ಭಾನುವಾರ, ಸೆಪ್ಟೆಂಬರ್ 3, 2023

ಯಶಸ್ವಿಯಾಗಿ ಉಡಾವಣೆಯಾದ ʼಆದಿತ್ಯ ಎಲ್‌ 1ʼ 125 ದಿನಗಳ ಕ್ಷಣಗಣನೆ ಆರಂಭ…

 ಪ್ರಿಯ ಸ್ನೇಹಿತರೇ,

ʼಚಂದ್ರಯಾನ 3ʼ ರ ಯಶಸ್ಸಿನ ಬೆನ್ನಲ್ಲೇ ಇಸ್ರೋ ಸೂರ್ಯಾಯಾನ ʼಆದಿತ್ಯ ಎಲ್‌ 1ʼ ಸೋಲಾರ್‌ ಮಿಷನ್‌ ಕೈಗೊಂಡಿದ್ದು, ಇಂದು (02/09/2023) ಯಶಸ್ವಿಯಾಗಿ ಬೆಳಿಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣೆ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ʼಆದಿತ್ಯ-ಎಲ್‌ 1ʼ ಬಾಹ್ಯಾಕಾಶ ನೌಕೆಯನ್ನು ಹೊತ್ತು ಯಶಸ್ವಿಯಾಗಿ ಆಕಾಶಕ್ಕೆ ಜಿಗಿದಿದೆ. ಕೇಂದ್ರ ಸರಕಾರ ಈ ಯೋಜನೆಗಾಗಿ 380 ಕೋಟಿ ರೂಗಳ ಅನುದಾನ ನೀಡಿದ್ದು, ಸೂರ್ಯನ ಮೇಲೆ ಗಮನ ಇಡಲು ಇಸ್ರೋ ನಿಗದಿಪಡಿಸಿರುವ ನ್ಯೂಟನ್‌ ಲಾಂಗ್ರೇಜ್‌ ಪಾಯಿಂಟ್‌ ಎಲ್‌ 1 ತಲುಪಲು 125 ದಿನಗಳ ಸಮಯಾವಕಾಶ ಬೇಕಿದೆ. 

ಇಲ್ಲಿ ನೌಕೆಯಲ್ಲಿ ಕಳಿಸಿರುವ ಬಾಹ್ಯಾಕಾಶ ಆಧಾರಿತ ಭಾರತೀಯ ಪ್ರಯೋಗಾಲಯ ಸ್ಥಾಪಿತವಾಗಲಿದೆ. ಭೂಮಿಯಿಂದ 15 ಲಕ್ಷ ಕಿ.ಮೀ. ದೂರದ ಎಲ್‌1 ಪಾಯಿಂಟಿನಿಂದ ಸೂರ್ಯನ ಅಧ್ಯಯನ ಮಾಡಲು ಭಾರತದ ಚೊಚ್ಚಲ ಸೌರಮಂಡಲ ಸಾಹಸ ಇದಾಗಿದೆ. ಮತ್ತಷ್ಟು ಹತ್ತಿರದಿಂದ ಸೂರ್ಯನ ಪ್ರಕ್ರಿಯೆಗಳನ್ನು ಗಮನಿಸುವುದು ನಮ್ಮ ಉದ್ದೇಶವಾಗಿದೆ ಎಂದು ಇಸ್ರೋ ಮುಖ್ಯಸ್ಥರಾದ ಎಸ್.‌ ಸೋಮನಾಥ್‌ ಅವರು ತಿಳಿಸಿದ್ದಾರೆ. ಈ ಯಾನವೂ ಯಶಸ್ವಿಯಾಗಲಿ ಎಂಬುದು ಎಲ್ಲ ಭಾರತೀಯರ ಹಾರೈಕೆ…

