ಶುಕ್ರವಾರ, ಮಾರ್ಚ್ 15, 2024

ನಾನೇಕೆ ಅಮೇಜಾನ್‌ ಸಪೋರ್ಟ್‌ ಮಾಡ್ತೀನಿ



ಸ್ನೇಹಿತರೇ, ನಾನು ಆಗಾಗ ಇಲ್ಲಿ ಅಮೇಜಾನ್ಲಿಂಕ್ಹಾಕುವುದನ್ನು ನೋಡಿರುತ್ತೀರಿ. ಕೆಲವು ಸ್ನೇಹಿತರು ನಾನು ಹಾಕಿದ ಲಿಂಕಿನಿಂದ ತಮಗೆ ಬೇಕಾದ ವಸ್ತುವನ್ನು ಕೊಂಡು ಚೆನ್ನಾಗಿದೆ ಎಂದು ನನಗೆ ತಿಳಿಸಿದ್ದೀರಿ ಕೂಡ. ಮತ್ತೆ ಕೆಲವು ಆತ್ಮೀಯರು ನೀನ್ಯಾಕೆ ಅಮೇಜಾನ್ಸಪೋರ್ಟ್ಮಾಡುತ್ತೀಯ ಅಂತ ನೇರವಾಗಿ ಮತ್ತು ಮೆಸೇಜ್ಕೂಡ ಮಾಡಿ ಕೇಳಿದಿರಿ. ಕೆಲವರು ಹೇಗೆ ಕೇಳುವುದು ಅಂತ ಸುಮ್ಮನಾದಿರಿ. ನಾನಿಲ್ಲಿ ಒಂದು ವಿಷಯ ಸ್ಪಷ್ಟಪಡಿಸಲು ಇಷ್ಟ ಪಡುತ್ತೇನೆ. ಅಮೇಜಾನ್ಅಮೇರಿಕಾದಾದ್ದರೂ ಇಂಡಿಯಾದ ಪ್ರತ್ಯೇಕ ವೆಬ್ಸೈಟ್ಇದೆ. ಅಮೇಜಾನ್.ಇನ್ಅಂತ. ಅಮೇಜಾನ್ಇಂಡಿಯಾ ಅಂತಲೂ ಕರೆಯಬಹುದು. ಇವರು ಇಲ್ಲಿನ ವ್ಯಾಪಾರಿಗಳಿಗೆ ಇಲ್ಲಿಯೇ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟು ಬಹಳ ವರ್ಷಗಳಾದವು. ಬೆಲೆಯೂ ಸ್ಪರ್ಧಾತ್ಮಕವಾಗಿರುವುದರಿಂದ ಗ್ರಾಹಕರಿಗೂ ಅನುಕೂಲವಾಗಿದೆ. ಇವರು ಇಲ್ಲಿ ಮಾಡುವ ವ್ಯಾಪಾರಕ್ಕೆ ಇಲ್ಲಿಯೇ ತೆರಿಗೆಯನ್ನು ಕೂಡ ಕಟ್ಟುತ್ತಾರೆ. ಈಗ ಅಮೇರಿಕಾದಲ್ಲಿರುವ ಉಡುಪಿಯ ಹೋಟೆಲ್‌ ಅಥವಾ ಮತ್ತೊಂದು ನಮ್ಮ ದೇಶದ ಉದ್ಯಮವೊಂದು ಅಲ್ಲಿ ವ್ಯಾಪಾರ ವಹಿವಾಟು ನಡೆಸಿ ಅಲ್ಲಿನ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಾರಲ್ಲಾ ಅದೇ ರೀತಿ. ಇದು ಜಾಗತೀಕರಣ ಒದಗಿಸಿದ ಅನುಕೂಲಗಳಲ್ಲೊಂದು.

ಎಲ್ಲಾ ರೀತಿಯ ವ್ಯಾಪಾರಗಳಲ್ಲಿರುವ ಸಮಸ್ಯೆಗಳಂತೆ ಇಲ್ಲೂ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರಗಳೂ ಇವೆ. ಮೋಸವೂ ಇದೆ, ಜೊತೆಗೆ ಕಾನೂನು ಕೂಡ ಇದೆ.



