ಶನಿವಾರ, ಮಾರ್ಚ್ 22, 2025

ಕನ್ನಡ ಪುಸ್ತಕ ಸೊಗಸು ಬಹುಮಾನ

ಕನ್ನಡ ಪುಸ್ತಕ ಸೊಗಸು ಬಹುಮಾನ

ಸ್ನೇಹಿತರೇ,



ಕನ್ನಡ ಭಾಷೆಗೆ ಇರುವ ಸೊಗಸಿನಂತೆಯೇ, ಕನ್ನಡ ಪುಸ್ತಕಗಳಿಗೂ ಒಂದು ಸೊಗಸು, ವಿನ್ಯಾಸ ಇರುತ್ತದೆ. ನಿಮ್ಮ ಪುಸ್ತಕವು ಸೊಗಸಾಗಿದ್ದರೆ ಅದಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ "ಕನ್ನಡ ಪುಸ್ತಕ ಸೊಗಸು ಬಹುಮಾನ"ವು ಲಭ್ಯವಾಗುವ ಅವಕಾಶಗಳಿರುತ್ತದೆ. 

ಆದ್ದರಿಂದ, ನೀವಿಗಲೇ ಅರ್ಜಿ ಸಲ್ಲಿಸಿ...




ವಿವರಗಳು ಕೆಳಕಂಡಂತೆ ಇದೆ:

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2022, 2023 ಮತ್ತು 2024ರ ಕ್ಯಾಲೆಂಡರ್ ವರ್ಷದಲ್ಲಿ (ಜನವರಿ ಯಿಂದ ಡಿಸೆಂಬರ್) ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ ವಿವಿಧ “ಕನ್ನಡ ಪುಸ್ತಕ ಸೊಗಸು ಬಹುಮಾನ”ಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಆಸಕ್ತ ಪ್ರಕಾಶಕರು /ಮುದ್ರಕರು/ ಕಲಾವಿದರು / ಲೇಖಕರುಗಳು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ, ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುದ್ರಣಾಲಯದ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು / ಚಿತ್ರ ಕಲಾವಿದರ ಪೂರ್ಣ ವಿಳಾಸ / ದೂರವಾಣಿ ಸಂಖ್ಯೆ – ಈ ಎಲ್ಲಾ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ದಿನಾಂಕ: 29.03.2025ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 – ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.

ಸಲ್ಲಿಸಲಾಗುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಹಾಗೂ ಕೊನೆಯ ದಿನಾಂಕ ಮುಗಿದ ನಂತರ ಬಂದ ಪುಸ್ತಕಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ:
ಆಡಳಿತಾಧಿಕಾರಿಗಳು,
ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ,
ಮೊದಲನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು -560002
ವೆಬ್ಸೈಟ್ https://kpp.karnataka.gov.in,
ದೂರವಾಣಿ ಸಂಖ್ಯೆ: 080-22484516 / 22107704 – ಇಲ್ಲಿ ಸಂಪರ್ಕಿಸಬಹುದಾಗಿದೆ.


ಮರೆಯಬೇಡಿ, ಇದೇ ತಿಂಗಳ 29 ಕಡೇ ದಿನ...


ಶುಭವಾಗಲಿ,
- ಗುಬ್ಬಚ್ಚಿ ಸತೀಶ್.


ಶುಕ್ರವಾರ, ಮಾರ್ಚ್ 21, 2025

ಕಾರಂತ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ

ಕಾರಂತ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ




ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನವು ಕೊಡಮಾಡುವ 28ನೇ ವರ್ಷದ ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಕೃತಿಗಳನ್ನು ಆಹ್ವಾನಿಸಿದೆ.

2020ರಿಂದ 2024ರ ಅವಧಿಯಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಕೃತಿಗಳನ್ನು ಪ್ರಕಾಶಕರು ಅಥವಾ ಲೇಖಕರು ಕಳುಹಿಸಬಹುದು. ಪುರಸ್ಕಾರವು ಪ್ರಶಸ್ತಿ ಫಲಕ ಮತ್ತು ರೂಪಾಯಿ 10 ಸಾವಿರ ನಗದು ಬಹುಮಾನ ಒಳಗೊಂಡಿದೆ. ಆಸಕ್ತರು ಗ್ರಂಥಗಳ ಮೂರು ಪ್ರತಿಗಳನ್ನು 20-04-2025ರ ಒಳಗಾಗಿ ಶಿವರಾಮ ಕಾರಂತ ಪ್ರತಿಷ್ಠಾನ, ಕನ್ನಡ ಭವನ, ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ 574227 ಈ ವಿಳಾಸಕ್ಕೆ ಕಳುಹಿಸಬಹುದು.

ಈ ಪ್ರಶಸ್ತಿಯ ವಿಶೇಷವೇನೆಂದರೆ, ನೀವು ಕೂಡ ನಿಮಗೆ ಇಷ್ಟವಾದ ಪುಸ್ತಕವನ್ನು ಈ ಪ್ರಶಸ್ತಿಗೆ ಶಿಫಾರಸ್ಸು ಮಾಡಬಹುದು.

2021ರ ಪುಸ್ತಕಗಳ ಅಯ್ಕೆ ಪಟ್ಟಿ...

 ಸ್ನೇಹಿತರೇ,


ಕನ್ನಡ ಪುಸ್ತಕಗಳನ್ನು ಕೊಳ್ಳಲು ಅಮೇಜಾನ್‌ ಲಿಂಕ್:‌ https://amzn.to/4hvShEL


ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ಮಟ್ಟದ ಆಯ್ಕೆ ಸಮಿತಿಯ 2021ರ ಸಾಲಿನ ಪುಸ್ತಕಗಳ ಪಟ್ಟಿ ಬಿಡುಗಡೆಯಾಗಿದೆ.


ಕನ್ನಡ ಪುಸ್ತಕಗಳ ಪಟ್ಟಿ...

https://dpl.karnataka.gov.in/storage/pdf-files/2021%20KANNADA%20BOOK%20Selection%20data1.pdf


ಇಂಗ್ಲೀಷ್‌ ಪುಸ್ತಕಗಳ ಪಟ್ಟಿ...

https://dpl.karnataka.gov.in/storage/pdf-files/2021EnglishList.pdf


ಹಿಂದಿ ಪುಸ್ತಕಗಳ ಪಟ್ಟಿ...

https://dpl.karnataka.gov.in/storage/pdf-files/2021HINDIList.pdf


ಇತರೆ ಭಾಷೆಗಳ ಪುಸ್ತಕಗಳ ಪಟ್ಟಿ...

https://dpl.karnataka.gov.in/storage/pdf-files/2021HINDIList.pdf

ನಮ್ಮ ಗೋಮಿನಿ ಪ್ರಕಾಶನದ ಆರು ಪುಸ್ತಕಗಳು ಆಯ್ಕೆಯಾಗಿದ್ದು, ಸಗಟು ಖರೀದಿ ನಿಂತು ಹೋಗಿದೆ ಎಂಬ ಸುದ್ಧಿ ಪ್ರಕಾಶನ ಮತ್ತು ಸಾಹಿತಿಗಳು ಖುಷಿ ಪಡುವ ಸಂಗತಿಯೇನಲ್ಲ.


ಧನ್ಯವಾದಗಳೊಂದಿಗೆ,

- ಗುಬ್ಬಚ್ಚಿ ಸತೀಶ್.


"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...