ಶುಕ್ರವಾರ, ಜನವರಿ 14, 2011
ಚಳಿಗಾಲದ ಚುಟುಕುಗಳು
ಬೆಚ್ಚಗೆ
ಎಲ್ಲಾ ಕಾಲದಲ್ಲೂ
ಬೆಚ್ಚಗಿರಲು
ಹೆಂಗಸರಿಗೆ ನೈಟಿ!!
ಗಂಡಸರಿಗೆ ನೈಂಟಿ!
ಮುತ್ತಿನ ಅರ್ಥ
ನೀ ಕೊಟ್ಟ ಮುತ್ತು
ಹೇಳುತ್ತಿದೆ ಸಾವಿರಾರು ಅರ್ಥ
ಮೊದಲರ್ಥ ಮುತ್ತಿನ ಮತ್ತು!
ಉಳಿದೆಲ್ಲಾರ್ಥ ಮತ್ತಿನ ಗಮ್ಮತ್ತು!!
ತಬ್ಬಲಿ
ನಲ್ಲೆ,
ನೀ ನನ್ನ ಮೈ ತಡವಿದರೆ
ನಾ ಹೆಬ್ಬುಲಿ!
ನಲ್ಲೆ,
ನೀ ನನ್ನ ಮೈ ಕೊಡವಿದರೆ
ನಾ ಯಾರ ತಬ್ಬಲಿ!
ಮಿಲನ
ಆಗಸಕ್ಕೆ ತಿಳಿನೀಲಿ
ಕಾಮನಬಿಲ್ಲಿಗೆ ಚಿತ್ತಾರ
ಮಗುವಿಗೆ ನಗುವು
ಗುಲಾಬಿಗೆ ಕೆಂಬಣ್ಣ
ನದಿಗೆ ಹರಿವು
ಪ್ರಕೃತಿಗೆ ಹಸಿರು
ನಮ್ಮ ಮಿಲನ!
- ಗುಬ್ಬಚ್ಚಿ ಸತೀಶ್.
ಶುಕ್ರವಾರ, ಜನವರಿ 7, 2011
ಸುಗ್ಗಿ ಪ್ರೀತಿ
ಹೊಸ ವರುಷದ ಸನಿಹದಲ್ಲಿ
ದಿವ್ಯ ಬೆಳಕಿನ ಸನ್ನಿಧಿಯಲ್ಲಿ
ಕಾದಿರುವೆ ನನ್ನ ಚೇತನವೆ
ನಿನಗಾಗಿ ನಿನಗಾಗಿ ನಿನಗಾಗಿ
ಹಳೇ ವರುಷದ ಚಿಗುರು
ಹೊಸ ವರುಷದಲಿ ಪೈರಾಗಿ
ತೆನೆ ತೆನೆಯಲೂ ಚಿಮ್ಮಲಿ
ಸಂಭ್ರಮ ಸುಗ್ಗಿಯ ಸಡಗರದಲ್ಲಿ
ಹೊಸ ವಸಂತ ಹೊಸ ದಿಗಂತ
ನನ್ನೆದೆಯ ನಿನ್ನೆದೆಯ ಕೋಗಿಲೆಗೆ
ಹೊಸ ದನಿಯಾಗಿ ಸೃಜಿಸಲಿ
ನಮ್ಮ ಪ್ರೀತಿಯು ಹಸಿರಾಗಲಿ.