ನಾನು ಅಮೇಜಾನನ್ನು ಬಹುಮುಖ್ಯವಾಗಿ ಇಷ್ಟಪಡುವುದು ಪುಸ್ತಕಗಳ ಮಾರಾಟದಿಂದಲೇ ದ್ಯೆತ್ಯ ಸಂಸ್ಥೆಯಾಗಿ ಬೆಳೆದ ಅಮೇಜಾನ್‌ ನಮ್ಮ ದೇಶದಲ್ಲೂ ಅತಿ ಹೆಚ್ಚು ಪುಸ್ತಕಗಳನ್ನು ಮಾರಾಟ ಮಾಡುವ ಆನ್‌ಲೈನ್‌ ಅಂಗಡಿಯಾಗಿರುವ ಕಾರಣದಿಂದ. ನಮ್ಮ ಕನ್ನಡದ ಪುಸ್ತಕಗಳನ್ನು ಮಾರಾಟಮಾಡಲು ಇಲ್ಲಿ ವಿಪುಲ ಅವಕಾಶಗಳಿವೆ. ಮತ್ತು ಈಗಾಗಲೇ ದಿನಂಪ್ರತಿ ಲಕ್ಷಾಂತರ ರೂಗಳ ಕನ್ನಡ ಪುಸ್ತಕಗಳ ವಹಿವಾಟು ಇಲ್ಲಿ ನಡೆಯುತ್ತಿದೆ. ನಾನು ಕೂಡ ನಮ್ಮ ಪ್ರಕಾಶನದ ಆನ್‌ಲೈನ್‌ ಅಂಗಡಿಯನ್ನು ಬಹಳ ವರ್ಷಗಳ ಹಿಂದೆಯೇ ತೆರೆದಿದ್ದರೂ ಮಾರಾಟ ಶುರುಮಾಡಿದ್ದು ಇತ್ತೀಚಿನ ವರ್ಷಗಳಲ್ಲಿ ಮಾತ್ರ. ಮುಂಚೆಯೇ ಶುರುಮಾಡಿದ್ದರೆ ಚೆಂದವಿತ್ತು ಅಂತ ಆಗಾಗ ಅನ್ನಿಸಿದ್ದು ಉಂಟು. ಕಾರಣ, ಆಗ ಈಗಷ್ಟು ಸ್ಪರ್ಧೆ ಇರಲಿಲ್ಲ. ಇರಲಿಬಿಡಿ. ಆದರೆ, ಇದು ಬಹುತೇಕ ಪ್ರಕಾಶಕರಿಗೆ ಮತ್ತು ಮಾರಾಟಗಾರರಿಗೆ ವರವಾಗಿರುವುದಂತೂ ಸತ್ಯ.

ನಾನು ಮೊದಲು ಮೊಬೈಲ್‌ ಕೊಂಡದ್ದು ಇಲ್ಲಿನ ಒಂದು ಮೊಬೈಲ್‌ ಅಂಗಡಿಯಲ್ಲಿ. ಎರಡನೇ ಮೊಬೈಲ್‌ (ಸ್ಮಾರ್ಟ್‌ಫೋನ್) ಕೊಂಡದ್ದು‌ ಅಮೇಜಾನಿನಲ್ಲಿ. ನನ್ನ ಸ್ನೇಹಿತರು ನನಗೆ ಹೇಳಿದ್ದರಿಂದ. ನಂತರ, ಅಷ್ಟರಲ್ಲಾಗಲೇ ಅಮೇಜಾನಿನಲ್ಲಿ ಸಿಗುವ ಬೆಲೆಗೆ ಅಂಗಡಿಗಳವರೂ ಮಾರಲು ಶುರುಮಾಡಿದ್ದರಿಂದ ಮತ್ತೆರೆಡು ಮೊಬೈಲ್‌ಗಳನ್ನು ಇಲ್ಲಿನ ಅಂಗಡಿಯಲ್ಲಿಯೇ ಕೊಂಡಿದ್ದೇನೆ. ಇದೇ ರೀತಿ ಈಗ ಎಲ್ಲಾ ವಸ್ತುಗಳ ಮಾರಾಟಕ್ಕೆ ಪೈಪೋಟಿಯಿರುವುದು ನಿಮಗೆಲ್ಲಾ ಗೊತ್ತೇ ಇದೆ.  ಇದೇ ಕಾರಣದಿಂದ, ಪುಸ್ತಕಗಳ ಹೊರತಾಗಿಯೂ ನಾನು ಪ್ರಮೋಟ್‌ ಮಾಡುವ ಇತರ ವಸ್ತುಗಳು ನನ್ನ ಸ್ನೇಹಿತರಿಗೆ, ಪರಿಚಯದವರಿಗೆ ಉಪಯೋಗವಾಗಬಹುದೆಂದು ಒಂದು ಲಿಂಕನ್ನು ನಾನು ಸಾಮಾಜಿಕ ತಾಣಗಳಲ್ಲಿ ಆಗಾಗ ಹಾಕಿರುತ್ತೇನೆ. ವಿಶೇಷ ರಿಯಾಯಿತಿಯ ಪ್ರಯೋಜನ ನನ್ನ ಸ್ನೇಹಿತರಿಗೂ ಸಿಗಲಿ ಎಂಬುದಷ್ಟೇ ನನ್ನ ಪ್ರಮುಖ ಆಶಯ.