ಧನ್ಯವಾದಗಳು…

“ಚಂದ್ರಯಾನ-3”ರ ಯಶಸ್ಸಿಗೆ ಮಸಾಲೆದೋಸೆ, ಫಿಲ್ಟರ್‌ ಕಾಫಿ ಕೂಡ ಕಾರಣವಂತೆ…

 ಪ್ರಿಯ ಸ್ನೇಹಿತರೇ,


ನಮ್ಮ ಭಾರತದ ಹೆಮ್ಮೆ ಇಸ್ರೋ ಚಂದ್ರಯಾನ-3ನ್ನು ಯಶಸ್ವಿಯಾಗಿ ಮುಗಿಸಿ ಸೂರ್ಯಯಾನಕ್ಕೆ ಆದಿತ್ಯ ಎಲ್‌ 1 ಉಡಾವಣೆಗೆ ಸಜ್ಜಾಗುತ್ತಿರುವ ಹೊತ್ತಲೇ ಚಂದ್ರಯಾನ-3ರ ಯಶಸ್ಸಿಗೆ ಕಾರಣವೇನು ಎಂಬ ಹಲವು ಚರ್ಚೆಗಳು ಶುರುವಾಗಿವೆ. ಚಂದ್ರಯಾನ-2ರ ಸೋಲಿನ ಬಳಿಕ ಗೆಲುವು ಸುಲಭವಾಗಿರಲಿಲ್ಲ. ಧೈರ್ಯಗುಂದಿದ ವಿಜ್ಞಾನಿಗಳಲ್ಲಿ ಹುರುಪು ತುಂಬಿ ಕೆಲಸಕ್ಕೆ ಹಚ್ಚಬೇಕಿತ್ತು. ನಿಗದಿತ ಸಂಬಳ ಬಿಟ್ಟರೆ ಯಾವುದೇ ಪ್ರೋತ್ಸಾಹಕ ಧನ ಅಥವಾ ಉಡುಗೊರೆಗಳ ಬೆಂಬಲವಿರಲಿಲ್ಲ. ಈ ನಿಟ್ಟಿನಲ್ಲಿ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು, ಹುರಿದುಂಬಿಸಲು ಇಸ್ರೋ ಪ್ರತಿದಿನ ಸಂಜೆ 5ಕ್ಕೆ ಉಚಿತವಾಗಿ ಮಸಾಲೆದೋಸೆ ಮತ್ತು ಫಿಲ್ಟರ್‌ ಕಾಫಿಯನ್ನು ನೀಡುತ್ತಿತ್ತಂತೆ. ಹೌದು, ನೀವು ನಂಬಲೇ ಬೇಕು, ಉಚಿತ ಮಸಾಲದೋಸೆ ಮತ್ತು ಫಿಲ್ಟರ್‌ ಕಾಫಿ. ಮಸಾಲೆ ದೋಸೆ ಸವಿದು, ಫಿಲ್ಟರ್‌ ಕಾಫಿ ಹೀರಿದ ನಂತರ ಮತ್ತಷ್ಟು ಉತ್ಸುಕರಾಗಿ ಸಂತೋಷದಿಂದ ಇಸ್ರೋ ವಿಜ್ಞಾನಿಗಳು ಮಿಷನ್‌ ಚಂದ್ರಯಾನ-3ರಲ್ಲಿ ತೊಡಗುತ್ತಿದ್ದರಂತೆ. ಈಗ ಫಲಿತಾಂಶ ನಮ್ಮ ಕಣ್ಮುಂದೆಯೇ ಇದೆ… ಈ ಸಂಗತಿಯನ್ನು ಇಸ್ರೋದ ಪ್ರಮುಖ ವಿಜ್ಞಾನಿ ಮತ್ತು ಚಂದ್ರಯಾನ-3ರ ಪ್ರಮುಖ ರೂವಾರಿಯಲ್ಲೊಬ್ಬರೂ ಆಗಿರುವ ಶ್ರೀ ವೆಂಕಟೇಶ್ವರ ಶರ್ಮ ಅವರು ಪತ್ರಕರ್ತೆ ಬರ್ಖಾ ದತ್‌ ಅವರಲ್ಲಿ ಹಂಚಿಕೊಂಡಿದ್ದು, ಇದು ವಾಷಿಗ್ಟಂನ್‌ ಪೋಸ್ಟ್‌ನಲ್ಲಿ ವರದಿಯಾಗಿದೆ…

ಧನ್ಯವಾದಗಳು…

ಶುಕ್ರವಾರ, ಸೆಪ್ಟೆಂಬರ್ 1, 2023

“ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾ ಇಷ್ಟವಾಗಲು ಹತ್ತು ಅಂಶಗಳು… ಇಷ್ಟವಾಗದ ಒಂದೇ ಅಂಶ…

ಪ್ರಿಯ ಸ್ನೇಹಿತರೇ,

ರಕ್ಷಿತ್‌ ಶೆಟ್ಟಿ ಅವರ ಅಭಿನಯದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾ ಇಂದಿನಿಂದ ತೆರೆಕಂಡಿದ್ದು, ನಾನು ನೆನ್ನೆಯೇ ತುಮಕೂರಿನ ಐನಾಕ್ಸ್‌ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿದ್ದ ಪೇಯ್ಡ್‌ ಪ್ರಿಮೀಯರ್‌ ಶೋನಲ್ಲಿ ಸಿನಿಮಾವನ್ನು ನೋಡಿ, ನನಗೆ ಇಷ್ಟವಾದ ಹತ್ತು ಅಂಶಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ…

ಮೊದಲಿಗೆ, ಸಂಗೀತ…  ಸಿನಿಮಾದ ಕಥೆ… ಇದು ಪ್ರೇಮಕಥೆ… ಎಷ್ಟೋ ಪ್ರೇಮಕತೆಗಳು ಈಗಾಗಲೇ ಬಂದಿದೆಯೆನ್ನುವಷ್ಟರಲ್ಲಿ ಸಿನಿಮಾದ ಹಿನ್ನೆಲೆ ಸಂಗೀತ ನಿಮ್ಮನ್ನು ಕಟ್ಟಿಹಾಕಿರುತ್ತದೆ… ಸಂಗೀತ ಚರಣ್‌ ರಾಜ್…

