ಜೀವ ಚೇತನದ ಆದ್ಯಂತ ಪಯಣಕೆ
ಹೆಜ್ಜೆಗೊಂದು ಸಡ್ಡು ಹೊಡೆದ ಸವಾಲು
ಬಿರುಗಾಳಿಗೆ ಸಿಲುಕಿದ ಗಾಳಿಪಟ ಮನ
ಯಾವ ಹಾದಿ, ಪರಿಹಾರಗಳೇ ವಿರಳ
ನಿರ್ಭಯತೆಯಿಂದ ಮುನ್ನುಗುತ್ತಿರು
ಹೊಸ ಅರುಣೋದಯವು ಗೋಚರಿಸಲಿ
ಕಟ್ಟು ಕಷ್ಟಗಳ ಮೂಟೆ, ಹೆಜ್ಜೆ ಮುಂದಿಡು
ಬದಲಾವಣೆ ಬಲುಕಷ್ಟ, ಅಚ್ಚರಿಯು ಕಾದಿದೆ
ನಿನೆಂದೂ ಗ್ರಹಿಸದ ತಿರುವಿದೆ ಮುಂದೆ
ಕಲ್ಪನೆಗೂ ನಿಲುಕದ ಕನಸು ನನಸಾಗಲಿದೆ
ಬಹುಶಃ ನಿನ್ನದೇ ಹೊಸಲೋಕ, ಅದ್ಬುತ!
ಬಹುದೂರವಾದರು ರಮಣೀಯ ದೃಶ್ಯಗಳು
ಒಲುಮೆಯ ಜನ, ಹಾರ್ದಿಕ ಶುಭಾಷಯಗಳು
ನಿನ್ನ ಕಥೆಗೆ, ಭಾವನೆಗಳಿಗೆ ಕಿವಿಗೊಡುವವರು
ನೀನಿಟ್ಟ ಹೆಜ್ಜೆಯ ಹಾದಿಗೆ ಹೂವಾದವರು
ಅಶ್ವಿನಿ ದೇವಂತೆಗಳಾದ ಜೀವದ ಗೆಳೆಯರು
ಇನ್ನೇಕೆ ಭಯ? ಒಂದೆಜ್ಜೆ ಮುಂದಿರಲಿ ಎಲ್ಲರಿಗಿಂತ
ಜೀವನದ ಅನುಕ್ಷಣವನ್ನು ಪ್ರೀತಿಸು
ಮುಂದಿನ ಹಾದಿಯಲ್ಲಿ ಎಲ್ಲ ಮರೆಸುವ ಮುಂಬೆಳಕಿದೆ
ಹಿಂತಿರುಗಿ ನೋಡದಿರು ನಿನ್ನ ದಾರಿ ಅದಲ್ಲ
ಶುಕ್ರವಾರ, ಡಿಸೆಂಬರ್ 24, 2010
ಮಂಗಳವಾರ, ಡಿಸೆಂಬರ್ 7, 2010
ಮಳೆಯಾಗು ನೀ... (ನಮ್ಮ ಮಗುವೆ)
ಮಿಂಚದಿರು ನೀನು
ಮಿಂಚಿದರೆ ಚೆಂದ
ಮಳೆಗೆ ಮುನ್ಸೂಚನೆ!
ಆದರೆ, ಆ ಬೆಳಕು
ಕ್ಷಣಿಕ ಸುಖ
ಮಿಂಚದಿರು ನೀನು
ಎಂದಿಗೂ ಗುಡುಗದಿರು
ಗುಡುಗೆಂದರೆ ಭಯ
ಮಳೆ ಶುರುವಾಗಬಹುದ?
ಆದರೆ, ಆ ಶಬ್ಧ
ಕ್ಷಣಿಕ ದುಃಖ
ಎಂದಿಗೂ ಗುಡುಗದಿರು
ಮಳೆ, ಮಳೆಯಾಗು ನೀ
ಮಳೆಯೆಂದರೆ ಬೆಳೆ
ಬದುಕು ಚಿಗುರುತ್ತದೆ!
ಆದರೆ, ಆ ಹಸಿರು
ಸುಃಖ ದುಃಖಗಳ ಬಸಿದು
ಹೆತ್ತವರ ಮನಕೆ ತಂಪೆರೆಯಲಿ
ಅತಿವೃಷ್ಠಿ-ಅನಾವೃಷ್ಠಿಯಾಗದ
ಮಳೆ, ಮಳೆಯಾಗು ನೀ...
---
ಮಿಂಚಿದರೆ ಚೆಂದ
ಮಳೆಗೆ ಮುನ್ಸೂಚನೆ!
ಆದರೆ, ಆ ಬೆಳಕು
ಕ್ಷಣಿಕ ಸುಖ
ಮಿಂಚದಿರು ನೀನು
ಎಂದಿಗೂ ಗುಡುಗದಿರು
ಗುಡುಗೆಂದರೆ ಭಯ
ಮಳೆ ಶುರುವಾಗಬಹುದ?
ಆದರೆ, ಆ ಶಬ್ಧ
ಕ್ಷಣಿಕ ದುಃಖ
ಎಂದಿಗೂ ಗುಡುಗದಿರು
ಮಳೆ, ಮಳೆಯಾಗು ನೀ
ಮಳೆಯೆಂದರೆ ಬೆಳೆ
ಬದುಕು ಚಿಗುರುತ್ತದೆ!
ಆದರೆ, ಆ ಹಸಿರು
ಸುಃಖ ದುಃಖಗಳ ಬಸಿದು
ಹೆತ್ತವರ ಮನಕೆ ತಂಪೆರೆಯಲಿ
ಅತಿವೃಷ್ಠಿ-ಅನಾವೃಷ್ಠಿಯಾಗದ
ಮಳೆ, ಮಳೆಯಾಗು ನೀ...
---
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಇದು ಅಪ್ಪಟ ಕನ್ನಡದ "ಪಂಚತಂತ್ರ"
'ಪಂಚತಂತ್ರʼ ಅಂದರೆ ನಮ್ಮ ನೆನಪಿಗೆ ಬರುವುದು ಬಾಲ್ಯ ಕಾಲದಲ್ಲಿ ಓದಿದ್ದ ಅಥವಾ ಕೇಳಿದ್ದ ಯಾವುದೋ ಒಂದು ಅಥವಾ ಹಲವು ಕತೆಗಳು. ಎಷ್ಟೊಂದು ಖುಷಿ ಮತ್ತು ಜ್ಞಾನವನ್ನೂ ಈ ...
-
ಆತ್ಮೀಯರೇ, ’ನಿಮ್ಮೆಲ್ಲರ ಮಾನಸ’ ಕನ್ನಡ ಮಾಸಪತ್ರಿಕೆಯ ೧೦೦ ಸಂಚಿಕೆಗಳ ಸಂಭ್ರಮಕ್ಕೆ ಮತ್ತು ಪುಸ್ತಕಗಳ ಬಿಡುಗಡೆಗೆ ತಪ್ಪದೆ ಪ್ರೀತಿಯಿಂದ ಬನ್ನಿ... ಅಂದು ನನ್ನ ಕಾದಂ...