ಬೇಕಿದ್ದರೆ, ಒಮ್ಮೆ ಚೆಕ್‌ ಮಾಡಿ ನೋಡಿ: https://amzn.to/43qdjiz

ಮತ್ತೇನಾದರೂ ಪ್ರಶ್ನೆ, ಅನುಮಾನಗಳಿದ್ದರೆ ಕಾಮೆಂಟ್‌ ಮಾಡಿ ತಿಳಿಸಿ. ಉತ್ತರಿಸುತ್ತೇನೆ.

ಧನ್ಯವಾದಗಳು,

ಪ್ರೀತಿಯಿಂದ,

-         ಗುಬ್ಬಚ್ಚಿ ಸತೀಶ್.

ಶುಕ್ರವಾರ, ಫೆಬ್ರವರಿ 23, 2024

ನೈಜ ಘಟನೆಗಳನ್ನಾಧರಿಸಿದ “ಆರ್ಟಿಕಲ್‌ 370” ಸಿನಿಮಾ

 ನೈಜ ಘಟನೆಗಳನ್ನಾಧರಿಸಿದ “ಆರ್ಟಿಕಲ್‌ 370” ಸಿನಿಮಾ



“ಆರ್ಟಿಕಲ್‌ 370” ಹಿಂದಿ ಸಿನಿಮಾ ನಮ್ಮ ದೇಶದ ಸ್ವಾತಂತ್ರ್ಯದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಲಾಗಿದ್ದ ಸಂವಿಧಾನದ ಆರ್ಟಿಕಲ್‌ 370ನ್ನು ಆಗಸ್ಟ್‌ 5, 2019ರಂದು ಭಾರತ ಸರ್ಕಾರ ರದ್ದುಪಡಿಸಿದ ಹಿನ್ನೆಲೆಯ ಮತ್ತು ಮುನ್ನೆಲೆಯ ನೈಜಘಟನೆಗಳನ್ನಾಧರಿಸಿದೆ. ಇತಿಹಾಸದ ತಪ್ಪನ್ನು ಇತಿಹಾಸ ನಿರ್ಮಾಣದ ಮೂಲಕವೇ ಸರಿಪಡಿಸಿಬೇಕು ಎಂಬ ಆಶಯ ಸಿನಿಮಾದ್ದಾಗಿದೆ. Uri – The Surgical Strike ಸಿನಿಮಾವನ್ನು ನಿರ್ದೇಶಿಸಿ ದೇಶದ ಗಮನ ಸೆಳೆದು, ಈ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದ ಆದಿತ್ಯ ಸುಹಾಸ್‌ ಜಂಭಾಲೆ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ದೇಶದ ಇತಿಹಾಸದ ಪ್ರಮುಖ ಚಿತ್ರಣವನ್ನು ಬಹುಮುಖ್ಯವಾಗಿ NIA, PMO ಅಧಿಕಾರಿಗಳ ಮತ್ತು CRPF ಯೋಧರ ದೃಷ್ಠಿಯಿಂದ ಕಟ್ಟಿಕೊಡಲಾಗಿದೆ. ಗುಪ್ತಚಾರಿಣಿ, ನಂತರ NIA ಅಧಿಕಾರಿ ಜೂನಿ ಅಕ್ಸರ್‌ ಆಗಿ ಯಾಮಿ ಗೌತಮ್‌, PMO ಕಾರ್ಯದರ್ಶಿ ರಾಜೇಶ್ವರಿ ಸ್ವಾಮಿನಾಥನ್‌ ಆಗಿ ಪ್ರಿಯಾಮಣಿ ಮತ್ತು CRPF ಯೋಧ ಯಶ್‌ ಚೌಹಾಣ್‌ ಆಗಿ ವೈಭವ್‌ ತತ್ವವಾಡಿ ಗಮನ ಸೆಳೆಯುತ್ತಾರೆ. ಪ್ರಧಾನಮಂತ್ರಿಗಳಾಗಿ ಅರುಣ್‌ ಗೋವಿಲ್‌ ಇದ್ದಾರೆ.

