೨೦೨೪ ನೇ ಸಾಲಿನ "ಸೃಷ್ಟಿ ಕಾವ್ಯ ಪುರಸ್ಕಾರ"ಕ್ಕೆ ಕವನ ಸಂಕಲನಗಳ ಆಹ್ವಾನ...
(೪ ನೇ ವರ್ಷದ ಪ್ರಕಟಣೆ)
ಸೃಷ್ಟಿ ಪ್ರತಿಷ್ಠಾನದಿಂದ ಕೊಡ ಮಾಡುವ 'ಸೃಷ್ಟಿ ಕಾವ್ಯ ಪುರಸ್ಕಾರ'ಕ್ಕೆ ೨೦೨೪ ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕವಿ/ಕವಯತ್ರಿಯರ ಕವನ/ಗಜಲ್ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರು ಮುದ್ರಣ, ಅನುವಾದಿತ ಕವನ ಸಂಕಲನಗಳಿಗೆ ಪ್ರವೇಶವಿಲ್ಲ.
ಪ್ರಶಸ್ತಿಯು ಐದು ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.
ನಿಯಮಗಳು: -
* ೨೦೨೪ರಲ್ಲಿ ಪ್ರಕಟಗೊಂಡ ಕವನ ಸಂಕಲನದ ೩ ಪ್ರತಿಗಳನ್ನು ಕಳುಹಿಸುವುದು.
* ಕೃತಿಯ ಪ್ರಥಮ ಮುದ್ರಣವಾಗಿರಬೇಕು.
* ಯಾವುದೇ ವಯಸ್ಸಿನ ಇತಿಮಿತಿಯಿಲ್ಲ.
* ಸಂಕಲನ ಕಳುಹಿಸುವ ಕೊನೆಯ ದಿನಾಂಕ: ೨೮ / ೦೪/ ೨೦೨೫
ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:
ಅಶೋಕ ಹೊಸಮನಿ
ಸಂಚಾಲಕರು,
ಸೃಷ್ಟಿ ಕಾವ್ಯ ಪುರಸ್ಕಾರ
ಜೆ.ಪಿ.ನಗರ ಕಾರಟಗಿ
ಸಾ! ತಾ! ಕಾರಟಗಿ - ೫೮೩೨೨೯
ಜಿ: ಕೊಪ್ಪಳ
ಮೊ:೮೮೮೪೧೫೬೫೦೦
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