ಗುರುವಾರ, ಫೆಬ್ರವರಿ 9, 2012

ನದಿಗೆ ಬೇಕಿರಲಿಲ್ಲ ಸಾವು.

ಆತುರದಿ ತವರುಮನೆ ತೊರೆದು
ಸಿಕ್ಕ ಸಿಕ್ಕ ಜಾಗಗಳಲ್ಲಿ ಹರಿದು
ಅನ್ನದಾತನಿಗೆ ಉಸಿರು ಬಸಿದು
ಪಾಪಿಗಳ ತನುವ ತೊಳೆದು
ದೇವರು ದೆವ್ವಗಳಿಗೂ ಮೋಕ್ಷಿಸಿ
ಅನಿಮೇಷೆಯಾಗಿ ಊರೂರು ಅಲೆಯುತ್ತಾ
ಸಿಟ್ಟು ಸೆಡವುಗಳಿದ್ದರೂ
ಹೆಣಗಳನ್ನು ಮುದ್ದಾಡಿ, ಹೆತ್ತಾಡಿ
ಹುಟ್ಟಿದ ಕ್ಷಣ-ಕಣಗಳಿಂದಲೂ
ತನ್ನವನಲ್ಲದ ಮಾನವಗೆ ನೀರುಣಿಸಿ
ಜಾಗತೀಕರಣದ ವಿಷವ ನುಂಗಿ
ವಿಷವುಣ್ಣಿಸಿದವನಿಗೇ ಮೊಲೆಯೆರೆದು
ತಪ್ಪು ತನ್ನದಲ್ಲವೆಂಬ ಅರಿವಿದ್ದರೂ
ಎತ್ತಿಗೆ ಜ್ವರ, ಎಮ್ಮೆಗೆ ಬರೆ ಹಾಕುವ
ಹುಲುಮಾನವನ ಮನಸ್ಥಿತಿಯನ್ನರಿಯದೆ
ಕಡಲಿಗೆ ಧುಮ್ಮಿಕ್ಕಿ, ಹಾರಿಕೊಂಡು
ಆತ್ಮಾಹುತಿ ಮಾಡಿಕೊಳ್ಳುವ ಸಾವು
ನದಿಗೆ ಬೇಕಿರಲಿಲ್ಲ!

(ನಮ್ಮೂರಿನ ಜಯಮಂಗಲಿ ನದಿಯ ನೆನಪಿಗೆ)

                            - ಗುಬ್ಬಚ್ಚಿ ಸತೀಶ್.

ಶನಿವಾರ, ಜನವರಿ 14, 2012

ಬರಲಿದೆ


ಮುಖಪುಟ ವಿನ್ಯಾಸ : ಅಜಿತ್ ಕೌಂಡಿನ್ಯ, ಶಿಡ್ಲಘಟ್ಟ

ಮುಖಪುಟ ಚಿತ್ರ : ಜಗದೀಶ್ ಟಿ.ಎಂ., ತುಮಕೂರು

ಕೈಬರಹ (ಸ್ನೇಹ ಮಾಡಬೇಕಿಂಥವಳ...) : ರಂಗಮ್ಮ ಹೊದೇಕಲ್.

ಬುಧವಾರ, ಡಿಸೆಂಬರ್ 14, 2011

ನನ್ನ ಜೀವಕೆ ಜೀವವಾದ ನೀನು ಅಮರ.


ಬಾನು ಭುವಿಗೆ ಇಳಿಸಿದ ಮೊದಲ ಮಳೆಗೆ
ಭುವಿಯು ಕೊಟ್ಟ ಹಸಿರ ಉಡುಗೊರೆಯ ಕಳೆಗೆ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.

ಮೊನ್ನೆತಾನೆ ನಾಡ ಗೌರಿಗೆ ಕಾಡ ಕಡವೆಯ
ಒಲಿದ ಪ್ರೀತಿಯ ಅದ್ಭುತ ಉಡುಗೊರೆ “ಚುಕ್ಕಿ”ಗೆ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.

ಮರಕ್ಕೊಂದು ಹಕ್ಕಿ, ಹಕ್ಕಿಗೊಂದು ಮರ
ಎಲ್ಲ ಜೀವಕೂ ದೇವರು ನೀಡಿದ ವರ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.

ನನ್ನ ಜೀವಕೆ ಜೀವವಾದ ನೀನು ಅಮರ.

                           - ಗುಬ್ಬಚ್ಚಿ ಸತೀಶ್.

ಅರ್ಜುನ V/s ಏಕಲವ್ಯ

ಅರ್ಜುನ V/s ಏಕಲವ್ಯ ಅರಿವೆಂಬ ಗುರುವನ್ನು ಮೊದಲು ಅರಿತವನು ಬಹುಶಃ ‘ಏಕಲವ್ಯ’ನೇ ಇರಬೇಕು. ಹೌದು, ನಮ್ಮ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದ ಏಕಲವ್ಯ! ನಿಮಗೆಲ್ಲಾ ಈತನ ಬಗ್ಗ...