ಈ ಸಿನಿಮಾದಲ್ಲಿ ಹಲವು ಅಧ್ಯಾಯಗಳ ಮೂಲಕ ಆರ್ಟಿಕಲ್‌ 370ರ ಅಡಿ ಕಣಿವೆ ಪ್ರದೇಶದಲ್ಲಿ ನಡೆಯುತ್ತಿದ್ದ ರಾಜಕೀಯ, ಸಾಮಾಜಿಕ ಮತ್ತು ಹುಸಿ ಹೋರಾಟದ ಚಿತ್ರಣವನ್ನು ನೀಡುತ್ತಲೇ ಅಲ್ಲಿ ನಡೆಯುತ್ತಿದ್ದ ಗಲಭೆ, ಹಿಂಸಾಚಾರ, ಮೋಸ ಮತ್ತು ಅನೈತಿಕ ವ್ಯಾಪಾರಗಳ ಚಿತ್ರಣವನ್ನು ನೀಡಲಾಗಿದೆ. ಯಾವ ಅಮಾಯಕರ ಬಲಿಯನ್ನು ಪಡೆಯದೇ ಯಶಸ್ವಿಯಾಗಿ ಹೇಗೆ “ಆರ್ಟಿಕಲ್‌ 370” ರ ರದ್ದಿನ ಆಪರೇಷನ್‌ ನಡೆಸಲಾಯಿತು ಎಂಬುದನ್ನು ಸಶಕ್ತವಾಗಿ ತೋರಿಸಲಾಗಿದೆ. ಸಂವಿಧಾನಕ್ಕೆ ಚ್ಯುತಿ ಬರದಂತೆ ಈ ವಿಧೇಯಕವನ್ನು ರದ್ದುಪಡಿಸಿದ ಚಾಕಚಕ್ಯತೆಯನ್ನು ತೆರೆಯಮೇಲೆ ನೋಡಿದರೆ ಚೆನ್ನ. ಹಿನ್ನೆಲೆಯ ಸಂಗೀತ ದೃಶ್ಯಗಳಿಗೆ ಅನುಗುಣವಾಗಿದ್ದು ಪ್ರೇಕ್ಷಕನನ್ನು ಕಟ್ಟಿಹಾಕುತ್ತದೆ. 70 ವರ್ಷಗಳಿಂದಲೂ ಕಾಶ್ಮೀರದ ಪ್ರಜೆಗಳು, ಅಧಿಕಾರಿಗಳು ಬಯಸಿದ್ದ ಬದುಕನ್ನು ನೀಡುವಲ್ಲಿ ಈ ವಿಧೇಯಕದ ರದ್ದು ಹೇಗೆ ಸಾಧ್ಯವಾಗಿಸಿದೆ ಎಂಬುದನ್ನು ಕೂಡ ಸಿನಿಮಾದ ಅಂತ್ಯದಲ್ಲಿ ತೋರಿಸಲಾಗಿದೆ.

