ಹೊಸ ವರುಷದ ಸನಿಹದಲ್ಲಿ
ದಿವ್ಯ ಬೆಳಕಿನ ಸನ್ನಿಧಿಯಲ್ಲಿ
ಕಾದಿರುವೆ ನನ್ನ ಚೇತನವೆ
ನಿನಗಾಗಿ ನಿನಗಾಗಿ ನಿನಗಾಗಿ
ಹಳೇ ವರುಷದ ಚಿಗುರು
ಹೊಸ ವರುಷದಲಿ ಪೈರಾಗಿ
ತೆನೆ ತೆನೆಯಲೂ ಚಿಮ್ಮಲಿ
ಸಂಭ್ರಮ ಸುಗ್ಗಿಯ ಸಡಗರದಲ್ಲಿ
ಹೊಸ ವಸಂತ ಹೊಸ ದಿಗಂತ
ನನ್ನೆದೆಯ ನಿನ್ನೆದೆಯ ಕೋಗಿಲೆಗೆ
ಹೊಸ ದನಿಯಾಗಿ ಸೃಜಿಸಲಿ
ನಮ್ಮ ಪ್ರೀತಿಯು ಹಸಿರಾಗಲಿ.
- ಗುಬ್ಬಚ್ಚಿ ಸತೀಶ್
(ಈ ಕವನ ನಾನು ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನನ್ನ ನಲ್ಲೆಯ ಸೇವೆಯನ್ನು ನೋಡಿ ಬಿಲ್ ಹಿಂಭಾಗದಲ್ಲಿ ಬರೆದದ್ದು. ಪ್ರೇರಣೆ: ಜಿ.ಎಸ್.ಎಸ್ ರವರ "ಬೆಳಗು ಬಾ ಹಣತೆಯನು" ಕವನ. ಹೊಸವರ್ಷದ ಮತ್ತು ಸಂಕ್ರಾತಿಯ ಶುಭಾಷಯಗಳೊಂದಿಗೆ - ಗುಬ್ಬಚ್ಚಿ ಕುಟುಂಬ)
ಶುಕ್ರವಾರ, ಜನವರಿ 7, 2011
ಶುಕ್ರವಾರ, ಡಿಸೆಂಬರ್ 24, 2010
ಜೀವ ಚೇತನ
ಜೀವ ಚೇತನದ ಆದ್ಯಂತ ಪಯಣಕೆ
ಹೆಜ್ಜೆಗೊಂದು ಸಡ್ಡು ಹೊಡೆದ ಸವಾಲು
ಬಿರುಗಾಳಿಗೆ ಸಿಲುಕಿದ ಗಾಳಿಪಟ ಮನ
ಯಾವ ಹಾದಿ, ಪರಿಹಾರಗಳೇ ವಿರಳ
ನಿರ್ಭಯತೆಯಿಂದ ಮುನ್ನುಗುತ್ತಿರು
ಹೊಸ ಅರುಣೋದಯವು ಗೋಚರಿಸಲಿ
ಕಟ್ಟು ಕಷ್ಟಗಳ ಮೂಟೆ, ಹೆಜ್ಜೆ ಮುಂದಿಡು
ಬದಲಾವಣೆ ಬಲುಕಷ್ಟ, ಅಚ್ಚರಿಯು ಕಾದಿದೆ
ನಿನೆಂದೂ ಗ್ರಹಿಸದ ತಿರುವಿದೆ ಮುಂದೆ
ಕಲ್ಪನೆಗೂ ನಿಲುಕದ ಕನಸು ನನಸಾಗಲಿದೆ
ಬಹುಶಃ ನಿನ್ನದೇ ಹೊಸಲೋಕ, ಅದ್ಬುತ!
