ಭಾನುವಾರ, ಸೆಪ್ಟೆಂಬರ್ 3, 2023

ಓದಿದ್ದೀರ ಡಾ. ಎಸ್.‌ ಎಲ್‌. ಭೈರಪ್ಪನವರ ʼಯಾನʼ?

 ಪ್ರಿಯ ಸ್ನೇಹಿತರೇ,

ನಮ್ಮ ಭಾರತ ದೇಶದ ʼಚಂದ್ರಯಾನ-3ʼ ಯಶಸ್ವಿಯಾಗಿ, ಇದೀಗ ಸೂರ್ಯಯಾನವೂ ಉಡಾವಣೆ ಆಗಿದೆ. ಈ ಹೊತ್ತಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಬಾಹ್ಯಾಕಾಶವನ್ನೇ ಮುಖ್ಯ ವಸ್ತುವನ್ನಾಗಿಸಿಕೊಂಡು ಯಾವುದಾದರೂ ಸೃಜನಶೀಲ ಕೃತಿಗಳು ಪ್ರಕಟವಾಗಿವೆಯೇ ಎಂದು ಆಲೋಚಿಸಿದಾಗ ತಕ್ಷಣ ನೆನಪಿಗೆ ಬರುವುದು ಡಾ.‌ ಎಸ್.ಎಲ್.‌ ಭೈರಪ್ಪನವರ "ಯಾನ” ಕಾದಂಬರಿ. 



ಈ ಕಾದಂಬರಿಯು 2014ರಲ್ಲಿ ಮೊದಲ ಮುದ್ರಣ ಕಂಡಿದ್ದು, ಇದುವರೆವಿಗೂ ನಲ್ವತ್ತಮೂರು ಮುದ್ರಣಗಳನ್ನು ಕಂಡಿದೆ. ಈ ಕಾದಂಬರಿಯನ್ನು ಪ್ರಕಟವಾದ ಸಮಯದಲ್ಲೇ ನಾನು ಓದಿದ್ದು, ಇದೀಗ ನಮ್ಮ ಭಾರತ ದೇಶದ ಬಾಹ್ಯಾಕಾಶ ತಂತ್ರಜ್ಞಾನವನ್ನು ಇಡೀ ವಿಶ್ವವೇ ಬೆರಗಾಗಿ ನೋಡುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ಕೈಯಲ್ಲಿಡಿದು ಕೂತಿದ್ದೇನೆ. 

ನೀವು ಈಗಾಗಲೇ ಓದಿದ್ದರೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ… ಓದಿಲ್ಲವಾದರೇ, ಓದಿ ನಿಮ್ಮ ಅನಿಸಿಕೆ-ಅಭಿಪ್ರಾಯ ತಿಳಿಸಿ… ಜೊತೆಗೆ ಬಾಹ್ಯಾಕಾಶ ಯಾನ ಕುರಿತೇ ಪ್ರಕಟವಾಗಿರುವ ಯಾವುದಾದರೂ ಸೃಜನಶೀಲ ಕೃತಿಗಳು ನಿಮ್ಮ ಗಮನದಲ್ಲಿದ್ದರೆ ತಿಳಿಸಿ…

 

ಡಾ. ಎಸ್.ಎಲ್.‌ ಭೈರಪ್ಪನವರ ʼಯಾನʼ ಕೊಳ್ಳಲು ಅಮೇಜಾನ್‌ ಲಿಂಕ್: https://amzn.to/45PDvmA

 