ದೇಶದ ಪ್ರಜೆಗಳ ಹಿತರಕ್ಷಣೆಯ ದೃಷ್ಟಿಯಿಂದ ಹಾಗೂ ಜಮ್ಮು ಮತ್ತು ಕಾಶ್ಮೀರ ಎಂದಿದ್ದರೂ ದೇಶದ ಅವಿಭಾಜ್ಯ ಅಂಗ ಎಂದು ಸಾಬೀತುಪಡಿಸಿದ ಆರ್ಟಿಕಲ್‌ 370ರ ರದ್ದಿನ ಈ ಸಿನಿಮಾ ಬಾಲಿವುಡ್ಡಿನ ಅಂಗಳದಿಂದ ಬಂದಿದ್ದು, ಆಸಕ್ತರು ಒಮ್ಮೆ ನೋಡಬಹುದಾಗಿದೆ.‌ ಈ ಸಿನಿಮಾ ಕುರಿತು ಖುದ್ದು ಪ್ರಧಾನಮಂತ್ರಿಗಳೇ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಅಧಿಕಾರವನ್ನು ಆರ್ಟಿಕಲ್‌ 370 ರದ್ದು ಪಡಿಸುವ ಮೂಲಕ ಹೇಗೆ ತೆಗೆಯಲಾಯಿತು ಎಂಬುದನ್ನು ಹೇಳುತ್ತದೆ ಎಂದಿದ್ದಾರೆ. ನಿಮಗೂ ಈ ವಿಷಯ ಕುರಿತು ಆಸಕ್ತಿಯಿದ್ದರೆ ಕೂಡಲೇ ಈ ಸಿನಿಮಾ ನೋಡಿ. ಅಂದಹಾಗೆ ಈ ಸಿನಿಮಾ ಕಣಿವೆ ಪ್ರದೇಶದಲ್ಲೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ…

ಮಂಗಳವಾರ, ಫೆಬ್ರವರಿ 13, 2024

ಸಿದ್ದು ಸತ್ಯಣ್ಣವರ ಬೆಳೆದ “ಬೆಳಕಿನ ಬೆಳೆ”

 ಸಿದ್ದು ಸತ್ಯಣ್ಣವರ ಬೆಳೆದ “ಬೆಳಕಿನ ಬೆಳೆ”



ಪತ್ರಕರ್ತ ಸಾಹಿತಿ ಸಿದ್ದು ಸತ್ಯಣ್ಣವರ “ಬೆಳಕಿನ ತೆನೆ – ನೋವುಂಡು ಬೆಳಕು ಕಂಡವರ ಕಥನಗಳು” ಎಂಬ Success Stories ಸಂಕಲನವನ್ನು ಹೊರತಂದಿದ್ದಾರೆ. ಅವರಿಗೆ ಅಭಿನಂದನೆಗಳು.

ವೃತ್ತಿಯ ಅನುಭವಗಳಿಂದ ಚಿಂತನೆಯೊಂದು ಮೊಳಕೆಯೊಡೆದು ಸಮಾಜಕ್ಕೆ ಮಾದರಿಯಾಗಬಲ್ಲ ಕೆಲವು ಯಶೋಗಾಥೆಗಳನ್ನು ಸಂಕಲಿಸಬೇಕೆಂದುಕೊಂಡ ಲೇಖಕರು ಈ ಕೃತಿಯನ್ನು ಬಹಳ ಆಸ್ಥೆಯಿಂದ ಓದುಗರಿಗೆ ನೀಡಿದ್ದಾರೆ. ಸಂಕಲನದ ಹಸ್ತಪ್ರತಿಯನ್ನು ಖ್ಯಾತ ಸಿನಿಮಾ ನಟರಾದ ದುನಿಯಾ ವಿಜಯ್‌ ಅವರು ಓದಿ ಮೆಚ್ಚಿರುವುದು ವಿಶೇಷ. ಸಾಹಿತಿಗಳಾದ ಕೇಶವ ಮಳಗಿಯವರು ಈ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ. ಬಂಜರು, ಕಲ್ಲರಾಶಿಗಳ ಮರುಭೂಮಿಯಲ್ಲಿ ಲೋಕಕೆ ಸುಗಂಧವನ್ನು ಹಂಚಲೆಂದೇ ಅರಳಿಹೆವು ಎನ್ನುವ ಸಾಮಾನ್ಯರ ಅಸಾಮಾನ್ಯ ಕಥನಗಳು ಇಲ್ಲಿವೆ ಎಂದಿದ್ದಾರೆ ಕತೆಗಾರರೂ ಆದ ಕೇಶವ ಮಳಗಿ ಅವರು.

