ಬುಧವಾರ, ಅಕ್ಟೋಬರ್ 4, 2023

ಒಂದೇ ತಿಂಗಳಲ್ಲಿ ಐದು ಮುದ್ರಣಗಳು…!

ಒಂದೇ ತಿಂಗಳಲ್ಲಿ ಐದು ಮುದ್ರಣಗಳು…!

ಆತ್ಮೀಯ ಸ್ನೇಹಿತರೇ,

ಸುಮಾರು ಒಂದು ತಿಂಗಳ ಹಿಂದಷ್ಟೇ ಬಿಡುಗಡೆಯಾದ ರಂಗಸ್ವಾಮಿ ಮೂಕನಹಳ್ಳಿ ಅವರ “ಹಣ ಏನಿದು ನಿನ್ನ ವಿಚಿತ್ರ ಗುಣ!” ಪುಸ್ತಕ ಇದಾಗಲೇ ಐದು ಮುದ್ರಣಗಳನ್ನು ಕಂಡು ಯಶಸ್ವಿಯಾಗಿ ಮಾರಾಟವಾಗುತ್ತಲೇ ಇದೆ. ಈ ಗೆಲುವಿಗೆ ಪ್ರಮುಖ ಕಾರಣಗಳೇನು ಅಂತ ನೋಡೋಣ ಬನ್ನಿ…



ಈ ಪುಸ್ತಕ ರಂಗಸ್ವಾಮಿ ಮೂಕನಹಳ್ಳಿ ಅವರ ಇಪ್ಪತ್ತೈದನೇ ಪುಸ್ತಕವೆನ್ನುವುದನ್ನು ಮುಖ್ಯವಾಗಿ ಗಮನಿಸಬೇಕು. ಹಣಕಾಸಿನ ಕುರಿತೇ ಬಹಳಷ್ಟು ಪುಸ್ತಕಗಳನ್ನು ಬರೆದಿರುವ ರಂಗಸ್ವಾಮಿಯವರು ʼಹಣದ ಜೊತೆಗಿನ ನನ್ನ ಸಂಬಂಧ ನನ್ನ ವಯಸ್ಸಿನಷ್ಟೇ ಹಳೆಯದು!ʼ ಎನ್ನುತ್ತಲ್ಲೇ ಹಣ ಕುರಿತು ತಮ್ಮ ಅನುಭವವನ್ನೇಲ್ಲಾ ಇಲ್ಲಿ ಧಾರೆಯೆರೆದಿದ್ದಾರೆ. ನಿಮಗೆ ಜಗತ್ತಿನಲ್ಲಿ ಶಿಕ್ಷಣ ಸಿಗುತ್ತದೆ. ಆದರೆ, ಹಣಕಾಸಿನ ಬಗ್ಗೆ ಸಿಗುವುದಿಲ್ಲ. ಆಗ ಇಂತಹ ಪುಸ್ತಕಗಳಷ್ಟೇ ನಿಮ್ಮ ಹಣಕಾಸಿನ ಅಜ್ಞಾನವನ್ನು ಹೊಡದೊಡಿಸಬಲ್ಲವು.

ಈ ಪುಸ್ತಕದ ಮುಖಪುಟದಲ್ಲಿ ಹಣವಿದೆ. ಜೊತೆಗೆ, ‌ಶೀರ್ಷಿಕೆಯ ಟ್ಯಾಗ್‌ ಲೈನ್‌ – ʼಬಯಸಿದರೆ ದೂರಾಗುತ್ತದೆ; ಬಯಸದಿದ್ದರೆ ಸಿಗುವುದೇ ಇಲ್ಲ!ʼ ಎಂಬ ಸಾಲು ʼಎಲಾ ಹಣವೇ!ʼ ಎಂದು ಓದುಗನನ್ನು ಪುಸ್ತಕ ಕೈಗೆತ್ತುಕೊಳ್ಳುವಂತೆ ಮಾಡುತ್ತಿದೆ.

ಈ ಪುಸ್ತಕದಲ್ಲಿ ಇಪ್ಪತ್ತೈದು ಅಧ್ಯಾಯಗಳಿದ್ದು, ರಂಗಸ್ವಾಮಿಯವರು ಹಣದ ಎಲ್ಲಾ ಮಜಲುಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದಾರೆ. ಹಣ ಕುರಿತು ಬಹುತೇಕ ಧರ್ಮಗಳ ನಂಬಿಕೆಗಳನ್ನು ಕೂಡ ಓದುಗರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಈ ಪುಸ್ತಕದ ಲೇಖಕರು ಮತ್ತು ಪ್ರಕಾಶಕರು (ಬೆಂಗಳೂರಿನ ಸಾವಣ್ಣ ಪ್ರಕಾಶನ) ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ಪ್ರಚಾರ ಮಾಡುತ್ತಲೇ ಇದ್ದಾರೆ. ಪ್ರತಿಯೊಬ್ಬ ಲೇಖಕರು, ಪ್ರಕಾಶಕರು ಇದನ್ನು ಗಮನಿಸಬೇಕು. ನಾನು ಕೂಡ ಪುಸ್ತಕದ ಬೆನ್ನಿನಲ್ಲಿದ್ದ ಮಾತುಗಳನ್ನು ಓದುತ್ತಾ ಈ ಪುಸ್ತಕವನ್ನು ಪ್ರಮೋಟ್‌ ಮಾಡಿದ್ದೆ. ಯೂಟ್ಯೂಬಿನಲ್ಲಿ ನಾನು ಹಾಕಿದ್ದ ಅಮೇಜಾನ್‌ ಲಿಂಕ್‌ ಅನ್ನು ನೂರಾರು ಜನ ಕ್ಲಿಕ್‌ ಮಾಡಿ, ಕೆಲವರು ಪುಸ್ತಕವನ್ನು ಕೂಡ ಕೊಂಡಿದ್ದಾರೆ. ಗೌರೀಶ್‌ ಅಕ್ಕಿ ಸ್ಟೂಡಿಯೋ ಯೂಟ್ಯೂಬ್‌ ಚಾನೆಲ್ಲಿನಲ್ಲಿ ಲೇಖಕರ ಸಂದರ್ಶನವೂ ಕೂಡ ಪ್ರಸಾರವಾಗಿತ್ತು.