ಧನ್ಯವಾದಗಳು…

ಯಶಸ್ವಿಯಾಗಿ ಉಡಾವಣೆಯಾದ ʼಆದಿತ್ಯ ಎಲ್‌ 1ʼ 125 ದಿನಗಳ ಕ್ಷಣಗಣನೆ ಆರಂಭ…

 ಪ್ರಿಯ ಸ್ನೇಹಿತರೇ,

ʼಚಂದ್ರಯಾನ 3ʼ ರ ಯಶಸ್ಸಿನ ಬೆನ್ನಲ್ಲೇ ಇಸ್ರೋ ಸೂರ್ಯಾಯಾನ ʼಆದಿತ್ಯ ಎಲ್‌ 1ʼ ಸೋಲಾರ್‌ ಮಿಷನ್‌ ಕೈಗೊಂಡಿದ್ದು, ಇಂದು (02/09/2023) ಯಶಸ್ವಿಯಾಗಿ ಬೆಳಿಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣೆ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ʼಆದಿತ್ಯ-ಎಲ್‌ 1ʼ ಬಾಹ್ಯಾಕಾಶ ನೌಕೆಯನ್ನು ಹೊತ್ತು ಯಶಸ್ವಿಯಾಗಿ ಆಕಾಶಕ್ಕೆ ಜಿಗಿದಿದೆ. ಕೇಂದ್ರ ಸರಕಾರ ಈ ಯೋಜನೆಗಾಗಿ 380 ಕೋಟಿ ರೂಗಳ ಅನುದಾನ ನೀಡಿದ್ದು, ಸೂರ್ಯನ ಮೇಲೆ ಗಮನ ಇಡಲು ಇಸ್ರೋ ನಿಗದಿಪಡಿಸಿರುವ ನ್ಯೂಟನ್‌ ಲಾಂಗ್ರೇಜ್‌ ಪಾಯಿಂಟ್‌ ಎಲ್‌ 1 ತಲುಪಲು 125 ದಿನಗಳ ಸಮಯಾವಕಾಶ ಬೇಕಿದೆ. 

ಇಲ್ಲಿ ನೌಕೆಯಲ್ಲಿ ಕಳಿಸಿರುವ ಬಾಹ್ಯಾಕಾಶ ಆಧಾರಿತ ಭಾರತೀಯ ಪ್ರಯೋಗಾಲಯ ಸ್ಥಾಪಿತವಾಗಲಿದೆ. ಭೂಮಿಯಿಂದ 15 ಲಕ್ಷ ಕಿ.ಮೀ. ದೂರದ ಎಲ್‌1 ಪಾಯಿಂಟಿನಿಂದ ಸೂರ್ಯನ ಅಧ್ಯಯನ ಮಾಡಲು ಭಾರತದ ಚೊಚ್ಚಲ ಸೌರಮಂಡಲ ಸಾಹಸ ಇದಾಗಿದೆ. ಮತ್ತಷ್ಟು ಹತ್ತಿರದಿಂದ ಸೂರ್ಯನ ಪ್ರಕ್ರಿಯೆಗಳನ್ನು ಗಮನಿಸುವುದು ನಮ್ಮ ಉದ್ದೇಶವಾಗಿದೆ ಎಂದು ಇಸ್ರೋ ಮುಖ್ಯಸ್ಥರಾದ ಎಸ್.‌ ಸೋಮನಾಥ್‌ ಅವರು ತಿಳಿಸಿದ್ದಾರೆ. ಈ ಯಾನವೂ ಯಶಸ್ವಿಯಾಗಲಿ ಎಂಬುದು ಎಲ್ಲ ಭಾರತೀಯರ ಹಾರೈಕೆ…

