಣ ಪದ್ಯದಲ್ಲಿ ತಮ್ಮನ ಹೆಸರೇ ಮುದ್ದು ಕೃಷ್ಣ! ಅವನು ಹೇಳುತ್ತಾನೆ, ‘ಚಪ್ಪರಿಸುವೆವು ನಾನು ಅಣ್ಣ / ಹಂಚಿಕೊಂಡು ತಾಜಾಗಿಣ್ಣ.’  

  ಸಂಕಲನದ ಮತ್ತೊಂದು ಮುಖ್ಯ ಪದ್ಯನಾನಾಗ ಬಯಸುವೆ ಮಕ್ಕಳು ಏನಾಗಬೇಕೆಂದು ಹೇಳುವ ನೀತಿಯ ಪಾಠದಂತಿದೆ. ‘ನಾನಾಗ ಬಯಸುವೆ ಬಿದಿರಿನ ಕೊಳಲು / ಹೊಮ್ಮಿಸಿ ಸ್ವರಗಳ ಮರೆಸುವೆ ಅಳಲು ರೀತಿಯ ಅರ್ಥವತ್ತಾದ ಸಾಲುಗಳು ಇದಕ್ಕೆ ಸಾಕ್ಷಿಯಾಗಿವೆ. ಪ್ರಶ್ನೆ, ಒಗಟಿನ ರೂಪದ ಪದ್ಯಗಳು ಮಕ್ಕಳ ಜ್ಞಾನಾರ್ಜನೆಗೆ ಸಹಕಾರಿಯಾಗಿವೆ. ಹಕ್ಕಿಗಳಿಗೆ ಪ್ರಶ್ನೆ ಪದ್ಯದಚಿಂವ್ ಚಿಂವ್ ಚಿಂವ್ ಚಿಂವ್ ಗುಬ್ಬಚ್ಚಿ ಮರಿಯೇ / ನಮ್ಮನು ತೊರೆದು ಹೋದುದು ಸರಿಯೇ?’ ಎಂಬ ಪ್ರಶ್ನೆ ನಮ್ಮನ್ನೇ ನಾವು ಪ್ರಕೃತಿಯನ್ನು ಕುರಿತು ಚಿಂತನೆಗೆ ಹಚ್ಚುವಂತಿವೆ. ಸಂಕಲನದಲ್ಲಿ ಪ್ರಕೃತಿಯ ಹಬ್ಬವಿದೆ, ಹಿತ್ತಲಿದೆ, ಜಾತ್ರೆಯೂ ಇದೆ. ‘ಮೊಲದ ಜಾಣ್ಮೆ ರೀತಿಯ ಕಥನ ಪದ್ಯವೂ ಇದೆ.

ಒಟ್ಟಿನಲ್ಲಿ ಹಾ. ಉಮೇಶ ಸೊರಬರವರ ಸಂಕ್ಷಿಪ್ತ ಮುನ್ನುಡಿಯೊಂದಿಗೆ ಪ್ರಕಟವಾಗಿರುವ ಡಾ|| ಕೆ.ಬಿ. ರಂಗಸ್ವಾಮಿಯವರಹಕ್ಕಿ ಮತ್ತು ಮೋಡ ಮಕ್ಕಳ ಪದ್ಯಗಳ ಪುಸ್ತಕವು ಸಂಕಲನದತಮ್ಮಪದ್ಯದಅವಂಗೆ ಮಾತೇ ಬರೊಲ್ಲ / ಆದ್ರೂ ನಂಗೆ ಬೋರಾಗಲ್ಲ ಎಂಬ ಸಾಲುಗಳಂತೆ ಎಲ್ಲೂ ಬೋರು ಹೊಡೆಸಲ್ಲ. ಬದಲಾಗಿ ಓದುಗನನ್ನು ಬೆರಗಾಗಿಸಿ ಬಾಲ್ಯದ ಆಗಸದಲ್ಲಿ ಒಮ್ಮೆ ಕೈಹಿಡಿದುಕೊಂಡು ಓಡಾಡಿಸಿಕೊಂಡು, ಆಟವಾಡಿಸಿಕೊಂಡು ಬರುತ್ತವೆ.