ಈ ಪುಸ್ತಕವು ಅಮೇಜಾನ್‌ ಕನ್ನಡ ಟಾಪ್‌ ಸೆಲ್ಲಿಂಗ್‌ ಪುಸ್ತಕವಾಯಿತು. ಕಾರಣ, ಅಮೇಜಾನಿನಲ್ಲಿ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುವುದು ಸುಲಭ ಮತ್ತು ಬಹಳಷ್ಟು ಮಾರಾಟಗಾರರು ಅತಿ ಹೆಚ್ಚು ಮಾರಾಟವಾಗುವ ಪುಸ್ತಕಗಳಿಗೆ ರಿಯಾಯಿತಿ ಮತ್ತು ಬೋನಸ್‌ ಎನ್ನುವಂತೆ ಕೆಲವು ಮಾರಾಟಗಾರರು ಶಿಪ್ಪಿಂಗ್‌ ಶುಲ್ಕ ಹಾಕುವುದಿಲ್ಲ. ಇದು ಅವರಿಗೆ ಹೇಗೆ ಲಾಭ ತರುತ್ತದೋ ಗೊತ್ತಿಲ್ಲ, ಆದರೆ, ಓದುಗನಿಗಂತೂ ಲಾಭವಿದೆ. ಕುಳಿತಲ್ಲೇ ಕಡಿಮೆ ಹಣಕ್ಕೆ ಸಮಯವನ್ನೂ ಉಳಿಸಿಕೊಂಡು ಪುಸ್ತಕವನ್ನು ಖರೀದಿಸುವ ಲಾಭ. ಈ ರೀತಿ ಪುಸ್ತಕಗಳನ್ನು ಖರೀದಿಸುವ ಓದುಗರು ದಿನೇದಿನೇ ಹೆಚ್ಚುತ್ತಿದ್ದಾರೆ. ಈ ಪುಸ್ತಕದ ಮೂಲಕ ಇದು ಮತ್ತೊಮ್ಮೆ ಸಾಬೀತಾಗಿದೆ.

ಹಣ ಎಂದರೆ ಹೆಣ ಕೂಡ ಎದ್ದು ಕೂರುತ್ತೆ ಅಂತಾರೆ. ಅಂತಹದ್ದರಲ್ಲಿ ಬದುಕಿರುವವರು ಬಯಸುವುದರಲ್ಲಿ ತಪ್ಪೇನು ಇಲ್ಲ. ಹಣದ ಮಹತ್ವ ಕುರಿತು ಕೆಲವರು ಹೇಳುತ್ತಾರೆ, ಬಹುತೇಕರು ಹೇಳುವುದೇ ಇಲ್ಲ.



ʼಬೆಚ್ಚನೆಯಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು

ಇಚ್ಛೆಯನರಿವ ಸತಿ ಇರಲು

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞʼ

ಎಂದು ಸರ್ವಜ್ಞನ ವಚನವೇ ಇದೆ.


ಹಣಕ್ಕೂ ಒಂದು ಮನೋಧರ್ಮವಿದೆ. ಒಂದು ವಿಜ್ಞಾನವೂ ಇದೆ. (ʼಹಣದ ಮನೋವಿಜ್ಞಾನʼ ಪುಸ್ತಕ ನೆನಪಿಸಿಕೊಳ್ಳಬಹುದು.) ಮತ್ತೆ ಹಣವನ್ನು ನಮ್ಮದಾಗಿಸಿಕೊಳ್ಳಬಾರದೇ!?

ಈ ಕಾರಣಗಳಿಂದ ರಂಗಸ್ವಾಮಿ ಮೂಕನಹಳ್ಳಿ ಅವರ “ಹಣ ಏನಿದು ನಿನ್ನ ವಿಚಿತ್ರ ಗುಣ!” ಪುಸ್ತಕ ಓದುಗರನ್ನು ತನ್ನತ್ತ ಸೆಳೆಯುತ್ತಲೇ ಇದೆ.

ಇನ್ಯಾಕೆ ತಡ ಈ ಪುಸ್ತಕವನ್ನು ನೀವು ಅತ್ಯಂತ ಕಡಿಮೆ ಹಣಕ್ಕೆ ಅಮೇಜಾನಿನಲ್ಲಿ ಕೊಳ್ಳಬಹುದು. ನಿಮ್ಮ ಪ್ರತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ... https://amzn.to/3QAsPUS

ಪ್ರೀತಿಯಿಂದ, ಗುಬ್ಬಚ್ಚಿ ಸತೀಶ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಸ್ಪರ್ಧೆಗೆ ಮೇ 23 ಕಡೇ ದಿನ...

ಕರ್ನಾಟಕ ಲೇಖಕಿಯರ ಸಂಘವು ವಿವಿಧ ದತ್ತಿನಿಧಿಗಳ ಪ್ರಶಸ್ತಿಗಳಿಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಿದೆ.  ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿರು...