ಶನಿವಾರ, ಜನವರಿ 14, 2012
ಬುಧವಾರ, ಡಿಸೆಂಬರ್ 14, 2011
ನನ್ನ ಜೀವಕೆ ಜೀವವಾದ ನೀನು ಅಮರ.
ಬಾನು ಭುವಿಗೆ ಇಳಿಸಿದ ಮೊದಲ ಮಳೆಗೆ
ಭುವಿಯು ಕೊಟ್ಟ ಹಸಿರ ಉಡುಗೊರೆಯ ಕಳೆಗೆ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.
ಮೊನ್ನೆತಾನೆ ನಾಡ ಗೌರಿಗೆ ಕಾಡ ಕಡವೆಯ
ಒಲಿದ ಪ್ರೀತಿಯ ಅದ್ಭುತ ಉಡುಗೊರೆ “ಚುಕ್ಕಿ”ಗೆ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.
ಮರಕ್ಕೊಂದು ಹಕ್ಕಿ, ಹಕ್ಕಿಗೊಂದು ಮರ
ಎಲ್ಲ ಜೀವಕೂ ದೇವರು ನೀಡಿದ ವರ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.
ನನ್ನ ಜೀವಕೆ ಜೀವವಾದ ನೀನು ಅಮರ.
- ಗುಬ್ಬಚ್ಚಿ ಸತೀಶ್.
ಶನಿವಾರ, ಡಿಸೆಂಬರ್ 3, 2011
ಸರಿಸಾಟಿ
ಆ ಚಂದ್ರನಲ್ಲದೆ
ನಿನಗ್ಯಾರು ಸಮ
ಹೇಳೆ ಹೇಳೆ
ನನ್ನೆದೆಯ ಸುಮ
ಅವನ ಬೆಳಕಿಲ್ಲದ
ರಾತ್ರಿಯೇಕೆ ಸುಮ
ಕೇಳೆ ಕೇಳೆ
ನನ್ನೆದೆಯ ಸುಮ
ಆ ಚಂದ್ರನಿಲ್ಲದ
ಬಾನು ಬಾನಲ್ಲ ಸುಮ
ನೀನಿಲ್ಲದ ಬದುಕು
ಬದುಕಲ್ಲ ಸುಮ.
- ಗುಬ್ಬಚ್ಚಿ ಸತೀಶ್.
ನಿನಗ್ಯಾರು ಸಮ
ಹೇಳೆ ಹೇಳೆ
ನನ್ನೆದೆಯ ಸುಮ
ಅವನ ಬೆಳಕಿಲ್ಲದ
ರಾತ್ರಿಯೇಕೆ ಸುಮ
ಕೇಳೆ ಕೇಳೆ
ನನ್ನೆದೆಯ ಸುಮ
ಆ ಚಂದ್ರನಿಲ್ಲದ
ಬಾನು ಬಾನಲ್ಲ ಸುಮ
ನೀನಿಲ್ಲದ ಬದುಕು
ಬದುಕಲ್ಲ ಸುಮ.
- ಗುಬ್ಬಚ್ಚಿ ಸತೀಶ್.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಅರ್ಜುನ V/s ಏಕಲವ್ಯ
ಅರ್ಜುನ V/s ಏಕಲವ್ಯ ಅರಿವೆಂಬ ಗುರುವನ್ನು ಮೊದಲು ಅರಿತವನು ಬಹುಶಃ ‘ಏಕಲವ್ಯ’ನೇ ಇರಬೇಕು. ಹೌದು, ನಮ್ಮ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದ ಏಕಲವ್ಯ! ನಿಮಗೆಲ್ಲಾ ಈತನ ಬಗ್ಗ...
-
ಆತ್ಮೀಯರೇ, ’ನಿಮ್ಮೆಲ್ಲರ ಮಾನಸ’ ಕನ್ನಡ ಮಾಸಪತ್ರಿಕೆಯ ೧೦೦ ಸಂಚಿಕೆಗಳ ಸಂಭ್ರಮಕ್ಕೆ ಮತ್ತು ಪುಸ್ತಕಗಳ ಬಿಡುಗಡೆಗೆ ತಪ್ಪದೆ ಪ್ರೀತಿಯಿಂದ ಬನ್ನಿ... ಅಂದು ನನ್ನ ಕಾದಂ...