ಬಹುದೂರವಾದರು ರಮಣೀಯ ದೃಶ್ಯಗಳು
ಒಲುಮೆಯ ಜನ, ಹಾರ್ದಿಕ ಶುಭಾಷಯಗಳು
ನಿನ್ನ ಕಥೆಗೆ, ಭಾವನೆಗಳಿಗೆ ಕಿವಿಗೊಡುವವರು
ನೀನಿಟ್ಟ ಹೆಜ್ಜೆಯ ಹಾದಿಗೆ ಹೂವಾದವರು
ಅಶ್ವಿನಿ ದೇವಂತೆಗಳಾದ ಜೀವದ ಗೆಳೆಯರು
ಇನ್ನೇಕೆ ಭಯ? ಒಂದೆಜ್ಜೆ ಮುಂದಿರಲಿ ಎಲ್ಲರಿಗಿಂತ
ಜೀವನದ ಅನುಕ್ಷಣವನ್ನು ಪ್ರೀತಿಸು
ಮುಂದಿನ ಹಾದಿಯಲ್ಲಿ ಎಲ್ಲ ಮರೆಸುವ ಮುಂಬೆಳಕಿದೆ
ಹಿಂತಿರುಗಿ ನೋಡದಿರು ನಿನ್ನ ದಾರಿ ಅದಲ್ಲ
ಹೆಜ್ಜೆಗೊಂದು ಸಡ್ಡು ಹೊಡೆದ ಸವಾಲು
ಬಿರುಗಾಳಿಗೆ ಸಿಲುಕಿದ ಗಾಳಿಪಟ ಮನ
ಯಾವ ಹಾದಿ, ಪರಿಹಾರಗಳೇ ವಿರಳ
ನಿರ್ಭಯತೆಯಿಂದ ಮುನ್ನುಗುತ್ತಿರು
ಹೊಸ ಅರುಣೋದಯವು ಗೋಚರಿಸಲಿ
ಕಟ್ಟು ಕಷ್ಟಗಳ ಮೂಟೆ, ಹೆಜ್ಜೆ ಮುಂದಿಡು
ಬದಲಾವಣೆ ಬಲುಕಷ್ಟ, ಅಚ್ಚರಿಯು ಕಾದಿದೆ
ನಿನೆಂದೂ ಗ್ರಹಿಸದ ತಿರುವಿದೆ ಮುಂದೆ
ಕಲ್ಪನೆಗೂ ನಿಲುಕದ ಕನಸು ನನಸಾಗಲಿದೆ
ಬಹುಶಃ ನಿನ್ನದೇ ಹೊಸಲೋಕ, ಅದ್ಬುತ!
ಬಹುದೂರವಾದರು ರಮಣೀಯ ದೃಶ್ಯಗಳು
ಒಲುಮೆಯ ಜನ, ಹಾರ್ದಿಕ ಶುಭಾಷಯಗಳು
ನಿನ್ನ ಕಥೆಗೆ, ಭಾವನೆಗಳಿಗೆ ಕಿವಿಗೊಡುವವರು
ನೀನಿಟ್ಟ ಹೆಜ್ಜೆಯ ಹಾದಿಗೆ ಹೂವಾದವರು
ಅಶ್ವಿನಿ ದೇವಂತೆಗಳಾದ ಜೀವದ ಗೆಳೆಯರು
ಇನ್ನೇಕೆ ಭಯ? ಒಂದೆಜ್ಜೆ ಮುಂದಿರಲಿ ಎಲ್ಲರಿಗಿಂತ
ಜೀವನದ ಅನುಕ್ಷಣವನ್ನು ಪ್ರೀತಿಸು
ಮುಂದಿನ ಹಾದಿಯಲ್ಲಿ ಎಲ್ಲ ಮರೆಸುವ ಮುಂಬೆಳಕಿದೆ
ಹಿಂತಿರುಗಿ ನೋಡದಿರು ನಿನ್ನ ದಾರಿ ಅದಲ್ಲ
ಮಂಗಳವಾರ, ಡಿಸೆಂಬರ್ 7, 2010
ಮಳೆಯಾಗು ನೀ... (ನಮ್ಮ ಮಗುವೆ)
ಮಿಂಚದಿರು ನೀನು
ಮಿಂಚಿದರೆ ಚೆಂದ
ಮಳೆಗೆ ಮುನ್ಸೂಚನೆ!