ಗೋಮಿನಿ ಪ್ರಕಾಶನ – ಒಂದು ಕಿರು ಪರಿಚಯ

 ಗೋಮಿನಿ ಪ್ರಕಾಶನ – ಒಂದು ಕಿರು ಪರಿಚಯ

ಗುಬ್ಬಚ್ಚಿ ಸತೀಶ್ ಅವರ “ಮಳೆಯಾಗು ನೀ...” ಕವನ ಸಂಕಲನ ಪ್ರಕಟಿಸುವ ಮೂಲಕ 2010ರಲ್ಲಿ  ಆರಂಭವಾದ ಗೋಮಿನಿ ಪ್ರಕಾಶನವು ಇದುವರೆವಿಗೂ 75ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಗುಬ್ಬಚ್ಚಿ ಸತೀಶ್ ಅವರ ಪುಸ್ತಕಗಳನ್ನು ಪ್ರಕಟಿಸುತ್ತಲೇ ಗುಬ್ಬಚ್ಚಿ ಸತೀಶ್ ಅವರ ಶ್ರೀಮತಿ ಜಿ.ಸಿ. ಚಂಪರಾಣಿ ಇತರ ಉದಯೋನ್ಮುಖ ಮತ್ತು ಪ್ರತಿಭಾನ್ವಿತರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ತಮ್ಮ ಪುಸ್ತಕಗಳನ್ನು ಕೂಡ ಪ್ರಕಟಿಸಿದ್ದಾರೆ. ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕನ್ನಡ ಮಾತ್ರವಲ್ಲದೇ, ಇಂಗ್ಲೀಷ್ ಪುಸ್ತಕಗಳು ಕೂಡ ಪ್ರಕಟವಾಗಿವೆ. 

ಗೋಮಿನಿ ಪ್ರಕಾಶನದ ಪ್ರಕಟಣೆಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಒಳಗೊಂಡಂತೆ ಇತರ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಗುಬ್ಬಚ್ಚಿ ಸತೀಶ್ ಪ್ರಕಾಶನದ ಸಂಪಾದಕರಾಗಿದ್ದು, ಪ್ರಕಾಶನವು ತನ್ನದೇ ವೆಬ್‌ಸೈಟ್ ಮೂಲಕ ಪ್ರಕಟಣೆಗಳನ್ನು ಮಾರುವುದಲ್ಲದೆ ರಾಜ್ಯದಾದ್ಯಂತ ವಿತರಣೆಯ ವ್ಯವಸ್ಥೆಯನ್ನು ಹೊಂದಿದೆ. 

ಪ್ರಕಾಶನದ ವತಿಯಿಂದ ತುಮಕೂರಿನಲ್ಲಷ್ಟೇ ಅಲ್ಲದೇ, ಬೆಂಗಳೂರಿನಲ್ಲಿ ಕೂಡ ಪುಸ್ತಕ ಬಿಡುಗಡೆ, ಪರಿಚಯ ಕರ‍್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯವನ್ನು ಪಸರಿಸುವ ಕೆಲಸವನ್ನೂ ಕೂಡ ಪ್ರಕಾಶನ ಮಾಡಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಏರ್ಪಡಿಸುವ ಪುಸ್ತಕ ಮೇಳಗಳಲ್ಲೂ ಕೂಡ ಪ್ರಕಾಶನ ಯಶಸ್ವಿಯಾಗಿ ಭಾಗವಹಿಸಿ, ತನ್ನ ಪ್ರಕಟಣೆಗಳನ್ನು ಓದುಗರಿಗೆ ತಲುಪಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ.

ಈಗ ನಾಡಿನ ಪ್ರಮುಖ ಯುವ ಸಾಹಿತಿಯಾಗಿರುವ ಶ್ರುತಿ ಬಿ.ಎಸ್. ಅವರ ಮೊದಲ ಪುಸ್ತಕ “ಬದುಕ ದಿಕ್ಕು ಬದಲಿಸಿದ ಆಸ್ಟಿಯೋಸರ್ಕೋಮ” ಪುಸ್ತಕವನ್ನು ಪ್ರಕಟಿಸಿ, ನಂತರ ಅವರ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ. ನಾಡಿನ ಪ್ರಮುಖ ನ್ಯಾನೋ ಕತೆಗಾರ ವಿ. ಗೋಪಕುಮಾರ್ ಅವರ ಮೂರು ನ್ಯಾನೋ ಕತೆಗಳ ಸಂಕಲನಗಳು ಸೇರಿದಂತೆ ಒಟ್ಟು ಇದುವರೆವಿಗೂ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ. “ಮೈಸೂರಿನ ಪುಟಗಳು” ಯೂಟ್ಯೂಬ್ ಖ್ಯಾತಿಯ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ ಪ್ರಖ್ಯಾತ “ಮರೆತುಹೋದ ಮೈಸೂರಿನ ಪುಟಗಳು” ಪುಸ್ತಕವನ್ನು ಒಳಗೊಂಡಂತೆ ಎರಡು ಪುಸ್ತಕಗಳು ಪ್ರಕಟವಾಗಿವೆ. ಸಮಕಾಲೀನ ಕನ್ನಡ ಸಾಹಿತ್ಯದ ಮೇರುಪ್ರತಿಭೆ ಕವಿ ವಾಸುದೇವ ನಾಡಿಗರ ಹಲವು ಸಂಕಲನಗಳು ಪ್ರಕಟವಾಗಿ, ಇವರ ಐದು ಸಂಕಲನಗಳ ಸಂಕಲನ “ಅನುಕ್ತ” ಕೂಡ ಪ್ರಕಟವಾಗಿ ನಾಡಿನ ಕಾವ್ಯಪ್ರಿಯರ ಮನಗೆದ್ದಿದೆ. ಇತ್ತೀಚೆಗೆ ಪ್ರಕಟವಾದ ಪೂರ್ಣಿಮಾ ಮಾಳಗಿಮಾನಿ ಅವರ ಕಾದಂಬರಿ “ಇಜಯಾ” ತಿಂಗಳೊಳಗೆ ಐನೂರು ಪ್ರತಿಗಳ ದಾಖಲೆ ಮಾರಾಟ ಕಂಡು ಕನ್ನಡ ಸಾಹಿತ್ಯಕ್ಕೆ ಗೋಮಿನಿ ಪ್ರಕಾಶನದ ಮೂಲಕ ಮತ್ತೊಬ್ಬ ಸಾಹಿತಿಯ ಪರಿಚಯ ಮಾಡಿಕೊಟ್ಟಿದೆ.