ಎರಡನೆಯದಾಗಿ, ಚಿತ್ರಕಥೆ… ನಿರ್ದೇಶಕರು ಕಥೆ ಹೇಳಿರುವ ಶೈಲಿ ಬಹಳ ಇಷ್ಟವಾಗುತ್ತದೆ…‌ ರಚನೆ ಮತ್ತು ನಿರ್ದೇಶನ ಹೇಮಂತ ಎಮ್‌ ರಾವ್…

ಮೂರನೆಯದಾಗಿ, ಸಿನಿಮಾಟೋಗ್ರಫಿ ನಿರ್ದೇಶಕರ ತಾಳಕ್ಕೆ ತಕ್ಕಂತಿದೆ…‌ ಛಾಯಗ್ರಹಣ ಅದ್ವೈತ ಗುರುಮೂರ್ತಿ…

ನಾಲ್ಕನೇಯದಾಗಿ, ಕವಿ ಗೋಪಾಲಕೃಷ್ಣ ಅಡಿಗ ಟ್ರಸ್ಟಿಗೆ ಕೃತಜ್ಞತೆಗಳನ್ನು ಸಲ್ಲಿಸಿರುವುದು. ಕವಿ ಅಡಿಗರ ʼಯಾವ ಮೋಹನ ಮುರಳಿ ಕರೆಯಿತುʼ ಗೀತೆಯಲ್ಲಿ ಈ ಸಿನಿಮಾದ ಹೆಸರು “ಸಪ್ತ ಸಾಗರದಾಚೆ ಎಲ್ಲೋ” ಬರುತ್ತದೆ…

ಐದನೆಯದು, ಈ ಸಿನಿಮಾದ ಎಡಿಟಿಂಗ್‌ ಇಷ್ಟವಾಯ್ತು. ಸಂಕಲನ ಸುನಿಲ್‌ ಎಸ್‌ ಭಾರಧ್ವಾಜ್…

ಆರನೆಯದು, ಪೋಷಕ ಪಾತ್ರಗಳು… ಅವರುಗಳ ಆಯ್ಕೆ, ಸಂಭಾಷಣೆ… ಅಭಿನಯ‌ ಬಹಳ ಇಷ್ಟವಾಗುತ್ತೆ…

ಏಳನೆಯದು, ನಿರ್ದೇಶಕರು… ಓನ್‌ ಅಂಡ್‌ ಓನ್ಲಿ ಹೇಮಂತ್‌ ಎಮ್ ರಾವ್… ಸಿನಿಮಾವನ್ನು ಎರಡು ಭಾಗಗಳಲ್ಲಿ ಹೇಳಿರುವುದು ಇಷ್ಟವಾಗುತ್ತದೆ.

ಎಂಟನೇಯದು, ನಾಯಕಿ ರುಕ್ಮಿಣಿ ವಸಂತ್‌ ಅಭಿನಯ

ಒಂಭತ್ತನೆಯದು, ರಕ್ಷಿತ್‌ ಶೆಟ್ಟಿ ಅಭಿನಯ‌…

ಹತ್ತನೆಯದು, ಸಿನಿಮಾದ ಕತೆ… ಪ್ರೇಮಕತೆ… ಇದು ಕನ್ನಡ ಸಿನಿಮಾಗಳ ಮತ್ತೊಂದು ಕ್ಲಾಸಿಕ್‌ ಪ್ರೇಮಕತೆಯಾಗುತ್ತದೆ.

ಮತ್ತು ಇನ್ನು ಇಷ್ಟವಾಗುವ ಅಂಶಗಳಿದ್ದರೂ ಇಷ್ಟ ಆಗದೇ ಇದ್ದ ಅಂಶವೆಂದರೆ ಚಿತ್ರಗಳಲ್ಲಿ ಕತೆಗೆ ತಕ್ಕಂತೆ ಪೂರಕವಾಗಿ ಹಾಡುಗಳು ಅರ್ಥಾತ್‌ ಸಾಹಿತ್ಯ ಬಂದಾಗ ಹಿನ್ನಲೆ ಸಂಗೀತವೇ ಜೋರಾಗಿ ಕೇಳುವುದು…

ಸದ್ಯಕ್ಕೆ ಸೈಡ್‌ ಎ ನೋಡಿರಿ… ಅಕ್ಟೋಬರ್‌ 20ಕ್ಕೆ ಸೈಡ್‌ ಬಿ ನೋಡೋದು ಇದ್ದೇ ಇದೆ… ಥ್ಯಾಂಕ್ಯು…

"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...