ಧನ್ಯವಾದಗಳು…

“ಚಂದ್ರಯಾನ-3”ರ ಯಶಸ್ಸಿಗೆ ಮಸಾಲೆದೋಸೆ, ಫಿಲ್ಟರ್‌ ಕಾಫಿ ಕೂಡ ಕಾರಣವಂತೆ…

 ಪ್ರಿಯ ಸ್ನೇಹಿತರೇ,


ನಮ್ಮ ಭಾರತದ ಹೆಮ್ಮೆ ಇಸ್ರೋ ಚಂದ್ರಯಾನ-3ನ್ನು ಯಶಸ್ವಿಯಾಗಿ ಮುಗಿಸಿ ಸೂರ್ಯಯಾನಕ್ಕೆ ಆದಿತ್ಯ ಎಲ್‌ 1 ಉಡಾವಣೆಗೆ ಸಜ್ಜಾಗುತ್ತಿರುವ ಹೊತ್ತಲೇ ಚಂದ್ರಯಾನ-3ರ ಯಶಸ್ಸಿಗೆ ಕಾರಣವೇನು ಎಂಬ ಹಲವು ಚರ್ಚೆಗಳು ಶುರುವಾಗಿವೆ. ಚಂದ್ರಯಾನ-2ರ ಸೋಲಿನ ಬಳಿಕ ಗೆಲುವು ಸುಲಭವಾಗಿರಲಿಲ್ಲ. ಧೈರ್ಯಗುಂದಿದ ವಿಜ್ಞಾನಿಗಳಲ್ಲಿ ಹುರುಪು ತುಂಬಿ ಕೆಲಸಕ್ಕೆ ಹಚ್ಚಬೇಕಿತ್ತು. ನಿಗದಿತ ಸಂಬಳ ಬಿಟ್ಟರೆ ಯಾವುದೇ ಪ್ರೋತ್ಸಾಹಕ ಧನ ಅಥವಾ ಉಡುಗೊರೆಗಳ ಬೆಂಬಲವಿರಲಿಲ್ಲ. ಈ ನಿಟ್ಟಿನಲ್ಲಿ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು, ಹುರಿದುಂಬಿಸಲು ಇಸ್ರೋ ಪ್ರತಿದಿನ ಸಂಜೆ 5ಕ್ಕೆ ಉಚಿತವಾಗಿ ಮಸಾಲೆದೋಸೆ ಮತ್ತು ಫಿಲ್ಟರ್‌ ಕಾಫಿಯನ್ನು ನೀಡುತ್ತಿತ್ತಂತೆ. ಹೌದು, ನೀವು ನಂಬಲೇ ಬೇಕು, ಉಚಿತ ಮಸಾಲದೋಸೆ ಮತ್ತು ಫಿಲ್ಟರ್‌ ಕಾಫಿ. ಮಸಾಲೆ ದೋಸೆ ಸವಿದು, ಫಿಲ್ಟರ್‌ ಕಾಫಿ ಹೀರಿದ ನಂತರ ಮತ್ತಷ್ಟು ಉತ್ಸುಕರಾಗಿ ಸಂತೋಷದಿಂದ ಇಸ್ರೋ ವಿಜ್ಞಾನಿಗಳು ಮಿಷನ್‌ ಚಂದ್ರಯಾನ-3ರಲ್ಲಿ ತೊಡಗುತ್ತಿದ್ದರಂತೆ. ಈಗ ಫಲಿತಾಂಶ ನಮ್ಮ ಕಣ್ಮುಂದೆಯೇ ಇದೆ… ಈ ಸಂಗತಿಯನ್ನು ಇಸ್ರೋದ ಪ್ರಮುಖ ವಿಜ್ಞಾನಿ ಮತ್ತು ಚಂದ್ರಯಾನ-3ರ ಪ್ರಮುಖ ರೂವಾರಿಯಲ್ಲೊಬ್ಬರೂ ಆಗಿರುವ ಶ್ರೀ ವೆಂಕಟೇಶ್ವರ ಶರ್ಮ ಅವರು ಪತ್ರಕರ್ತೆ ಬರ್ಖಾ ದತ್‌ ಅವರಲ್ಲಿ ಹಂಚಿಕೊಂಡಿದ್ದು, ಇದು ವಾಷಿಗ್ಟಂನ್‌ ಪೋಸ್ಟ್‌ನಲ್ಲಿ ವರದಿಯಾಗಿದೆ…

ಧನ್ಯವಾದಗಳು…

“ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು…

  ಆತ್ಮೀಯ ಸ್ನೇಹಿತರೇ, “ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು… ನನ್ನ ಅನಿಸಿಕೆಯಯನ್ನು ನನ್ನ ಯೂಟ್ಯೂಬ್‌ ಚಾನೆಲ್ಲಿನಲ್ಲಿ ವೀಕ್ಷಿಸಿ… ಧನ್ಯವಾದಗಳೊಂದಿಗೆ, ಗುಬ್ಬಚ್ಚಿ ...