ಕಲಾವಿದರಾದ ಅಜಿತ್ ಎಸ್. ಕೌಂಡಿನ್ಯ, ಕತೆಗಾರ ಎಚ್.ಕೆ. ಶರತ್, ಬೆಂಗಳೂರಿನ ಶ್ರೀ ವೆಂಕಟೇಶ್ ಅವರ ರೀಗಲ್ ಪ್ರಿಂಟ್ಸ್ ಸೇರಿದಂತೆ ಕಲಾವಿದರಾದ ಸಂತೋಷ್‌ ಸಸಿಹಿತ್ಲು, ಮುಂಬೈಯ ಟ್ರಿನಿಟಿ ಅಕಾಡೆಮಿ ಫಾರ್‌ ಕಾರ್ಪೋರೇಟ್‌ ಟ್ರೈನಿಂಗ್‌ ಲಿಮಿಟೆಡ್‌ ಸಂಸ್ಥೆಗಳಂತಹ ಉತ್ತಮ ತಂಡದೊಂದಿಗೆ ಗೋಮಿನಿ ಪ್ರಕಾಶನವು ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಿ, ಆಧುನಿಕ ಸೌಲಭ್ಯ ಒದಗಿಸಿರುವ ಎಲ್ಲಾ ಮಾಧ್ಯಮಗಳ ಮೂಲಕ ಸಕ್ರಿಯವಾಗಿ ಪುಸ್ತಕಗಳ ಪರಿಚಯ ಮತ್ತು ಮಾರಾಟದಲ್ಲಿ ಪ್ರಕಾಶನ ತೊಡಗಿಕೊಂಡಿದೆ.

ತನ್ನ ಪುಸ್ತಕಕ್ಕೆ ಪ್ರಕಾಶಕರು ಸಿಗಲಿಲ್ಲವೆಂಬ ಬೇಸರದಿಂದ ಹೊರಬಂದು, ಅಂಕಿತ ಪುಸ್ತಕದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಅವರ ಕಿವಿಮಾತಿನಂತೆ, ಕತೆಗಾರ ವಸುಧೇಂದ್ರ ಅವರ ಸಲಹೆ ಮತ್ತು ತುಮಕೂರಿನ ಪ್ರೊ. ಎಂ.ಎಚ್.‌ ನಾಗರಾಜು ಅವರ ಸಲಹೆಗಳನ್ನು ಪರಿಗಣಿಸಿ, ಬಹುಮುಖ್ಯವಾಗಿ ಕತೆಗಾರ ಕೆ. ಗಣೇಶ್ ಕೋಡೂರ್ ಅವರ ಮಾರ್ಗದರ್ಶನದಲ್ಲಿ ಗುಬ್ಬಚ್ಚಿ ಸತೀಶ್ ತಮ್ಮ ಶ್ರೀಮತಿ ಚಂಪ ಸತೀಶ್ ಅವರೊಂದಿಗೆ ಶುರುಮಾಡಿದ ಗೋಮಿನಿ ಪ್ರಕಾಶನ, ಸಕ್ರಿಯವಾಗಿ ಪುಸ್ತಕ ಪ್ರಕಾಶನದಲ್ಲಿ ತೊಡಗಿಕೊಂಡಿದೆ. ಪ್ರಕಾಶನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ʼಅತ್ಯುತ್ತಮ ಪುಸ್ತಕ ಸೊಗಸು ಬಹುಮಾನʼ (ಮಕ್ಕಳ ಹಿರಿಯ ಸಾಹಿತಿ ಶ್ರೀ ತಮ್ಮಣ್ಣ ಬೀಗಾರ ಅವರ "ಫ್ರಾಗಿ ಮತ್ತು ಗೆಳೆಯರು" ಕಾದಂಬರಿ) ಸಂದಿದೆ.


ಪ್ರಕಾಶನದ ವಿಳಾಸ:

ಗೋಮಿನಿ ಪ್ರಕಾಶನ

“ಅಪರಿಮಿತ”, 6ನೇ ಕ್ರಾಸ್,

ಚನ್ನಕೇಶವ ಲೇಔಟ್,

ಗೂಳೂರು – 572118

ತುಮಕೂರು ತಾಲ್ಲೂಕು ಮತ್ತು ಜಿಲ್ಲೆ.

ಮೊಬೈಲ್: 99866 92342

ಇಮೈಲ್: sathishgbb@gmail.com

ವೆಬ್‌ಸೈಟ್:‌ www.gominiprakashana.com




"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...