ಈ “ಬೆಳಕಿನ ತೆನೆ”ಯಲ್ಲಿ ಇಪ್ಪತ್ತು ಯಶೋಗಾಥೆಗಳಿವೆ. ದಿನಗೂಲಿ ಮಾಡುತ್ತಲೇ ಪಿ.ಎಚ್.ಡಿ ಪದವೀಧರೆಯಾದ ಸಾಕೆಭಾರತಿಯಿಂದ ಆರಂಭವಾಗಿ ನೈಜೀರಿಯಾದ ಖ್ಯಾತ ನಟ ʼಪಾಆ ಪಾಆʼ ಎಂದೇ ಕರೆಯಲ್ಪಡುವ ಒಶೀತಾ ಇಹೇಮಿವರೆಗೂ ಓದುಗರನ್ನು ಪ್ರೇರೆಪಿಸುವ ಇಪ್ಪತ್ತು ಯಶೋಗಾಥೆಗಳಿವೆ. ಎಲ್ಲಾ ಕ್ಷೇತ್ರಗಳ ಸಾಧಕರ ಗೆಲುವಿನ ಕತೆಗಳಿವೆ. ಇತ್ತೀಚಿನ ದಿನಮಾನಗಳಲ್ಲಿ ದೇಶದ ಕ್ರಿಕೆಟ್‌ ತಾರೆಯಾಗಿ ಮಿಂಚುತ್ತಿರುವ ಮೊಹಮ್ಮದ್‌ ಸಿರಾಜ್‌ನ ಕತೆಯಿದೆ. ಚಿಕ್ಕ ವಯಸ್ಸಿಗೆ ವಿಶ್ವವಿಖ್ಯಾತನಾಗಿರುವ ಪುಟ್ಬಾಲ್‌ ತಾರೆ ಎಂಬಾಪೆಯ ಕತೆಯೂ ಇದೆ. ಎಲೆ ಮರೆಯ ಕಾಯಿಯಂತಿರುವ ಹಲವು ಸಾಮಾನ್ಯರ ಅಸಾಮಾನ್ಯ ಕಥನಗಳಿವೆ. ಓದಿದ ನಂತರ ಏನನ್ನಾದರೂ ಸಾಧಿಸಬೇಕೆಂಬ ಛಲವನ್ನು ಓದುಗರಲ್ಲಿ ಬಿತ್ತುವಲ್ಲಿ ಈ ಸಂಕಲನ ಖಂಡಿತ ಯಶಸ್ವಿಯಾಗುತ್ತದೆ. ಓದುಗರಿಗೆ ಗೊತ್ತಿಲ್ಲದ ಹಲವಾರು ಸಂಗತಿಗಳು ಕೂಡ ಈ ಸಂಕಲನದ ಮೂಲಕ ಓದುಗರ ಜ್ಞಾನಭಂಡಾರ ಸೇರಬಲ್ಲದು ಎಂಬುದು ನನ್ನ ಅನಿಸಿಕೆ.

ಅಮೂಲ್ಯ ಪುಸ್ತಕ ಪ್ರಕಟಿಸಿರುವ ಈ ಕೃತಿಯ ಮೌಲ್ಯ ರೂ. 125/-

ನಿಮ್ಮ ಪ್ರತಿಗೆ:                                                                                   https://amzn.to/3Szj9JA

ಅರ್ಜುನ V/s ಏಕಲವ್ಯ

ಅರ್ಜುನ V/s ಏಕಲವ್ಯ ಅರಿವೆಂಬ ಗುರುವನ್ನು ಮೊದಲು ಅರಿತವನು ಬಹುಶಃ ‘ಏಕಲವ್ಯ’ನೇ ಇರಬೇಕು. ಹೌದು, ನಮ್ಮ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದ ಏಕಲವ್ಯ! ನಿಮಗೆಲ್ಲಾ ಈತನ ಬಗ್ಗ...