ಆತುರದಿ ತವರುಮನೆ ತೊರೆದು
ಸಿಕ್ಕ ಸಿಕ್ಕ ಜಾಗಗಳಲ್ಲಿ ಹರಿದು
ಅನ್ನದಾತನಿಗೆ ಉಸಿರು ಬಸಿದು
ಪಾಪಿಗಳ ತನುವ ತೊಳೆದು
ದೇವರು ದೆವ್ವಗಳಿಗೂ ಮೋಕ್ಷಿಸಿ
ಅನಿಮೇಷೆಯಾಗಿ ಊರೂರು ಅಲೆಯುತ್ತಾ
ಸಿಟ್ಟು ಸೆಡವುಗಳಿದ್ದರೂ
ಹೆಣಗಳನ್ನು ಮುದ್ದಾಡಿ, ಹೆತ್ತಾಡಿ
ಹುಟ್ಟಿದ ಕ್ಷಣ-ಕಣಗಳಿಂದಲೂ
ತನ್ನವನಲ್ಲದ ಮಾನವಗೆ ನೀರುಣಿಸಿ
ಜಾಗತೀಕರಣದ ವಿಷವ ನುಂಗಿ
ವಿಷವುಣ್ಣಿಸಿದವನಿಗೇ ಮೊಲೆಯೆರೆದು
ತಪ್ಪು ತನ್ನದಲ್ಲವೆಂಬ ಅರಿವಿದ್ದರೂ
ಎತ್ತಿಗೆ ಜ್ವರ, ಎಮ್ಮೆಗೆ ಬರೆ ಹಾಕುವ
ಹುಲುಮಾನವನ ಮನಸ್ಥಿತಿಯನ್ನರಿಯದೆ
ಕಡಲಿಗೆ ಧುಮ್ಮಿಕ್ಕಿ, ಹಾರಿಕೊಂಡು
ಆತ್ಮಾಹುತಿ ಮಾಡಿಕೊಳ್ಳುವ ಸಾವು
ನದಿಗೆ ಬೇಕಿರಲಿಲ್ಲ!
(ನಮ್ಮೂರಿನ ಜಯಮಂಗಲಿ ನದಿಯ ನೆನಪಿಗೆ)
- ಗುಬ್ಬಚ್ಚಿ ಸತೀಶ್.
ಸಿಕ್ಕ ಸಿಕ್ಕ ಜಾಗಗಳಲ್ಲಿ ಹರಿದು
ಅನ್ನದಾತನಿಗೆ ಉಸಿರು ಬಸಿದು
ಪಾಪಿಗಳ ತನುವ ತೊಳೆದು
ದೇವರು ದೆವ್ವಗಳಿಗೂ ಮೋಕ್ಷಿಸಿ
ಅನಿಮೇಷೆಯಾಗಿ ಊರೂರು ಅಲೆಯುತ್ತಾ
ಸಿಟ್ಟು ಸೆಡವುಗಳಿದ್ದರೂ
ಹೆಣಗಳನ್ನು ಮುದ್ದಾಡಿ, ಹೆತ್ತಾಡಿ
ಹುಟ್ಟಿದ ಕ್ಷಣ-ಕಣಗಳಿಂದಲೂ
ತನ್ನವನಲ್ಲದ ಮಾನವಗೆ ನೀರುಣಿಸಿ
ಜಾಗತೀಕರಣದ ವಿಷವ ನುಂಗಿ
ವಿಷವುಣ್ಣಿಸಿದವನಿಗೇ ಮೊಲೆಯೆರೆದು
ತಪ್ಪು ತನ್ನದಲ್ಲವೆಂಬ ಅರಿವಿದ್ದರೂ
ಎತ್ತಿಗೆ ಜ್ವರ, ಎಮ್ಮೆಗೆ ಬರೆ ಹಾಕುವ
ಹುಲುಮಾನವನ ಮನಸ್ಥಿತಿಯನ್ನರಿಯದೆ
ಕಡಲಿಗೆ ಧುಮ್ಮಿಕ್ಕಿ, ಹಾರಿಕೊಂಡು
ಆತ್ಮಾಹುತಿ ಮಾಡಿಕೊಳ್ಳುವ ಸಾವು
ನದಿಗೆ ಬೇಕಿರಲಿಲ್ಲ!
(ನಮ್ಮೂರಿನ ಜಯಮಂಗಲಿ ನದಿಯ ನೆನಪಿಗೆ)
- ಗುಬ್ಬಚ್ಚಿ ಸತೀಶ್.