- ಗುಬ್ಬಚ್ಚಿ ಸತೀಶ್
(ಈ ಕವನ ನಾನು ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನನ್ನ ನಲ್ಲೆಯ ಸೇವೆಯನ್ನು ನೋಡಿ ಬಿಲ್ ಹಿಂಭಾಗದಲ್ಲಿ ಬರೆದದ್ದು. ಪ್ರೇರಣೆ: ಜಿ.ಎಸ್.ಎಸ್ ರವರ "ಬೆಳಗು ಬಾ ಹಣತೆಯನು" ಕವನ. ಹೊಸವರ್ಷದ ಮತ್ತು ಸಂಕ್ರಾತಿಯ ಶುಭಾಷಯಗಳೊಂದಿಗೆ - ಗುಬ್ಬಚ್ಚಿ ಕುಟುಂಬ)
ದಿವ್ಯ ಬೆಳಕಿನ ಸನ್ನಿಧಿಯಲ್ಲಿ
ಕಾದಿರುವೆ ನನ್ನ ಚೇತನವೆ
ನಿನಗಾಗಿ ನಿನಗಾಗಿ ನಿನಗಾಗಿ
ಹಳೇ ವರುಷದ ಚಿಗುರು
ಹೊಸ ವರುಷದಲಿ ಪೈರಾಗಿ
ತೆನೆ ತೆನೆಯಲೂ ಚಿಮ್ಮಲಿ
ಸಂಭ್ರಮ ಸುಗ್ಗಿಯ ಸಡಗರದಲ್ಲಿ
ಹೊಸ ವಸಂತ ಹೊಸ ದಿಗಂತ
ನನ್ನೆದೆಯ ನಿನ್ನೆದೆಯ ಕೋಗಿಲೆಗೆ
ಹೊಸ ದನಿಯಾಗಿ ಸೃಜಿಸಲಿ
ನಮ್ಮ ಪ್ರೀತಿಯು ಹಸಿರಾಗಲಿ.
- ಗುಬ್ಬಚ್ಚಿ ಸತೀಶ್
(ಈ ಕವನ ನಾನು ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನನ್ನ ನಲ್ಲೆಯ ಸೇವೆಯನ್ನು ನೋಡಿ ಬಿಲ್ ಹಿಂಭಾಗದಲ್ಲಿ ಬರೆದದ್ದು. ಪ್ರೇರಣೆ: ಜಿ.ಎಸ್.ಎಸ್ ರವರ "ಬೆಳಗು ಬಾ ಹಣತೆಯನು" ಕವನ. ಹೊಸವರ್ಷದ ಮತ್ತು ಸಂಕ್ರಾತಿಯ ಶುಭಾಷಯಗಳೊಂದಿಗೆ - ಗುಬ್ಬಚ್ಚಿ ಕುಟುಂಬ)
ಶುಕ್ರವಾರ, ಡಿಸೆಂಬರ್ 24, 2010
ಜೀವ ಚೇತನ
ಜೀವ ಚೇತನದ ಆದ್ಯಂತ ಪಯಣಕೆ
ಹೆಜ್ಜೆಗೊಂದು ಸಡ್ಡು ಹೊಡೆದ ಸವಾಲು
ಬಿರುಗಾಳಿಗೆ ಸಿಲುಕಿದ ಗಾಳಿಪಟ ಮನ
ಯಾವ ಹಾದಿ, ಪರಿಹಾರಗಳೇ ವಿರಳ
ನಿರ್ಭಯತೆಯಿಂದ ಮುನ್ನುಗುತ್ತಿರು
ಹೊಸ ಅರುಣೋದಯವು ಗೋಚರಿಸಲಿ
ಕಟ್ಟು ಕಷ್ಟಗಳ ಮೂಟೆ, ಹೆಜ್ಜೆ ಮುಂದಿಡು
ಬದಲಾವಣೆ ಬಲುಕಷ್ಟ, ಅಚ್ಚರಿಯು ಕಾದಿದೆ
ನಿನೆಂದೂ ಗ್ರಹಿಸದ ತಿರುವಿದೆ ಮುಂದೆ
ಕಲ್ಪನೆಗೂ ನಿಲುಕದ ಕನಸು ನನಸಾಗಲಿದೆ
ಬಹುಶಃ ನಿನ್ನದೇ ಹೊಸಲೋಕ, ಅದ್ಬುತ!
