ಶನಿವಾರ, ಆಗಸ್ಟ್ 6, 2011

“ಜೀವನದಲ್ಲಿ ಸ್ನೇಹಿತರಲ್ಲ. ಸ್ನೇಹಿತರಿಂದಲೇ ಜೀವನ”

ಗೆಳೆತನ ಕುರಿತ
ಕನ್ನಡದ ಕೆಲವು ಸಾಲುಗಳು :

“ಜೀವನದಲ್ಲಿ ಸ್ನೇಹಿತರಲ್ಲ. ಸ್ನೇಹಿತರಿಂದಲೇ ಜೀವನ”
                  - ಗೆಳೆಯನೊಬ್ಬನ ಡೈರಿಯ ಮೊದಲ ಪುಟದಿಂದ.
                    (ನನ್ನ ಜೀವನಕ್ಕೆ ಹೆಚ್ಚು ಅನ್ವಯ)

“ನೀ ಹುಟ್ಟಿದಾಗ ಧಾರಾಕಾರ ಮಳೆ ಬೀಳುತ್ತಿತ್ತು.
ಯಾಕಂತ ಗೊತ್ತಾ?
ನಕ್ಷತ್ರವೊಂದನ್ನು ಕಳಿಸಿಕೊಡುವಾಗ ಬಾನು ಅಳುತ್ತಿತ್ತು.
ಸುಂದರ ನಕ್ಷತ್ರವೊಂದರ ಸ್ನೇಹ ಪಡೆದ ನಾನು ಅದೃಷ್ಟಶಾಲಿ.”
                   - ಬರೆದವರು ಗೊತ್ತಿಲ್ಲ.

“ಗೆಳೆತನವೆಂಬುದು ಆಶ್ರಯ ನೀಡುವ ಒಂದು ಬೃಹತ್ ವೃಕ್ಷ”
                   - ಸ್ಯಾಮ್ಯುಯಲ್ ಟೇಲರ್ ಕೋಲರಿಜ್.

“ನಾವು ಆಡುವ ಮಾತು ಹೀಗಿರಲಿ ಗೆಳೆಯಾ, ಮೃದುವಚನ
ಮೂರ್ಲೋಕ ಗೆಲ್ಲುವುದು ತಿಳಿಯಾ, ಮೌನ ಮೊಗ್ಗೆಯನೊಡೆದು
ಮಾತರಳಿ ಬರಲಿ. ಮೂರು ದಿನಗಳ ಬಾಳು ಘಮಘಮಿಸುತಿರಲಿ”
                    - ಚೆನ್ನವೀರ ಕಣವಿ.

ನನ್ನವೆರಡು :

“ನನಗೆ ದೇವರ ಮೇಲೆ ನಂಬಿಕೆಯಿದೆ. ಏಕೆಂದರೆ?
ನಾನು ದೇವರನ್ನು ಗೆಳೆಯರ ರೂಪದಲ್ಲಿ ನೋಡಿದ್ದೇನೆ”
                    - ಗುಬ್ಬಚ್ಚಿ ಸತೀಶ್.

“ನನ್ನೆಲ್ಲಾ ನೋವುಗಳನ್ನು ನೆನೆದು ಇನ್ನೇನು ಅಳಬೇಕು,
ಅಷ್ಟರಲ್ಲಿ ಅದ್ಯಾವ ಮಾಯೆಯಲ್ಲಿ ಬಂದರೋ ಗೆಳೆಯರು!
ಕಚಗುಳಿಯಿಟ್ಟು ನನ್ನನ್ನು ಮನ ತುಂಬಾ ನಗಿಸಿದರು.
ಬಂದ ದಾರಿಗೆ ಸುಂಕವಿಲ್ಲವೆಂದು ಅಳುವು ಕೊರಗಿ ಸತ್ತಿತು”.
                    - ಗುಬ್ಬಚ್ಚಿ ಸತೀಶ್.

ಇಂಗ್ಲಿಷಿನವೆರಡು :

“Come, fair friend.
  you never can
  be old
  for as you were
  when first your
  eyes eyed
  such is your beauty still.”
        - Shakespeare

“Friends are the most important
  ingredient in this recipe of life.”
        - Writer Unknown.


“MY FRIENDS, WISH YOU ALL HAPPY FRIENDSHIP DAY”













5 ಕಾಮೆಂಟ್‌ಗಳು:

  1. ಪ್ರೀತಿಯ ಸತೀಶು..

    ಗೆಳೆತನ ದಿನದ ಶುಭಾಶಯಗಳು... ಜೈ ಹೋ.. !!

    ಪ್ರತ್ಯುತ್ತರಅಳಿಸಿ
  2. ಗೆಳೆತನವೂ ಇಲ್ಲದ ಬದುಕು ಬರಡು ಕಾಡು.
    ನಿಮ್ಮ ಗೆಳೆತನ ನನ್ನ ಎದೆಯಲಿ ಚಿರಾಯು.

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    ಪ್ರತ್ಯುತ್ತರಅಳಿಸಿ

ಇದು ಭಾರತದ “ಅಮೃತ ಕಾಲ”ವೇ!?

  ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ. ʼಭಾರತ ಬದಲಾಗಿದೆ! ಯಾರದ್ದ...