ಶುಕ್ರವಾರ, ಜೂನ್ 3, 2011

ಬೇಕಾಗಿದ್ದಾರೆ.

ಅವಡುಗಚ್ಚಿ ಮೂಟೆಹೋರುವವರು
ಒಳಗೇನಿದೆ ಎಂದು ಕೇಳದವರು

ಅಂಟುಕೂತು ಕೀಬೋರ್ಡ್ ಕುಟ್ಟುವವರು
ದಣಿಯದ ಕಂಪ್ಯೂಟರ್‍ಗೆ ದಣಿಯದವರು

ಮಾತಿಗೆ ಮಾತು ಕೊಡದವರು
ಮಾತು ಬಂದರೂ ಮೂಕವಾದವರು

ಕಟ್ಟಿದ ಕೈ ಬಿಚ್ಚದವರು
ಆಗಾಗ ತಲೆ ಬಾಗುವವರು

ಕಿವಿಗಳಿಲ್ಲದೆ ಕವಿಗಳಾದವರು
ಮಾತಿನಲ್ಲೇ ಕಥೆ ಕಟ್ಟುವವರು

ಬಾಡಿಗೆಗೆ ಮಗುವ ಹೆರುವವರು
ಸಂಬಂಧಗಳ ಹಂಗಿಲ್ಲದೆ ಬದುಕುವವರು

ಸ್ವಾಭಿಮಾನದ ಹೆಸರು ಕೇಳದವರು
ಪ್ರಜಾಪ್ರಭುತ್ವ ಮರೆತಂತೆ ನಟಿಸುವವರು

ಅಘೋಷಿತ ದೊರೆಗಳಿಗೆ ಜೈ ಜೈ ಎನ್ನುವವರು
ಸಾಧಕರಲ್ಲದಿದ್ದರೂ ಥೈ ಥೈ ಕುಣಿಯುವವರು

ಮೇಲಿನ ಒಂದು ಅರ್ಹತೆ ನಿಮ್ಮದಾಗಿದ್ದರೆ
ಕ್ಷಮಿಸಿ, ಅರ್ಜಿ ಹಾಕುವ ಅವಶ್ಯಕತೆಯಿಲ್ಲ.

                                  - ಗುಬ್ಬಚ್ಚಿ ಸತೀಶ್.

ಸೋಮವಾರ, ಮೇ 23, 2011

ನಾವಿಬ್ಬರೂ ರೈಟ್ ಸೆಲೆಕ್ಷನ್ನೇ...


(ಪ್ರೀತಿಯ ಬ್ಲಾಗ್ ಮಿತ್ರರೆ, ಸಮಯದ ಅಭಾವದಿಂದ ಈ ಲೇಖನವನ್ನು ಸ್ಕ್ಯಾನ್ ಮಾಡಿ ಹಾಕಿದ್ದೇನೆ. ಓದಿ ಮರೆಯದೆ ಕಾಮೆಂಟಿಸಿ. ಈ ಲೇಖನವು ಏಪ್ರಿಲ್ ತಿಂಗಳ "ನಿಮ್ಮೆಲ್ಲರ ಮಾನಸ" ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ. ನನ್ನನ್ನು ಮತ್ತಷ್ಟು ಬರೆಯಲು ಪ್ರೋತ್ಸಾಹಿಸುತ್ತಿರುವ "ಆವಿ ಪುಸ್ತಕ ಮನೆ" ಬಳಗಕ್ಕೆ ಮತ್ತು ನಿಮಗೆ ನನ್ನ ವಂದನೆಗಳು.) 

ಭಾನುವಾರ, ಮೇ 8, 2011

ತುಂಟ ಮಗು



ಅಮ್ಮಾ ಅಮ್ಮಾ

ಪೆನ್ಸಿಲ್ ಕೊಡು

ಜೊತೆಗೆ ಒಂದು

ಹಾಳೆ ಕೊಡು


ಮಗುವೆ ಮಗುವೆ

ಚಂದದ ನಗುವೆ

ಪೆನ್ಸಿಲ್, ಹಾಳೆ

ಏಕೆ ಬೇಕು?


ನಿನ್ನಯ ಚಿತ್ರ

ನಾ ಬಿಡಿಸುವೆ

ಅಪ್ಪಗೆ ತೋರಿಸಿ

ಪಪ್ಪಿ ಕೊಡಿಸುವೆ!

      - ಗುಬ್ಬಚ್ಚಿ ಸತೀಶ್.

ಅರ್ಜುನ V/s ಏಕಲವ್ಯ

ಅರ್ಜುನ V/s ಏಕಲವ್ಯ ಅರಿವೆಂಬ ಗುರುವನ್ನು ಮೊದಲು ಅರಿತವನು ಬಹುಶಃ ‘ಏಕಲವ್ಯ’ನೇ ಇರಬೇಕು. ಹೌದು, ನಮ್ಮ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದ ಏಕಲವ್ಯ! ನಿಮಗೆಲ್ಲಾ ಈತನ ಬಗ್ಗ...