ಬಹುದೂರವಾದರು ರಮಣೀಯ ದೃಶ್ಯಗಳು
ಒಲುಮೆಯ ಜನ, ಹಾರ್ದಿಕ ಶುಭಾಷಯಗಳು
ನಿನ್ನ ಕಥೆಗೆ, ಭಾವನೆಗಳಿಗೆ ಕಿವಿಗೊಡುವವರು
ನೀನಿಟ್ಟ ಹೆಜ್ಜೆಯ ಹಾದಿಗೆ ಹೂವಾದವರು
ಅಶ್ವಿನಿ ದೇವಂತೆಗಳಾದ ಜೀವದ ಗೆಳೆಯರು
ಇನ್ನೇಕೆ ಭಯ? ಒಂದೆಜ್ಜೆ ಮುಂದಿರಲಿ ಎಲ್ಲರಿಗಿಂತ
ಜೀವನದ ಅನುಕ್ಷಣವನ್ನು ಪ್ರೀತಿಸು
ಮುಂದಿನ ಹಾದಿಯಲ್ಲಿ ಎಲ್ಲ ಮರೆಸುವ ಮುಂಬೆಳಕಿದೆ
ಹಿಂತಿರುಗಿ ನೋಡದಿರು ನಿನ್ನ ದಾರಿ ಅದಲ್ಲ
ಹೆಜ್ಜೆಗೊಂದು ಸಡ್ಡು ಹೊಡೆದ ಸವಾಲು
ಬಿರುಗಾಳಿಗೆ ಸಿಲುಕಿದ ಗಾಳಿಪಟ ಮನ
ಯಾವ ಹಾದಿ, ಪರಿಹಾರಗಳೇ ವಿರಳ
ನಿರ್ಭಯತೆಯಿಂದ ಮುನ್ನುಗುತ್ತಿರು
ಹೊಸ ಅರುಣೋದಯವು ಗೋಚರಿಸಲಿ
ಕಟ್ಟು ಕಷ್ಟಗಳ ಮೂಟೆ, ಹೆಜ್ಜೆ ಮುಂದಿಡು
ಬದಲಾವಣೆ ಬಲುಕಷ್ಟ, ಅಚ್ಚರಿಯು ಕಾದಿದೆ
ನಿನೆಂದೂ ಗ್ರಹಿಸದ ತಿರುವಿದೆ ಮುಂದೆ
ಕಲ್ಪನೆಗೂ ನಿಲುಕದ ಕನಸು ನನಸಾಗಲಿದೆ
ಬಹುಶಃ ನಿನ್ನದೇ ಹೊಸಲೋಕ, ಅದ್ಬುತ!
ಬಹುದೂರವಾದರು ರಮಣೀಯ ದೃಶ್ಯಗಳು
ಒಲುಮೆಯ ಜನ, ಹಾರ್ದಿಕ ಶುಭಾಷಯಗಳು
ನಿನ್ನ ಕಥೆಗೆ, ಭಾವನೆಗಳಿಗೆ ಕಿವಿಗೊಡುವವರು
ನೀನಿಟ್ಟ ಹೆಜ್ಜೆಯ ಹಾದಿಗೆ ಹೂವಾದವರು
ಅಶ್ವಿನಿ ದೇವಂತೆಗಳಾದ ಜೀವದ ಗೆಳೆಯರು
ಇನ್ನೇಕೆ ಭಯ? ಒಂದೆಜ್ಜೆ ಮುಂದಿರಲಿ ಎಲ್ಲರಿಗಿಂತ
ಜೀವನದ ಅನುಕ್ಷಣವನ್ನು ಪ್ರೀತಿಸು
ಮುಂದಿನ ಹಾದಿಯಲ್ಲಿ ಎಲ್ಲ ಮರೆಸುವ ಮುಂಬೆಳಕಿದೆ
ಹಿಂತಿರುಗಿ ನೋಡದಿರು ನಿನ್ನ ದಾರಿ ಅದಲ್ಲ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಅರ್ಜುನ V/s ಏಕಲವ್ಯ
ಅರ್ಜುನ V/s ಏಕಲವ್ಯ ಅರಿವೆಂಬ ಗುರುವನ್ನು ಮೊದಲು ಅರಿತವನು ಬಹುಶಃ ‘ಏಕಲವ್ಯ’ನೇ ಇರಬೇಕು. ಹೌದು, ನಮ್ಮ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದ ಏಕಲವ್ಯ! ನಿಮಗೆಲ್ಲಾ ಈತನ ಬಗ್ಗ...
-
ಆತ್ಮೀಯರೇ, ’ನಿಮ್ಮೆಲ್ಲರ ಮಾನಸ’ ಕನ್ನಡ ಮಾಸಪತ್ರಿಕೆಯ ೧೦೦ ಸಂಚಿಕೆಗಳ ಸಂಭ್ರಮಕ್ಕೆ ಮತ್ತು ಪುಸ್ತಕಗಳ ಬಿಡುಗಡೆಗೆ ತಪ್ಪದೆ ಪ್ರೀತಿಯಿಂದ ಬನ್ನಿ... ಅಂದು ನನ್ನ ಕಾದಂ...