ಆದರೆ, ಆ ಬೆಳಕು
ಕ್ಷಣಿಕ ಸುಖ
ಮಿಂಚದಿರು ನೀನು
ಎಂದಿಗೂ ಗುಡುಗದಿರು
ಗುಡುಗೆಂದರೆ ಭಯ
ಮಳೆ ಶುರುವಾಗಬಹುದ?
ಆದರೆ, ಆ ಶಬ್ಧ
ಕ್ಷಣಿಕ ದುಃಖ
ಎಂದಿಗೂ ಗುಡುಗದಿರು
ಮಳೆ, ಮಳೆಯಾಗು ನೀ
ಮಳೆಯೆಂದರೆ ಬೆಳೆ
ಬದುಕು ಚಿಗುರುತ್ತದೆ!
ಆದರೆ, ಆ ಹಸಿರು
ಸುಃಖ ದುಃಖಗಳ ಬಸಿದು
ಹೆತ್ತವರ ಮನಕೆ ತಂಪೆರೆಯಲಿ
ಅತಿವೃಷ್ಠಿ-ಅನಾವೃಷ್ಠಿಯಾಗದ
ಮಳೆ, ಮಳೆಯಾಗು ನೀ...
---
ಮಿಂಚಿದರೆ ಚೆಂದ
ಮಳೆಗೆ ಮುನ್ಸೂಚನೆ!
ಆದರೆ, ಆ ಬೆಳಕು
ಕ್ಷಣಿಕ ಸುಖ
ಮಿಂಚದಿರು ನೀನು
ಎಂದಿಗೂ ಗುಡುಗದಿರು
ಗುಡುಗೆಂದರೆ ಭಯ
ಮಳೆ ಶುರುವಾಗಬಹುದ?
ಆದರೆ, ಆ ಶಬ್ಧ
ಕ್ಷಣಿಕ ದುಃಖ
ಎಂದಿಗೂ ಗುಡುಗದಿರು
ಮಳೆ, ಮಳೆಯಾಗು ನೀ
ಮಳೆಯೆಂದರೆ ಬೆಳೆ
ಬದುಕು ಚಿಗುರುತ್ತದೆ!
ಆದರೆ, ಆ ಹಸಿರು
ಸುಃಖ ದುಃಖಗಳ ಬಸಿದು
ಹೆತ್ತವರ ಮನಕೆ ತಂಪೆರೆಯಲಿ
ಅತಿವೃಷ್ಠಿ-ಅನಾವೃಷ್ಠಿಯಾಗದ
ಮಳೆ, ಮಳೆಯಾಗು ನೀ...
---
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಅಮೇಜಾನ್ "ಗ್ರೇಟ್ ಸಮ್ಮರ್ ಸೇಲ್"
ಸ್ನೇಹಿತರೇ, ಇಂದಿನಿಂದ ಅಮೇಜಾನ್ "ಗ್ರೇಟ್ ಸಮ್ಮರ್ ಸೇಲ್" ಶುರುವಾಗಿದ್ದು, ನಿಮಗೆ ಅಗತ್ಯವಿರುವ ವಸ್ತುಗಳನ್ನು ಹೆಚ್ಚಿನ ರಿಯಾಯಿತಿಯಲ್ಲಿ ಕೊಳ್ಳಲು ಸದಾವ...
-
ಆತ್ಮೀಯರೇ, ’ನಿಮ್ಮೆಲ್ಲರ ಮಾನಸ’ ಕನ್ನಡ ಮಾಸಪತ್ರಿಕೆಯ ೧೦೦ ಸಂಚಿಕೆಗಳ ಸಂಭ್ರಮಕ್ಕೆ ಮತ್ತು ಪುಸ್ತಕಗಳ ಬಿಡುಗಡೆಗೆ ತಪ್ಪದೆ ಪ್ರೀತಿಯಿಂದ ಬನ್ನಿ... ಅಂದು ನನ್ನ ಕಾದಂ...